ಕರ್ನಾಟಕ to ಯುಪಿ; ರಾಜ್ಯಗಳ ಲಸಿಕೆ ಅಭಿಯಾನ ಇತರ ರಾಷ್ಟ್ರಗಳಿಗಿಂತ ವೇಗ!

Published : Sep 10, 2021, 05:53 PM ISTUpdated : Sep 10, 2021, 06:24 PM IST
ಕರ್ನಾಟಕ to ಯುಪಿ; ರಾಜ್ಯಗಳ ಲಸಿಕೆ ಅಭಿಯಾನ ಇತರ ರಾಷ್ಟ್ರಗಳಿಗಿಂತ ವೇಗ!

ಸಾರಾಂಶ

ಕರ್ನಾಟಕ, ಉತ್ತರ ಪ್ರದೇಶ ಸೇರಿ ರಾಜ್ಯಗಳಲ್ಲಿ ಮಿಂಚಿನ ಲಸಿಕೆ ಅಭಿಯಾನ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಇತರ ರಾಷ್ಟ್ರಗಳು ಅಭಿಯಾನದಲ್ಲಿ ಹಿಂದೆ ಜನಸಂಖ್ಯೆ ಆಧಾರದಲ್ಲಿ ಇತರ ರಾಷ್ಟ್ರಗಳಿಗೆ ಹೋಲಿಕೆ, ಇಲ್ಲಿದೆ ಅಂಕಿ ಅಂಶ  

ನವದೆಹಲಿ(ಸೆ.10): ಕೊರೋನಾ ವೈರಸ್ ವಿರುದ್ಧ ಭಾರತ ಶಕ್ತವಾಗಿ ಹೋರಾಡುತ್ತಿದೆ. ಇದಕ್ಕೆ ಕಾರಣ ಜನವರಿಯಿಂದ ಭಾರತ ದೇಶದಲ್ಲಿ ಲಸಿಕೆ ಅಭಿಯಾನ ಆರಂಭಿಸಿದೆ. ಇದರ ಜೊತೆಗೆ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯ ಹೆಚ್ಚಿಸಿದೆ. ವೈದ್ಯಕೀಯ ಸೌಲಭ್ಯ ಹಾಗೂ ಸಲಕರಣೆಗಳು ಹಾಗೂ ಸೇವೆಯನ್ನು ಮೇಲ್ದರ್ಜೆಗೆ ಏರಿಸಿದೆ. ಭಾರತ ಲಸಿಕಾ ಅಭಿಯಾನದಲ್ಲಿ ದಾಖಲೆ ಬರೆದಿದೆ.ಭಾರತದಲ್ಲಿನ ರಾಜ್ಯಗಳ ಲಸಿಕೆ ಅಭಿಯಾನ ವಿದೇಶಕ್ಕಿಂತ ಮುಂದಿದೆ.

ನಿತ್ಯ ದಾಖ​ಲೆಯ 1.25 ಕೋಟಿ ಡೋಸ್‌ ಲಸಿ​ಕೆ ನೀಡಿ​ಕೆ: ಮೋದಿ

ಭಾರತ ಲಸಿಕೆ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದೆ. ಇದರಿಂದ ಈಗಾಗಲೇ 71 ಕೋಟಿಗೂ ಅಧಿಕ ಡೋಸ್ ಹಾಕಲಲಾಗಿದೆ. ಇದರಲ್ಲಿ ರಾಜ್ಯಗಳು ಪ್ರತಿ ದಿನ ದಾಖಲೆ ಪ್ರಮಾಣದಲ್ಲಿ ಲಸಿಕೆ ವಿತರಣೆ ಮಾಡುತ್ತಿದೆ. ರಾಜ್ಯಗಳು ಪ್ರತಿ ದಿನ ನೀಡುವ ಲಸಿಕೆ ಪ್ರಮಾಣ ಇತರ ರಾಷ್ಟ್ರಗಳ ಪ್ರತಿ ದಿನದ ಲಸಿಕೆ ಅಭಿಯಾನಕ್ಕಿಂತ ಹೆಚ್ಚಿದೆ.

ಸರಿಸುಮಾರು ಹೋಲಿಕೆಯಾಗುವ ಜನಸಂಖ್ಯೆ ಅಧಾರದಲ್ಲಿ ಭಾರತದ ರಾಜ್ಯಗಳು ಹಾಗೂ ಇತರ ರಾಷ್ಟ್ರಗಳ ಹೋಲಿಕೆ ಮಾಡಲಾಗಿದೆ. ಈ ಅಂಕಿ ಅಂಶದಲ್ಲಿ ಉತ್ತರ ಪ್ರದೇಶ ಪ್ರತಿ ದಿನ ಸರಾಸರಿ 11.73 ಲಕ್ಷ ಡೋಸ್ ನೀಡುತ್ತಿದೆ. ಇನ್ನು ಸರಿಸುಮಾರು ಇಷ್ಟೆ ಜನಂಖ್ಯೆ ಇರುವ ಅಮರಿಕದಲ್ಲಿ ಪ್ರತಿ ದಿನ ನೀಡುವ ಡೋಸ್ ಪ್ರಮಾಣ 8.07 ಲಕ್ಷ.

ಕೋವಿಶೀಲ್ಡ್ 2ನೇ ಡೋಸ್ ಅಂತರವನ್ನು 84 ದಿನದಿಂದ 1 ತಿಂಗಳಿಗೆ ಇಳಿಸಿದ ಕೇರಳ ಹೈಕೋರ್ಟ್!

ಗುಜರಾತ್ ಪ್ರತಿ ದಿನ ಸರಾಸರಿ 4.80 ಲಕ್ಷ ಡೋಸ್ ನೀಡುತ್ತಿದೆ. ಇನ್ನು ಮೆಕ್ಸಿಕೋ ಪ್ರತಿ ದಿನ 4.56 ಲಕ್ಷ ಡೋಸ್ ನೀಡುತ್ತಿದೆ. ಇನ್ನು ಕರ್ನಾಟಕ ಪ್ರತಿ ದಿನ ಸರಾಸರಿ 3.83 ಲಕ್ಷ ಡೋಸ್ ನೀಡುತ್ತಿದೆ. ಇನ್ನು ರಷ್ಯಾ 3.68 ಲಕ್ಷ ಡೋಸ್ ನೀಡುತ್ತಿದೆ. ಮಧ್ಯ ಪ್ರದೇಶ 3.71 ಲಕ್ಷ ಡೋಸ್ ನೀಡಿದರೆ ಫ್ರಾನ್ಸ್ ಪ್ರತಿ ದಿನ ಸರಾಸರಿ 2.84 ಲಕ್ಷ ಡೋಸ್ ಲಸಿಕೆ ನೀಡುತ್ತಿದೆ. ಹರ್ಯಾಣ ಪ್ರತಿ ದಿನ 1.52 ಲಕ್ಷ ಲಸಿಕೆ ನೀಡುತ್ತಿದ್ದರೆ, ಕೆನಡ 82 ಸಾವಿರ ಲಸಿಕೆ ನೀಡುತ್ತಿದೆ.  

ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಪ್ರತಿ ದಿನ ಭಾರತದಲ್ಲಿ ರಾಜ್ಯಗಳು ನೀಡುತ್ತಿರುವ ಲಸಿಕೆ ಪ್ರಮಾಣ ಹೆಚ್ಚಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಇತರ ರಾಷ್ಟ್ರಗಳಿಗಿಂತ ಹೆಚ್ಚಿನ ಮುತುವರ್ಜಿಯಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ಕೊರೋನಾ ಲಸಿಕೆ ಅಂಕಿ ಅಂಶಗಳೇ ಸಾಕ್ಷಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್