ಭಾರತದ ಕೇಸರಿಗೀಗ ಬಂಗಾರದ ದರ; 1 ಕೆಜಿ ಕೇಸರಿ ಬೆಲೆ 5 ಲಕ್ಷಕ್ಕೆ ಹತ್ತಿರ!

Published : May 12, 2024, 04:31 PM IST
ಭಾರತದ ಕೇಸರಿಗೀಗ ಬಂಗಾರದ ದರ; 1 ಕೆಜಿ ಕೇಸರಿ ಬೆಲೆ 5 ಲಕ್ಷಕ್ಕೆ ಹತ್ತಿರ!

ಸಾರಾಂಶ

ವಿಶ್ವದಲ್ಲೇ ಅತಿ ದುಬಾರಿ ಮಸಾಲೆ ಎಂಬ ಪಟ್ಟ ಗಳಿಸಿರುವ ಕೇಸರಿಯ ಬೆಲೆ ಗಗನಕ್ಕೇರಿದೆ. ಹತ್ತಿರತ್ತಿರ 5 ಲಕ್ಷ ರೂ. 1 ಕೆಜಿಯ ದರವಾಗಿದ್ದು, ಈ ಮಟ್ಟಕ್ಕೆ ಬೆಲೆಯೇರಲು ಕಾರಣವಿಲ್ಲಿದೆ.

ವಿಶ್ವದ ಅತ್ಯಂತ ದುಬಾರಿ ಮಸಾಲೆಯಾದ ಕೇಸರಿ ಬೆಲೆಯು ಆಕಾಶಕ್ಕೇರಿದೆ. ಪ್ರತಿ ಕೆಜಿ ಕೇಸರಿ 4.95 ಲಕ್ಷ ರೂಪಾಯಿಗಳಿಗೆ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ. 

ಕಳೆದ ಒಂದು ತಿಂಗಳಿನಿಂದ ಸಗಟು ಮಾರುಕಟ್ಟೆಯಲ್ಲಿ ಭಾರತೀಯ ಕೇಸರಿ ಬೆಲೆ 20% ಮತ್ತು ಚಿಲ್ಲರೆ ವ್ಯಾಪಾರದಲ್ಲಿ 27% ರಷ್ಟು ಹೆಚ್ಚಾಗಿದೆ. ಇರಾನ್‌ನಿಂದ ಕೇಸರಿ ಪೂರೈಕೆಯಲ್ಲಿನ ಕುಸಿತವು ಕೇಸರಿ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ.

'ಉತ್ತಮ ಗುಣಮಟ್ಟದ ಭಾರತೀಯ ಕೇಸರಿ ಈಗ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 3.5-3.6 ಲಕ್ಷಕ್ಕೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟದಲ್ಲಿ ಇದರ ಬೆಲೆ ಕೆಜಿಗೆ 4.95 ಲಕ್ಷ ರೂ.' ಎಂದು ವರದಿ ಹೇಳಿದೆ.

ತಾಯಂದಿರ ದಿನ; ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ; ಹೊಸ ಹೆಸರೇನು?
 

ಇರಾನ್ ವಿಶ್ವದ ಅತಿ ದೊಡ್ಡ ಕೇಸರಿ ಉತ್ಪಾದಕ ದೇಶವಾಗಿದೆ ಮತ್ತು ಸುಮಾರು 430 ಟನ್‌ಗಳಷ್ಟು ವಾರ್ಷಿಕ ಉತ್ಪಾದನೆಯನ್ನು ಹೊಂದಿದೆ. ಇದು ಕೇಸರಿಯ ಜಾಗತಿಕ ಉತ್ಪಾದನೆಯ ಸುಮಾರು 90% ರಷ್ಟಿದೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ಕೇಸರಿ ಕಾಶ್ಮೀರದಲ್ಲಿ ಬೆಳೆಯಲಾಗುತ್ತದೆ, ಆದರೆ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

ಕಾಶ್ಮೀರದಲ್ಲಿ ಕೇಸರಿ ಕೃಷಿ
'ಕೆಂಪು ಚಿನ್ನ' ಎಂದೂ ಕರೆಯಲ್ಪಡುವ ಕೇಸರಿಯನ್ನು ಕಾಶ್ಮೀರದಲ್ಲಿ ಕೇವಲ 5,707 ಹೆಕ್ಟೇರ್ ಭೂಮಿಯಲ್ಲಿ ಬೆಳೆಯಲಾಗುತ್ತದೆ. ಇದರಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಂಪೋರ್ ತೆಹಸಿಲ್‌ನಲ್ಲಿದ್ದರೆ ಉಳಿದವು ಮಧ್ಯ ಕಾಶ್ಮೀರದ ಬುದ್ಗಾಮ್ ಮತ್ತು ಶ್ರೀನಗರ ಜಿಲ್ಲೆಗಳಲ್ಲಿದೆ.

ಗೊತ್ತುಗುರಿ ಇಲ್ದೆ ಖಾತೆಗೆ 6.3 ಕೋಟಿ ಬಂತು ಅಂತಾ ಹಿಂಗಾ ಮಾಡೋದು ಇವ್ಳು?!

ಕಾಶ್ಮೀರ ಕೇಸರಿಯನ್ನು ವರ್ಷಕ್ಕೊಮ್ಮೆ ಅಂದರೆ ಅಕ್ಟೋಬರ್ ಅಂತ್ಯದಿಂದ ನವೆಂಬರ್ ಮಧ್ಯದವರೆಗೆ ಕೊಯ್ಲು ಮಾಡಲಾಗುತ್ತದೆ ಮತ್ತು ಒಂದು ಕಿಲೋಗ್ರಾಂ ಮಸಾಲೆಯನ್ನು ಪಡೆಯಲು 150,000 ಕ್ಕಿಂತ ಹೆಚ್ಚು ಹೂವುಗಳು ಬೇಕಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ, ಹೆಚ್ಚುತ್ತಿರುವ ವೆಚ್ಚಗಳು ಮತ್ತು ಹವಾಮಾನ ಬದಲಾವಣೆ ಕಾರಣದಿಂದ ಕಣಿವೆಯ ಅನೇಕ ರೈತರು ಕೇಸರಿ ಕೃಷಿಯನ್ನು ತ್ಯಜಿಸಿದ್ದಾರೆ. ಈ ಎಲ್ಲ ಕಾರಣದಿಂದ ಕೇಸರಿಯ ಬೆಲೆ ಏರುತ್ತಲೇ ಇದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು