ಉಪನ್ಯಾಸ ನೀಡಲು ವೇದಿಕೆ ಹತ್ತಿದ ಲೇಖಕ ಸಲ್ಮಾನ್ ರಶ್ದಿ ಚಾಕು ಇರಿತ!

Published : Aug 12, 2022, 09:57 PM ISTUpdated : Aug 12, 2022, 10:08 PM IST
ಉಪನ್ಯಾಸ ನೀಡಲು ವೇದಿಕೆ ಹತ್ತಿದ ಲೇಖಕ ಸಲ್ಮಾನ್ ರಶ್ದಿ ಚಾಕು ಇರಿತ!

ಸಾರಾಂಶ

ಮುಂಬೈ ಮೂಲದ ಖ್ಯಾತ ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿತ. ವೇದಿಕೆ ಮೇಲೆ ಹತ್ತಿ ಚಾಕು ಇರಿತ ಅಪರಿಚಿತ ವ್ಯಕ್ತಿ. ಸಲ್ಮಾನ್ ರಶೀದೆ ಪರಿಸ್ಥಿತಿ ಗಂಭೀರ.

ನ್ಯೂಯಾರ್ಕ್(ಆ.12):  ಮುಂಬೈ ಮೂಲದ ಲೇಖಕ ಸಲ್ಮಾನ್ ರಶ್ದಿ ಉಪನ್ಯಾಸ ನೀಡಲು ವೇದಿಕೆ ಹತ್ತಿದ ಬೆನ್ನಲ್ಲೇ ಅಪರಿಚಿತ ವ್ಯಕ್ತಿ ಆಗಮಿಸಿ ಚಾಕು ಇರಿದ ಘಟನೆ ನ್ಯೂಯಾರ್ಕನ ಚೌಟೌಕ್ಯೂ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ. ಈ ಘಟನೆಯಿಂದ ತೀವ್ರ ಗಾಯಕ್ಕೆ ತುತ್ತಾಗಿರುವ ಸಲ್ಮಾನ್ ರಶ್ದಿಯನ್ನು ಆಸ್ಪತ್ರೆ ದಾಖಲಾಗಿಸಲಾಗಿದೆ. ಉಪನ್ಯಾಸ ನೀಡಲು ವೇದಿಕೆಗೆ ಆಗಮಿಸಿದ ಸಲ್ಮಾನ್ ರಶ್ದಿ ಪರಿಚಯವನ್ನು ಕಾರ್ಯಕ್ರಮ ಆಯೋಜಕರು ಮಾಡುತ್ತಿದ್ದರು. ವೇಳೆ ವೇದಿಕೆ ಹತ್ತಿದ ಅಪರಿಚಿತ ನೇರವಾಗಿ ಸಲ್ಮಾನ್ ರಶ್ದಿ ಬಳಿ ತೆರಳಿ ಹಲ್ಲೆ ಮಾಡಿದ್ದಾರೆ. ಬಳಿಕ ಚಾಕುವಿನಿಂದ ಇರಿದಿದ್ದಾನೆ.  ತೀವ್ರ ಗಾಯಗೊಂಡ ಸಲ್ಮಾನ್ ರಶೀದೆ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ.  ಈ ವೇಳೆ ಕಾರ್ಯಕ್ರಮ ಆಯೋಜರು ವೇದಿಕೆಗೆ ಆಗಮಿಸಿ ಸಲ್ಮಾನ್ ರಶೀದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

1980ರಿಂದ ಇರಾನಿಂದ ತೀವ್ರ ಬೆದರಿಕೆ ಎದುರಿಸುತ್ತಿದ್ದ ಸಲ್ಮಾನ್ ರಶ್ದಿ ಮೇಲೆ ಇದೀಗ ದಾಳಿಯಾಗಿದೆ. 1988ರಲ್ಲಿ ಸಲ್ಮಾನ್ ರಶ್ದಿ ಅವರ ಸೈಟಾನಿಕ್ ವರ್ಸಸ್ ಪುಸ್ತಕವನ್ನು ಇರಾನ್ ನಿಷೇಧಿಸಿತ್ತು. ಇದು ಧರ್ಮನಿಂದನೆ ಪುಸ್ತಕ ಎಂದು ಇರಾನ್ ದೇಶ ಬ್ಯಾನ್ ಮಾಡಿತ್ತು. ರಶೀದ್ ವಿರುದ್ಧ ಅಂದಿನ ಇರಾನ್ ನಾಯಕ ರುಹೊಲ್ಲಾ ಖೋಮೇನಿ ಫತ್ವಾ ಹೊರಡಿಸಿದ್ದರು. ಇಷ್ಟೇ ಅಲ್ಲ ಸಲ್ಮಾನ್ ರಶ್ದಿಯನ್ನು ಹತ್ಯೆ ಮಾಡಿದ ವ್ಯಕ್ತಿಗೆ 3 ಮಿಲಿಯನ್ ಹೆಚ್ಚು ಬಹುಮಾನ ಮೊತ್ತ ನೀಡುವುದಾಗಿ ಘೋಷಿಸಿದ್ದರು. 

ರುಹೊಲ್ಲಾ ಫತ್ವಾದಿಂದ ಇರಾನ್ ಸರ್ಕಾರ ದೂರ ಉಳಿದಿಕೊಂಡಿತ್ತು. ಆದರೆ ಕಿಚ್ಚು ಮಾತ್ರ ಆರಿರಲಿಲ್ಲ. 2012ರಲ್ಲಿ ಇರಾನ್ ಧಾರ್ಮಿಕ ಪ್ರತಿಷ್ಠಾನ ರಶಿಧೆ ತಲೆಗೆ ಘೋಷಿಸಿದ್ದ 3 ಮಿಲಿಯನ್ ಮೊತ್ತವನ್ನು 3.3 ಮಿಲಿಯನ್‌ಗೆ ಏರಿಕೆ ಮಾಡಿತ್ತು. ಆದರೆ ಈ ಬೆದರಿಕೆಗಳನ್ನು ರಶ್ದಿ ತಳ್ಳಿ ಹಾಕಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!