2.6 ಕೋಟಿ ಹೆಕ್ಟೇರ್‌ ಬಂಜರು ಭೂಮಿ ಅಭಿವೃದ್ಧಿ ಗುರಿ: ಪ್ರಧಾನಿ ಮೋದಿ

Published : Jun 15, 2021, 07:55 AM ISTUpdated : Jun 15, 2021, 10:10 AM IST
2.6 ಕೋಟಿ ಹೆಕ್ಟೇರ್‌ ಬಂಜರು ಭೂಮಿ ಅಭಿವೃದ್ಧಿ ಗುರಿ: ಪ್ರಧಾನಿ ಮೋದಿ

ಸಾರಾಂಶ

* 2030ಕ್ಕೆ 2.6 ಕೋಟಿ ಹೆಕ್ಟೇರ್‌ ಬಂಜರು ಭೂಮಿ ಫಲವತ್ತತೆ * ಕಳೆದ 10 ವರ್ಷ​ಗ​ಳಲ್ಲಿ 30 ಲಕ್ಷ ಹೆಕ್ಟೇರ್‌ ಅರಣ್ಯ ಪ್ರದೇ​ಶ​ವನ್ನು ವೃದ್ಧಿ​ಸ​ಲಾ​ಗಿದೆ * ಮರು​ಭೂಮಿ, ಭೂಮಿಯ ಉತ್ಕೃ​ಷ್ಟ​ತೆಯ ವಿನಾ​ಶ ಮತ್ತು ಬರದ ಕುರಿ​ತಾಗಿ ವಿಶ್ವ​ಸಂಸ್ಥೆಯಲಲ್ಲಿ ಮೋದಿ ಮಾತು

ನವ​ದೆ​ಹ​ಲಿ(ಜೂ.15): 2030ರ ಒಳ​ಗಾಗಿ ಫಲ​ವ​ತ್ತತೆ ಕಳೆ​ದು​ಕೊಂಡಿ​ರುವ 2.6 ಕೋಟಿ ಹೆಕ್ಟೇರ್‌ ಬಂಜರು ಪ್ರದೇ​ಶ​ವನ್ನು ಪುನಃ ಫಲ​ವ​ತ್ತ​ತೆಯ ಭೂಮಿ​ಯ​ನ್ನಾಗಿ ಪರಿ​ವ​ರ್ತಿ​ಸುವ ನಿಟ್ಟಿ​ನಲ್ಲಿ ಭಾರತ ಕಾರ್ಯ ನಿರ್ವ​ಹಿ​ಸ​ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿ​ದ್ದಾರೆ. ಜೊತೆಗೆ ಕಳೆದ 10 ವರ್ಷ​ಗ​ಳಲ್ಲಿ 30 ಲಕ್ಷ ಹೆಕ್ಟೇರ್‌ ಅರಣ್ಯ ಪ್ರದೇ​ಶ​ವನ್ನು ವೃದ್ಧಿ​ಸ​ಲಾ​ಗಿದೆ ಎಂದಿ​ದ್ದಾ​ರೆ.

12 ವರ್ಷಗಳ ಬಳಿಕ ಹೊಸ ಸರ್ಕಾರ; ಮೋದಿ ಜೊತೆ ಕೆಲಸ ಮಾಡಲು ಉತ್ಸುಕ ಎಂದ ಇಸ್ರೇಲ್ ನೂತನ ಪ್ರಧಾನಿ!

ಮರು​ಭೂಮಿ, ಭೂಮಿಯ ಉತ್ಕೃ​ಷ್ಟ​ತೆಯ ವಿನಾ​ಶ ಮತ್ತು ಬರದ ಕುರಿ​ತಾಗಿ ವಿಶ್ವ​ಸಂಸ್ಥೆಯ ಉನ್ನತ ಹಂತದ ಸಭೆ​ಯ​ನ್ನು​ದ್ದೇಶಿಸಿ ಸೋಮ​ವಾರ ಮಾತ​ನಾ​ಡಿದ ಮೋದಿ ಅವರು, ಅಭಿ​ವೃ​ದ್ಧಿ​ಪ​ಥ​ದ​ಲ್ಲಿ​ರುವ ರಾಷ್ಟ್ರ​ಗ​ಳಿಗೆ ಭೂಮಿಯ ಫಲ​ವ​ತ್ತ​ತೆ ಪುನಃ​ಸ್ಥಾ​ಪಿ​ಸಲು ಇರುವ ಮಾರ್ಗೋ​ಪಾ​ಯ​ಗಳ ಬಗ್ಗೆ ನೆರವು ನೀಡ​ಲಾ​ಗು​ತ್ತದೆ ಎಂದರು.

ಮೋದಿ, ಶಾ ಕೋಟೆಗೆ ಕೇಜ್ರೀ ಲಗ್ಗೆ: ಮಹತ್ವದ ಘೋಷಣೆ ಮಾಡಿದ AAP!

ವಿಶ್ವ​ದಲ್ಲಿ ಇಂದು ಒಟ್ಟಾರೆ 3ನೇ ಎರ​ಡ​ರಷ್ಟುಭೂಮಿ ಫಲ​ವ​ತ್ತತೆ ಕುಂದಿದೆ. ಹೀಗಾಗಿ ಭೂಮಿಯ ಸವ​ಕ​ಳಿ​ಯನ್ನು ನಿಯಂತ್ರಿ​ಸದೇ ಹೋದಲ್ಲಿ ನಮ್ಮ ಸಮಾ​ಜ​ಗಳು, ಆರ್ಥಿ​ಕತೆ, ಆಹಾರ ಭದ್ರತೆ, ಆರೋಗ್ಯ, ಸುರ​ಕ್ಷತೆ ಮತ್ತು ಜೀವ​ನದ ಉತ್ಕೃ​ಷ್ಟತೆಯನ್ನು ನಾಶ​ಪ​ಡಿ​ಸ​ಲಿದೆ. ಹೀಗಾಗಿ ಭೂಮಿ ಮತ್ತು ಅದರ ಸಂಪ​ನ್ಮೂ​ಲ​ಗಳ ಮೇಲಿನ ಒತ್ತಡ ಮತ್ತು ಅವ​ಲ​ನಂಬ​ನೆ​ ತಗ್ಗಿ​ಸ​ಬೇಕು. ಇದ​ಕ್ಕಾಗಿ ನಾವು ಹೆಚ್ಚಿನ ಶ್ರಮ ಪಡ​ಬೇ​ಕಿದೆ. ನಾವೆಲ್ಲಾ ಒಂದಾ​ದರೆ ಭೂಮಿಯ ಉತ್ಕೃ​ಷ್ಟತೆಯನ್ನು ಕಾಪಾ​ಡ​ಬ​ಹುದು ಎಂದು ಅವರು ಪ್ರತಿ​ಪಾ​ದಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!