ನವದೆಹಲಿ: ಜೂ.28ರಂದು ಕಾಶ್ಮೀರದಲ್ಲಿ ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾದ ಮೂವರು ಪಹಲ್ಗಾಂ ದಾಳಿಕೋರರಲ್ಲಿ ಒಬ್ಬನಾದ ಲಷ್ಕರ್ ಹಬೀಬ್ ಅಲಿಯಾಸ್ ಜಿಬ್ರಾನ್ನ ಸಾಂಕೇತಿಕ ಶವಸಂಸ್ಕಾರ ಹಾಗೂ ಶ್ರದ್ಧಾಂಜಲಿ ಸಭೆಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಆತನ ತವರೂರಲ್ಲಿ ನಡೆಸಲಾಗಿದೆ. ಇದರಲ್ಲಿ ಹಲವು ಲಷ್ಕರ್ ಉಗ್ರರು ಭಾಗಿಯಾಗಿದ್ದರು. ಇದರಿಂದಾಗಿ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎನ್ನುತ್ತಿರುವ ಪಾಕಿಸ್ತಾನದ ಮುಖವಾಡ ಮತ್ತೊಮ್ಮೆ ಕಳಚಿದೆ. ಇತ್ತ ಭಾರತ-ಪಾಕ್ ಸಮರ ನಿಲ್ಲಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 31ನೇ ಸಲ ಹೇಳಿದ್ದಾರೆ. 'ನಾನೇನು ಮಾಡಿದೆ ಎಂದು ದೇವರಿಗೆ ಗೊತ್ತಿಲ್ಲ. ಕಾಂಗೋ-ರುವಾಂಡಾ, ಭಾರತ-ಪಾಕ್, ಇರಾನ್ -ಇಸ್ರೇಲ್ - ಹೀಗೆ 5 ಸಮರ ನಿಲ್ಲಿಸಿದ್ದೇನೆ ಎಂದು ದೇವರಿಗೆ ತಿಳಿದಿಲ್ಲ' ಎಂದು ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.
06:13 PM (IST) Aug 04
ಟೈಲ್ಸ್ ಪಾಲಿಶ್ ಮಾಡುವ ಯಂತ್ರ ಬಳಸಿ ಗೆಳೆಯನ ಹಲ್ಲನ್ನು ನೇರವಾಗಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
05:01 PM (IST) Aug 04
ಕೊಲ್ಹಾಪುರದಿಂದ ವನತಾರಕ್ಕೆ(ವಂತಾರಾ) ಸ್ಥಳಾಂತರಗೊಂಡ ಮಾಧುರಿ ಆನೆಯ ಹೊಸ ಜೀವನದ ಹೇಗಿದೆ ಎಂಬ ಬಗ್ಗೆ ವಂತಾರವೂ ಕೋಲ್ಹಾಪುರ ಜನರಿಗೆ ವೀಡಿಯೋ ಸಂದೇಶ ಕಳುಹಿಸಿದ್ದು, ವೀಡಿಯೋ ವೈರಲ್ ಆಗಿದೆ.
03:49 PM (IST) Aug 04
ಬಹಳ ದಿನಗಳಿಂದ ಮೂಲೆ ಸೇರಿದ್ದ ಕಾರಿನ ಡಿಕ್ಕಿಯಿಂದ ವಿಚಿತ್ರ ಸದ್ದು ಕೇಳಿಬಂದಾಗ ಮಾಲೀಕರು ತಪಾಸಣೆ ಮಾಡಲು ಕಾರನ್ನು ಹೊರಗೆ ತೆಗೆದಿದ್ದು, ಕಾರಿನ ಒಳಗಿದ್ದ ಸಂಸಾರವನ್ನು ನೋಡಿ ಅಚ್ಚರಿಯಾಗಿದ್ದಾರೆ.
02:28 PM (IST) Aug 04
ಅಣ್ಣತಮ್ಮಂದಿರು ಬಾಲ್ಯ ಕಳೆದು ಯೌವ್ವನ ತಲುಪುತ್ತಿದ್ದಂತೆ ದಾಯಾದಿಗಳಾಗುವ ಕಾಲದಲ್ಲಿ ಇಂತಹ ಯಾವುದೇ ಸಂಬಂಧವಿಲ್ಲದ ಸ್ನೇಹವೊಂದು ಕುಟುಂಬವಾಗಿ ಬದಲಾಗಿ ಮಕ್ಕಳ ಕಾಲಕ್ಕೂ ಮುಂದುವರೆದಿದ್ದು, ಸ್ನೇಹಿತರಾಗಿ ಅಣ್ಣತಮ್ಮನಂತೆ ಒಂದೇ ಮನೆಯಲ್ಲಿ ಬದುಕುತ್ತಿರುವಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ ಸೂರತ್ ನಗರಿ.
01:58 PM (IST) Aug 04
ಬ್ರಹ್ಮೋಸ್ 2 ಕ್ಷಿಪಣಿ ಮತ್ತು ಬಿ-2 ಬಾಂಬರ್ ಎರಡೂ ಶಕ್ತಿಶಾಲಿ ಆಯುಧಗಳಾಗಿದ್ದು, ವಿಭಿನ್ನ ಕಾರ್ಯತಂತ್ರಗಳನ್ನು ಹೊಂದಿವೆ. ಒಂದು ವೇಗದ ದಾಳಿಗೆ ಸೂಕ್ತವಾದರೆ, ಇನ್ನೊಂದು ರಹಸ್ಯ ಕಾರ್ಯಾಚರಣೆಗಳಿಗೆ ಪರಿಣಾಮಕಾರಿ. ಈ ಲೇಖನದಲ್ಲಿ, ಈ ಎರಡು ಆಯುಧಗಳ ವೆಚ್ಚ, ಉದ್ದೇಶ ಮತ್ತು ಪಾತ್ರಗಳನ್ನು ಹೋಲಿಸಲಾಗಿದೆ.
12:47 PM (IST) Aug 04
12 ವರ್ಷದ ಮಗಳ ಮೇಲೆ ಅತ್ಯಾ*ಚಾರ ಎಸಗಿ, ಬಳಿಕ ಆಕೆಯನ್ನೇ ವಿವಾಹವಾಗಿದ್ದ ತಂದೆಯೊಬ್ಬನಿಗೆ ಉತ್ತರ ಪ್ರದೇಶದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
12:46 PM (IST) Aug 04
ಚೀನಾದ ವಿಷಯದಲ್ಲಿ ಭಾರತೀಯ ಸೇನೆಯ ವಿರುದ್ಧ ಟೀಕೆ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂಕೋರ್ಟ್ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿಗಳು ಹೇಳಿದ್ದೇನು ನೋಡಿ...
12:10 PM (IST) Aug 04
ಕೋಟ್ಯಧಿಪತಿಗಳಾಗುವುದು ಬಹುತೇಕ ಮಂದಿಗೆ ಸುಲಭದ ಮಾತಲ್ಲ. ಆದರೆ ಕೆಲವು ವರ್ಷ ತಾಳ್ಮೆಯಿಂದ ಹೂಡಿಕೆ ಮಾಡಿದರೆ 20 ವರ್ಷಗಳಲ್ಲಿ ಐದು ಕೋಟಿ ರೂ.ವರೆಗೆ ಗಳಿಸಲು ಸಾಧ್ಯ. ಅದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ...
12:10 PM (IST) Aug 04
ಮದ್ವೆ ಎಂಬುದು ಸ್ವರ್ಗದಲ್ಲೇ ನಿರ್ಧಾರವಾಗಿರುತ್ತೆ ಅನ್ನೋದು ಅನೇಕರ ಮಾತು. ಅದಕ್ಕೆ ಪುಷ್ಠಿ ನೀಡುವಂತೆ ಕೆಲವು ಘಟನೆಗಳು ನಡೆಯುತ್ತವೆ. ಅದೇ ರೀತಿ ಶಾಲೆಯಲ್ಲಿ ದ್ವೇಷಿಸುತ್ತಿದ್ದ ಇಬ್ಬರು ಸತಿಪತಿಗಳಾಗಿದ್ದಾರೆ. ಅವರ ಸ್ಟೋರಿ ಇಲ್ಲಿದೆ.
11:02 AM (IST) Aug 04
ಜನರಿಂದ ಕೇವಲ 2 ರೂಪಾಯಿ ಪಡೆದು ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡುತ್ತಿದ್ದ ಕೇರಳದ ಖ್ಯಾತ ವೈದ್ಯ ಡಾ. ಎ.ಕೆ. ರೈರು ಗೋಪಾಲ್ ಅವರು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
10:47 AM (IST) Aug 04
ಮಾಜಿ ಕೇಂದ್ರ ಸಚಿವರು, ಜಾರ್ಖಂಡ್ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾದ ಸ್ಥಾಪಕರಲ್ಲಿ ಒಬ್ಬರಾದ ಶಿಬು ಸೊರೆನ್ ಇಂದು ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.
10:26 AM (IST) Aug 04