ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಅಮರಂಬಲಂ ಎಂಬ ಹಳ್ಳಿಯಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ ಈಗಾಗಲೇ 30 ಮಸೀದಿಗಳಿದ್ದು, 31ನೇ ಮಸೀದಿ ನಿರ್ಮಾಣ ವಿಚಾರವಾಗಿ ಗದ್ದಲವೆದ್ದಿದೆ. ಈ ವಿಚಾರ ಸುಪ್ರೀಂ ಕೋರ್ಟ್ ಅಂಗಳವನ್ನು ತಲುಪಿದೆ.
ಏನಿದು ವಿವಾದ?
ಅಮರಂಬಲಂ ಪಂಚಾಯ್ತಿ ವ್ಯಾಪ್ತಿಯ ತೊಟ್ಟೆಕ್ಕಾಡಿನಲ್ಲಿ 2018ರಲ್ಲಿ ವಾಣಿಜ್ಯ ಕಟ್ಟಡವೊಂದನ್ನು ನಿರ್ಮಿಸಲಾಗಿತ್ತು. ಮಾಲೀಕರು ಅದನ್ನು ವಕ್ಫ್ ಆಸ್ತಿಯಾಗಿ ನೂರುಲ್ ಇಸ್ಲಾಂ ಸಾಂಸ್ಕೃತಿಕ ಸಂಘಕ್ಕೆ ನೀಡಿದ್ದು, ಮಸೀದಿಯಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದ್ದರು. ವಾಣಿಜ್ಯ ಕಟ್ಟಡವನ್ನು ಮಸೀದಿಯಾಗಿ ಪರಿವರ್ತಿಸಲು ಸಂಘ ಪಂಚಾಯ್ತಿಯ ಸನ್ನದು ಪಡೆಯಲು ಹೋದಾಗ, ಜಿಲ್ಲಾಧಿಕಾರಿಗಳ ಬಳಿ ಹೋಗುವಂತೆ ಸೂಚಿಸಲಾಯಿತು. ಆ ಪ್ರದೇಶದಲ್ಲಿ ಈಗಾಗಲೇ 5 ಕಿ.ಮೀ. ವ್ಯಾಪ್ತಿಯಲ್ಲಿ 30 ಮಸೀದಿಗಳಿರುವುದನ್ನು ಗಮನಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ, ಕಟ್ಟಡದ ಪರಿವರ್ತನೆ ಮನವಿಯನ್ನು ತಿರಸ್ಕರಿಸಿದ್ದರು.
09:41 PM (IST) Jan 19
ಬೈಕ್ ರೈಡಿಂಗ್ನಲ್ಲಿರುವ ಗಂಡನ ಮೇಲೆ ಆಕ್ರೋಶ ತೀರಿಸಿಕೊಂಡ ಹೆಂಡತಿ, ಮನೆ ಒಳಗಿನ ಜಗಳ ಬೀದಿಯಲ್ಲಿ ಸದ್ದು ಮಾಡಿದೆ. ಹೆಂಡಿತಿ ಆಕ್ರೋಶ, ಕಿತ್ತಾಟದ ನಡುವೆ ಗಂಡ ಬೈಕ್ ರೈಡ್ ಮಾಡಿದ್ದಾನೆ.
07:38 PM (IST) Jan 19
ಮೂರು ಮನೆ, 3 ಆಟೋ, ಒಂದು ಕಾರು, ಲಕ್ಷ ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್, ಸಾಲ ಇಲ್ಲ, ಯಾವ ತಲೆನೋವು ಇಲ್ಲ. ಈತನ ಭಾರತದ ಶ್ರೀಮಂತ ಭಿಕ್ಷುಕ ಮಂಗಿಲಾಲ್. ಕಾಲುಗಳಿಗೆ ಸ್ವಾಧೀನವಿಲ್ಲ, ಹೀಗಾಗಿ ಅನಿವಾರ್ಯ ಭಿಕ್ಷಾಟನೆಗೆ ಇಳಿದ ಲಾಲ್ ಈಗ ಶ್ರೀಮಂತ.
06:25 PM (IST) Jan 19
ಕೇರಳದಲ್ಲಿ ಬಸ್ ಪ್ರಯಾಣದ ವೇಳೆ ಸಹ ಪ್ರಯಾಣಿಕನ ವಿರುದ್ಧ ಲೈಂ*ಗಿಕ ದೌರ್ಜನ್ಯದ ಆರೋಪ ಮಾಡಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಒಬ್ಬರು ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿ, ಆರೋಪಕ್ಕೆ ಗುರಿಯಾದ ವ್ಯಕ್ತಿ ಅವಮಾನ ತಾಳಲಾರದೆ ಬದುಕನ್ನು ಕೊನೆಗೊಳಿಸಿಕೊಂಡಿದ್ದಾರೆ.
06:22 PM (IST) Jan 19
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1 ಅಂತರದಲ್ಲಿ ಸೋತಿದೆ. ಈ ಸೋಲಿಗೆ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆಗಾರ ಅಜಿತ್ ಅಗರ್ಕರ್ ಅವರ ವಿವಾದಾತ್ಮಕ ನಿರ್ಧಾರಗಳೇ ಕಾರಣವೆಂದು ವಿಶ್ಲೇಷಿಸಲಾಗಿದೆ.
05:25 PM (IST) Jan 19
ಇಂದೋರ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕೈಚೆಲ್ಲಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಪ್ರದರ್ಶನದ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿದ್ದು, ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕ್ರಿಕೆಟ್ ವೃತ್ತಿಜೀವನ ಮುಗಿಯಿತಾ ಎನ್ನುವ ಪ್ರಶ್ನೆಗಳು ಕಾಡಲಾರಂಭಿಸಿವೆ.
05:21 PM (IST) Jan 19
"ಕ್ಯಾಂಡಿ ಶಾಪ್" ವಿಡಿಯೋದಿಂದಾಗಿ ಟ್ರೋಲ್ಗೆ ಒಳಗಾದ ಗಾಯಕಿ, ಗುಳಿ ಕೆನ್ನೆ ಚೆಲುವೆ ನೇಹಾ ಕಕ್ಕರ್, ಸೋಷಿಯಲ್ ಮೀಡಿಯಾದಲ್ಲಿ ಶಾಕಿಂಗ್ ಪೋಸ್ಟ್ ಹಾಕಿದ್ದಾರೆ. ಅವರು ಸೆಲೆಬ್ರಿಟಿ ಜೀವನದಿಂದ ವಿರಾಮ ತೆಗೆದುಕೊಳ್ಳುತ್ತಿದ್ದು, ತಮ್ಮ ಫೋಟೋ ತೆಗೆಯದಂತೆ ಪಾಪರಾಜಿಗಳು ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ
04:46 PM (IST) Jan 19
ಭಾರತದ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಬರೀ ಕ್ರಿಕೆಟ್, ಜಾಹೀರಾತು, ಬ್ಯುಸಿನೆಸ್ನಿಂದ ಅಷ್ಟೇ ಅಲ್ಲ, ಸೋಶಿಯಲ್ ಮೀಡಿಯಾದಿಂದಲೂ ಕೋಟಿ ಕೋಟಿ ಸಂಪಾದಿಸ್ತಾರೆ. ಅವರು ಒಂದು ಇನ್ಸ್ಟಾಗ್ರಾಂ ಪೋಸ್ಟ್ಗೆ ಎಷ್ಟು ತಗೋತಾರೆ ಗೊತ್ತಾ?
03:53 PM (IST) Jan 19
ಇಂದೋರ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ ಸಿಡಿಸಿದರು. ತಂಡವನ್ನು ಸೋಲಿನಿಂದ ಪಾರುಮಾಡಲು ವಿಫಲರಾದರೂ, ಹಲವು ದಾಖಲೆಗಳನ್ನು ಕೊಹ್ಲಿ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು.
02:57 PM (IST) Jan 19
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳನ್ನು ಭಾರತದಲ್ಲಿ ಆಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಭದ್ರತೆಯ ನೆಪವೊಡ್ಡಿ ನಿರಾಕರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಜನವರಿ 21ರೊಳಗೆ ನಿರ್ಧಾರ ತಿಳಿಸುವಂತೆ ಬಾಂಗ್ಲಾಗೆ ಡೆಡ್ಲೈನ್ ನೀಡಿದೆ ಐಸಿಸಿ.
01:08 PM (IST) Jan 19
ಬೆಂಗಳೂರು: ಚಿನ್ನದ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಸದ್ಯ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1.5 ಲಕ್ಷ ರೂ. ತಲುಪಿದೆ. ಆದರೆ, ನೀವು 26 ವರ್ಷಗಳ ಹಿಂದೆ 1 ಲಕ್ಷ ರೂಪಾಯಿಗೆ ಚಿನ್ನ ಖರೀದಿಸಿದ್ದರೆ ಇಂದು ನಿಮ್ಮ ಬಳಿ ಎಷ್ಟು ಹಣ ಇರುತ್ತಿತ್ತು ಎಂದು ತಿಳಿಯೋಣ.
12:20 PM (IST) Jan 19
ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 54ನೇ ಶತಕ ಸಿಡಿಸಿ, ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದರು. ಈ ಶತಕಕ್ಕೆ ಕೋಚ್ ಗೌತಮ್ ಗಂಭೀರ್ ಡಗೌಟ್ನಿಂದ ಎದ್ದುನಿಂತು ಚಪ್ಪಾಳೆ ತಟ್ಟಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
11:35 AM (IST) Jan 19
ಸಂದರ್ಶನದಲ್ಲಿ 'ಕೆಲಸ ಏಕೆ ಬದಲಿಸುತ್ತಿದ್ದೀರಾ?' ಎಂಬ ಪ್ರಶ್ನೆಗೆ ನಕಾರಾತ್ಮಕವಾಗಿ ಉತ್ತರಿಸಬಾರದು. ಬದಲಿಗೆ, ಇದನ್ನು ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಹೊಸ ಉದ್ಯೋಗವು ನಿಮ್ಮ ವೃತ್ತಿ ಬೆಳವಣಿಗೆಗೆ ಹೇಗೆ ಸಹಕಾರಿ ಎಂಬುದನ್ನು ವಿವರಿಸಲು ಒಂದು ಅವಕಾಶವಾಗಿ ಬಳಸಿಕೊಳ್ಳಬೇಕು.
10:50 AM (IST) Jan 19
NTR: ಜೂ. ಎನ್ಟಿಆರ್ ನಂದಮೂರಿ ಕುಟುಂಬದಲ್ಲಿ ಸೇರಿಕೊಂಡಿದ್ದರ ಬಗ್ಗೆ ಹಿರಿಯ ನಟಿ ಕಾಕಿನಾಡ ಶ್ಯಾಮಲಾ ಇಂಟ್ರೆಸ್ಟಿಂಗ್ ಹೇಳಿಕೆ ನೀಡಿದ್ದಾರೆ. ತಾರಕ್ ಅವರ ಕುಟುಂಬದಲ್ಲಿ ಸೇರಲು ಕಾರಣವೇನು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
10:21 AM (IST) Jan 19
ಇಂದೋರ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಹೊರತಾಗಿಯೂ ಭಾರತ ಸೋಲುಂಡಿತು.
09:09 AM (IST) Jan 19
ಇಂದೋರ್ನಲ್ಲಿ ನಡೆದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರ ಅಮೋಘ ಶತಕ (124) ವ್ಯರ್ಥವಾಯಿತು. ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಶತಕಗಳ ನೆರವಿನಿಂದ ನ್ಯೂಜಿಲೆಂಡ್ 337 ರನ್ ಗಳಿಸಿತು. ಗುರಿ ಬೆನ್ನತ್ತಿದ ಭಾರತ, ಕೊಹ್ಲಿಯ ಹೋರಾಟದ ಹೊರತಾಗಿಯೂ ಸೋಲನುಭವಿಸಿತು.