LIVE NOW
Published : May 13, 2026, 06:38 AM ISTUpdated : May 13, 2026, 09:08 AM IST

India Latest News Live: ಲಿಜ್ಲಾಝ್ ಫೋಟೋಗೆ ಕೊಹ್ಲಿ ಲೈಕ್ ಕೋಲಾಹಲ ಬೆನ್ನಲ್ಲೇ ಹಣದ ಆಫರ್ ಸೀಕ್ರೆಟ್ ಬಿಚ್ಚಿಟ್ಟ ಮಾಡೆಲ್

ಸಾರಾಂಶ

ನವದೆಹಲಿ: ದೇಶದ ಕೃಷಿ ಮತ್ತು ಆರ್ಥಿಕತೆಯ ಮೂಲವಾದ ಮುಂಗಾರು ಮಾರುತಗಳುಈ ವಾರದ ಕೊನೆಯಲ್ಲಿ (ಮೇ 17) ದಕ್ಷಿಣ ಬಂಗಾಳದ ಉಪಸಾಗರ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್‌, ನಿಕೋಬಾರ್‌ ದ್ವೀಪಗಳಿಗೆ ಆಗಮಿಸುವ ಸಾಧ್ಯತೆಯಿದೆ. ವಾಡಿಕೆಯಂತೆ ಇದು ಮೇ 22ಕ್ಕೆ ಅಂಡಮಾನ್‌ ಪ್ರವೇಶಿಸುತ್ತದೆ. ಆದರೆ ಈ ಬಾರಿ ಸುಮಾರು 5-6 ದಿನ ಮುಂಚಿತವಾಗಿ ಆಗಮಿಸಲಿದೆ. ಸಾಮಾನ್ಯವಾಗಿ ಜೂ.1ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುತ್ತದೆ. ಈ ಮೂಲಕ 4 ತಿಂಗಳ ಮಳೆಗಾಲ ಆರಂಭವಾಗುತ್ತದೆ.

LizLaz and Virat Kohli (File Photo)

09:08 AM (IST) May 13

ಲಿಜ್ಲಾಝ್ ಫೋಟೋಗೆ ಕೊಹ್ಲಿ ಲೈಕ್ ಕೋಲಾಹಲ ಬೆನ್ನಲ್ಲೇ ಹಣದ ಆಫರ್ ಸೀಕ್ರೆಟ್ ಬಿಚ್ಚಿಟ್ಟ ಮಾಡೆಲ್

ಜರ್ಮನ್ ಮಾಡೆಲ್ ಲಿಜ್ಲಾಝ್ ಫೋಟೋಗೆ ಇತ್ತೀಚೆಗೆ ವಿರಾಟ್ ಕೊಹ್ಲಿ ಲೈಕ್ ಒತ್ತಿ ಕೋಲಾಹಲ ಸೃಷ್ಟಿಸಿದ್ದರು. ಇದೀಗ ಮಾಡೆಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಹಣದ ಆಫರ್ ಕುರಿತ ಮಾಹಿತಿ ಬಿಚ್ಚಿಟ್ಟಿದ್ದಾರೆ.

 

Read Full Story

08:43 AM (IST) May 13

ಚಿನ್ನ,ಬೆಳ್ಳಿ ಆಮದು ಸುಂಕ ಶೇ.6 ರಿಂದ 15ಕ್ಕೆ ಏರಿಕೆ, ಕೇಂದ್ರ ಸರ್ಕಾರದ ಶಾಕ್‌ಗೆ ಬಂಗಾರ ಬಲು ದುಬಾರಿ

ಚಿನ್ನ ಖರೀದಿಸಬೇಡಿ ಎಂದು ಮೋದಿ ಕರೆಕೊಟ್ಟ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್ ನೀಡಿದೆ. ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಶೇಕಡಾ 6 ರಿಂದ 15ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಚಿನ್ನದ ಬೆಲೆ ಬಲು ದುಬಾರಿಯಾಗಿದೆ.

Read Full Story

08:32 AM (IST) May 13

ವಿಜಯ್‌ ಸಿಎಂ ಆದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸದೇ ಕೈ ಮುಗಿದ ರಜನಿ - ವಿಡಿಯೋ ವೈರಲ್‌

ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಅಧಿಕಾರ ವಹಿಸಿಕೊಂಡ ಬಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ, ರಜನಿಕಾಂತ್ ಉತ್ತರಿಸದೆ ಮೌನವಾಗಿ ಕೈಮುಗಿದಿರುವುದು. ಈ ಹಿಂದೆ ವಿಜಯ್‌ಗೆ ಶುಭ ಕೋರಿದ್ದ ರಜನಿಕಾಂತ್ ಅವರ ಈ ನಡೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read Full Story

08:07 AM (IST) May 13

TVK Astrologer - ಭವಿಷ್ಯ ನುಡಿದಿದ್ದ ಜ್ಯೋತಿಷಿ ಈಗ ವಿಜಯ್‌ಗೆ ವಿಶೇಷ ಕರ್ತವ್ಯಾಧಿಕಾರಿ!

ಟಿವಿಕೆ ಪಕ್ಷದ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ಅವರನ್ನು ನಟ ವಿಜಯ್ ತಮ್ಮ ವಿಶೇಷ ರಾಜಕೀಯ ಕರ್ತವ್ಯಾಧಿಕಾರಿಯಾಗಿ ನೇಮಿಸಿದ್ದಾರೆ. ಈ ಹಿಂದೆ ಜಯಲಲಿತಾ, ಸ್ಟಾಲಿನ್‌ರಂತಹ ಪ್ರಮುಖರ ಬಗ್ಗೆಯೂ ಇವರು ನಿಖರ ಭವಿಷ್ಯ ಹೇಳಿದ್ದು, ಈಗ ವಿಜಯ್‌ಗೆ ಸಲಹೆಗಾರರಾಗಿದ್ದಾರೆ.
Read Full Story

08:01 AM (IST) May 13

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೋದರ ಪ್ರತೀಕ್ ಯಾದವ್ ನಿಗೂಢ ಸಾವು

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಸೋದರ, 38 ವರ್ಷದ ಪ್ರತೀಕ್ ಯಾದವ್ ಲಕ್ನೋದಲ್ಲಿ ನಿಧನರಾಗಿದ್ದಾರೆ. ಫಿಟ್‌ನೆಸ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆಯಿದೆ.
Read Full Story

07:32 AM (IST) May 13

Gig Workers - 90,000 ಡೆಲಿವರಿ ಸಿಬ್ಬಂದಿಗೆ ಭರ್ಜರಿ ಕೊಡುಗೆ ಘೋಷಿಸಿದ ಅಮೆಜಾನ್ ಇಂಡಿಯಾ

ಅಮೆಜಾನ್ ಇಂಡಿಯಾ ತನ್ನ 90,000ಕ್ಕೂ ಹೆಚ್ಚು ವಿತರಣಾ ಸಿಬ್ಬಂದಿಗಾಗಿ ಸಮಗ್ರ ಆರೋಗ್ಯ ಮತ್ತು ವಿಮಾ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯು ಹೆಚ್ಚುವರಿ ಮೆಡಿಕ್ಲೈಮ್, ಅಪಘಾತ ವಿಮೆ, ಮತ್ತು ಓಪಿಡಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಿಬ್ಬಂದಿಗೆ ಸಾಮಾಜಿಕ ಭದ್ರತೆ ನೀಡುವ ಗುರಿ ಹೊಂದಿದೆ.
Read Full Story

More Trending News