ಭಾರತ- ಪಾಕ್‌ ಜಲಸಮರ: ಸಿಂಧೂ ನದಿ ಒಪ್ಪಂದ ಮಾರ್ಪಾಡಿಗಾಗಿ ಪಾಕ್‌ಗೆ ಭಾರತ ನೋಟಿಸ್‌

Published : Jan 28, 2023, 09:49 AM ISTUpdated : Jan 28, 2023, 09:50 AM IST
ಭಾರತ- ಪಾಕ್‌ ಜಲಸಮರ: ಸಿಂಧೂ ನದಿ ಒಪ್ಪಂದ ಮಾರ್ಪಾಡಿಗಾಗಿ ಪಾಕ್‌ಗೆ ಭಾರತ ನೋಟಿಸ್‌

ಸಾರಾಂಶ

ಭಾರತ- ಪಾಕ್‌ ಸಿಂಧು ನದಿ ಜಲಸಮರ ಮುಂದುವರಿದಿದ್ದು, ದಿಢೀರನೆ ನಿಲುವು ಬದಲಿಸಿ ಪಾಕಿಸ್ತಾನ ಮೊಂಡಾಟ ಹಿಡಿದಿದೆ. ಈ ಹಿನ್ನೆಲೆ ಸಿಂಧೂ ಒಪ್ಪಂದ ಮಾರ್ಪಾಡಿಗಾಗಿ ಪಾಕ್‌ಗೆ ಭಾರತ ನೋಟಿಸ್‌ ನೀಡಿದೆ. 

ನವದೆಹಲಿ (ಜನವರಿ 28, 2023): ದಿಢೀರನೆ ನಿಲುವು ಬದಲಿಸಿ, ಮಾತುಕತೆಯನ್ನೂ ನಡೆಸದೆ ಪಾಕಿಸ್ತಾನ ತನ್ನ ಹಟಮಾರಿ ಧೋರಣೆಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ 1960ರಲ್ಲಿ ಏರ್ಪಟ್ಟಿರುವ ಸಿಂಧೂ ಜಲ ಒಪ್ಪಂದದಲ್ಲಿ ಮಾರ್ಪಾಡು ಆಗಬೇಕು ಎಂದು ಪಾಕಿಸ್ತಾನಕ್ಕೆ ಭಾರತ ನೋಟಿಸ್‌ ಜಾರಿ ಮಾಡಿದೆ. ಈ ಸಂಬಂಧ ಜನವರಿ 25ರಂದು ಜಲ ಆಯುಕ್ತರ ಮೂಲಕ ನೋಟಿಸ್‌ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದು ಎರಡೂ ದೇಶಗಳ ನಡುವೆ ಜಲ ಸಮರಕ್ಕೆ ನಾಂದಿಯಾಡುವ ಸಾಧ್ಯತೆ ಇದೆ. ಈ ವಿಷಯಕ್ಕೆ ಪಾಕಿಸ್ತಾನಕ್ಕೆ ಭಾರತ ನೋಟಿಸ್‌ ಜಾರಿ ಮಾಡಿದ್ದು ಇದೇ ಮೊದಲು. 

ಒಪ್ಪಂದದ "ಮಾರ್ಪಾಡುಗಳ ಸೂಚನೆ" ಯನ್ನು ಜನವರಿ 25 ರಂದು ಎರಡು ಕಡೆಯ ಸಿಂಧೂ ಜಲಗಳ ಆಯುಕ್ತರ ಮೂಲಕ ಭಾರತದ ಕಡೆಯಿಂದ ತಿಳಿಸಲಾಯಿತು. ಪಾಕಿಸ್ತಾನದ ಕ್ರಮಗಳು ಒಪ್ಪಂದದ ನಿಬಂಧನೆಗಳು ಮತ್ತು ಅವುಗಳ ಅನುಷ್ಠಾನದ ಮೇಲೆ "ಪ್ರತಿಕೂಲವಾಗಿ ಅಡ್ಡಿಪಡಿಸಿದ್ದರಿಂದ" ಭಾರತವು ನೋಟಿಸ್ ಜಾರಿಗೊಳಿಸಲೇಬೇಕಾಯಿತು ಎಂದು ಜನರು ಹೇಳಿದರು.

ಇದನ್ನು ಓದಿ: ಡೋಂಟ್ ಕೇರ್: ನೀರಿಲ್ಲ ಎಂದ ಭಾರತಕ್ಕೆ ಪಾಕ್ ಗುಟುರು!

ಸಿಂಧೂ ಜಲ ಒಪ್ಪಂದವನ್ನು ಅನುಷ್ಠಾನಗೊಳಿಸುವಲ್ಲಿ ಭಾರತವು ಯಾವಾಗಲೂ ದೃಢವಾದ ಬೆಂಬಲಿಗವಾಗಿದೆ ಮತ್ತು ಜವಾಬ್ದಾರಿಯುತ ಪಾಲುದಾರ. ಒಪ್ಪಂದದ ಬಗ್ಗೆ ಪಾಕಿಸ್ತಾನದ ನಿಷ್ಠುರತೆ ಭಾರತವನ್ನು ಮಾರ್ಪಾಡು ಮಾಡುವ ನೋಟಿಸ್‌ ನೀಡುವಂತೆ ಮಾಡಿತು ಎಂದು ಒಬ್ಬರು ಹೇಳಿದರು. ಸೆಪ್ಟೆಂಬರ್ 19, 1960 ರಂದು ಕರಾಚಿಯಲ್ಲಿ ಆಗಿನ ಪಾಕಿಸ್ತಾನದ ಅಧ್ಯಕ್ಷ ಮೊಹಮ್ಮದ್ ಅಯೂಬ್ ಖಾನ್, ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ವಿಶ್ವಬ್ಯಾಂಕ್‌ನ ಡಬ್ಲ್ಯುಎಬಿ ಇಲಿಫ್ ಅವರು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮೊದಲ ಬಾರಿಗೆ ಒಪ್ಪಂದಕ್ಕೆ ಬದಲಾವಣೆಗಳನ್ನು ಮಾಡುವ ಪ್ರಕ್ರಿಯೆಗೆ ಈ ನೋಟಿಸ್‌ ಚಾಲನೆ ನೀಡಿದೆ.

ಸಿಂಧೂ ಜಲ ಒಪ್ಪಂದದ ವಸ್ತು ಉಲ್ಲಂಘನೆಯನ್ನು ಸರಿಪಡಿಸಲು 90 ದಿನಗಳೊಳಗೆ ಅಂತರ-ಸರ್ಕಾರಿ ಮಾತುಕತೆಗಳನ್ನು ಪ್ರವೇಶಿಸಲು ಪಾಕಿಸ್ತಾನಕ್ಕೆ ಅವಕಾಶವನ್ನು ಒದಗಿಸುವುದು ಮಾರ್ಪಾಡಿನ ಸೂಚನೆಯ ಉದ್ದೇಶವಾಗಿದೆ. ಈ ಪ್ರಕ್ರಿಯೆಯು ಕಳೆದ 62 ವರ್ಷಗಳಲ್ಲಿ ಕಲಿತ ಪಾಠಗಳನ್ನು ಸಂಯೋಜಿಸಲು ಒಪ್ಪಂದವನ್ನು ನವೀಕರಿಸುತ್ತದೆ ಎಂದೂ ಅವರು ಹೇಳಿದರು. 

ಇದನ್ನೂ ಓದಿ: ಪಾಕ್ ಮೇಲೆ ಮತ್ತೊಂದು ಬಾಂಬ್: ಇಮ್ರಾನ್ ನೀರಿಳಿಸ್ತಿದ್ದಾರೆ ಮೋದಿ!

ಮಾತುಕತೆ ಒಪ್ಪಿಗೆ ಉಲ್ಟಾ ಹೊಡೆದ ಪಾಕ್‌
ಸಿಂಧೂ ಕಣಿವೆಯಲ್ಲಿನ ನದಿಗಳ ನೀರು ಬಳಕೆ ಕುರಿತು ಪರಸ್ಪರ ಮಾಹಿತಿ ವಿನಿಮಯ ಹಾಗೂ ಸಹಕಾರ ನೀಡುವ ಸಂಬಂಧ ಸುದೀರ್ಘ 9 ವರ್ಷಗಳ ಮಾತುಕತೆ ತರುವಾಯ ಎರಡೂ ದೇಶಗಳ ನಡುವೆ ವಿಶ್ವಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ 1960ರಲ್ಲಿ ಒಪ್ಪಂದವೇರ್ಪಟ್ಟಿತ್ತು. ಆದರೆ, ಭಾರತ ಕೈಗೊಂಡಿರುವ ಕಿಶನ್‌ಗಂಗಾ ಹಾಗೂ ರತಲೆ ಜಲವಿದ್ಯುತ್‌ ಯೋಜನೆಗೆ ಸಂಬಂಧಿಸಿದಂತೆ ತನಗೆ ತಾಂತ್ರಿಕ ಆಕ್ಷೇಪಗಳಿವೆ ಎಂದು ಪಾಕಿಸ್ತಾನ 2015ರಲ್ಲಿ ತಗಾದೆ ತೆಗೆದಿತ್ತು. ಅಲ್ಲದೆ ಈ ಬಗ್ಗೆ ಪರಿಶೀಲನೆ ನಡೆಸಲು ತಟಸ್ಥ ಪರಿಣತರನ್ನು ನೇಮಕ ಮಾಡಬೇಕು ಎಂದು ಕೋರಿಕೆ ಇಟ್ಟಿತ್ತು.

ಆದರೆ 2016ರಲ್ಲಿ ಏಕಾಏಕಿ ಈ ಕೋರಿಕೆಯನ್ನು ಹಿಂಪಡೆದು, ಮಧ್ಯಸ್ಥಿಕೆ ನ್ಯಾಯಾಲಯದಲ್ಲೇ ಈ ಬಗ್ಗೆ ಇತ್ಯರ್ಥವಾಗಬೇಕು ಎಂದು ಪಟ್ಟುಹಿಡಿದಿತ್ತು. ಆದರೆ ಭಾರತ ತಟಸ್ಥ ಪರಿಣತರಿಗೆ ವಿಷಯ ಒಪ್ಪಿಸಲು ಕೋರಿಕೆ ಇಟ್ಟಿತ್ತು. ಎರಡೂ ದೇಶಗಳು ಪ್ರತ್ಯೇಕ ಪರಿಹಾರ ಬಯಸಿದ ಕಾರಣ ಈ ವಿಷಯಕ್ಕೆ ವಿಶ್ವಬ್ಯಾಂಕ್‌ 2016ರಲ್ಲಿ ಬ್ರೇಕ್‌ ಒತ್ತಿತ್ತು. ಉಭಯ ದೇಶಗಳು ಈ ವಿಷಯವಾಗಿ ಮಾತುಕತೆ ನಡೆಸುವಂತೆ ಸೂಚಿಸಿತ್ತು. 

ಇದನ್ನೂ ಓದಿ: ಭಾರತ ಸರಕಾರ ಸಿಂಧೂ ನದಿ ನೀರನ್ನು ತಡೆದರೆ ಪಾಕಿಸ್ತಾನಕ್ಕೆ ಆಗುವ ಹಾನಿ ಏನು? ಇಲ್ಲಿವೆ 5 ಭೀಕರ ಭವಿಷ್ಯಗಳು

ಇದೀಗ ನೋಟಿಸ್‌ ಜಾರಿ ಏಕೆ
ವಿಶ್ವಸಂಸ್ಥೆ ಸೂಚನೆ ಅನ್ವಯ 2017ರಿಂದ 2022ರವರೆಗೆ ಶಾಶ್ವತ ಸಿಂಧು ಆಯೋಗದಲ್ಲಿ ಈ ವಿಷಯ ಐದು ಬಾರಿ ವಿಷಯ ಚರ್ಚೆಗೆ ಬಂದರೂ ಪಾಕಿಸ್ತಾನ ಮಾತುಕತೆ ನಡೆಸಲೇ ಇಲ್ಲ. ಹೀಗಾಗಿ ಭಾರತ ನೋಟಿಸ್‌ ನೀಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..