ಲಡಾಖ್‌ ಗಡಿಯಲ್ಲಿ ಭಾರತ-ಚೀನಾ ನಡುವೆ ಮತ್ತಷ್ಟು ಸಂಘರ್ಷ..?

Published : Jan 28, 2023, 02:11 PM IST
ಲಡಾಖ್‌ ಗಡಿಯಲ್ಲಿ ಭಾರತ-ಚೀನಾ ನಡುವೆ ಮತ್ತಷ್ಟು ಸಂಘರ್ಷ..?

ಸಾರಾಂಶ

ಪೂರ್ವ ಲಡಾಖ್‌ನಲ್ಲಿ ಹಲವು ಪ್ರದೇಶಗಳ ಹಕ್ಕಿನ ವಿಷಯದಲ್ಲಿ ಭಾರತ ಮತ್ತು ಚೀನಾ ನಡುವೆ ಹಲವು ವರ್ಷಗಳಿಂದ ವಿವಾದ ಇದೆ. ಅದರ ಬೆನ್ನಲ್ಲೇ 2020ರಲ್ಲಿ ನಡೆದ ಗಲ್ವಾನ್‌ ಬಿಕ್ಕಟ್ಟು ಈ ಸಂಘರ್ಷವನ್ನು ತೀವ್ರಗೊಳಿಸಿದೆ.

ನವದೆಹಲಿ (ಜನವರಿ 28, 2023): ಪೂರ್ವ ಲಡಾಖ್‌ನ 26 ಪಹರೆ ಕೇಂದ್ರಗಳ ಮೇಲಿನ ಹಿಡಿತವನ್ನು ಭಾರತೀಯ ಸೇನೆ ಕಳೆದುಕೊಂಡಿದೆ ಎಂಬ ಆತಂಕಕಾರಿ ವರದಿ ಬೆನ್ನಲ್ಲೇ, ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ಮತ್ತಷ್ಟು ಸಂಘರ್ಷ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ವರದಿಯೊಂದು ಎಚ್ಚರಿಸಿದೆ.

ಪೂರ್ವ ಲಡಾಖ್‌ನಲ್ಲಿ (East Ladakh) ಹಲವು ಪ್ರದೇಶಗಳ ಹಕ್ಕಿನ ವಿಷಯದಲ್ಲಿ ಭಾರತ (India) ಮತ್ತು ಚೀನಾ (China) ನಡುವೆ ಹಲವು ವರ್ಷಗಳಿಂದ ವಿವಾದ ಇದೆ. ಅದರ ಬೆನ್ನಲ್ಲೇ 2020ರಲ್ಲಿ ನಡೆದ ಗಲ್ವಾನ್‌ (Galwan) ಬಿಕ್ಕಟ್ಟು ಈ ಸಂಘರ್ಷವನ್ನು ತೀವ್ರಗೊಳಿಸಿದೆ. ಅದರ ಬಳಿಕ ಚೀನಾ ಪೂರ್ವ ಲಡಾಖ್‌ನಲ್ಲಿ ತನ್ನ ಮಿಲಿಟರಿ (Military) ಮೂಲಸೌಕರ್ಯ ಹೆಚ್ಚಿಸಿಕೊಂಡಿದೆ. ಜೊತೆಗೆ ಕಳೆದ 2 ವರ್ಷಗಳಲ್ಲಿ ಚೀನಾ ಪದೇ ಪದೇ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ. ಹೀಗಾಗಿ ಜಾಗದ ಮೇಲಿನ ಹಕ್ಕಿನ ಕುರಿತಾಗಿ ಮುಂದಿನ ದಿನಗಳಲ್ಲಿ ಉಭಯ ಸೇನೆಗಳ ನಡುವೆ ಇನ್ನಷ್ಟು ಸಂಘರ್ಷದ ಸಾಧ್ಯತೆ ದಟ್ಟವಾಗಿದೆ ಎಂದು ವರದಿ ಹೇಳಿದೆ.

ಇದನ್ನು ಓದಿ: ಗಡಿಯಲ್ಲಿ ಮತ್ತೆ ಚೀನಾ ತಗಾದೆ: ಭಾರತಕ್ಕೆ ಸೇರಿದ ಭಾಗದಲ್ಲಿ 200 ಟೆಂಟ್‌ಗಳ ನಿರ್ಮಾಣ

ಸ್ಥಳೀಯ ಪೊಲೀಸ್‌ ಗುಪ್ತಚರರು ಸಂಗ್ರಹಿಸಿರುವ ಮತ್ತು ಇತ್ತೀಚಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ಬಿಕ್ಕಟ್ಟಿನ ಸ್ವರೂಪ ಆಧರಿಸಿ ಈ ವರದಿಯನ್ನು ತಯಾರಿಸಲಾಗಿದ್ದು, ಅದನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಹಿರಿಯ ಐಪಿಎಸ್‌ ಅಧಿಕಾರಿಗಳ ಸಭೆಯಲ್ಲಿ ಮಂಡಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಮೈನಸ್‌ 40 ಡಿಗ್ರಿ ಚಳೀಲಿ 3 ಈಡಿಯಟ್ಸ್‌ ಖ್ಯಾತಿ ವಾಂಗ್ಚುಕ್‌ ಉಪ​ವಾಸ
ಲೇಹ್‌: ಲಡಾಖ್‌ ಪರಿ​ಸ​ರ​ದಲ್ಲಿ ಉಂಟಾ​ಗಿ​ರುವ ಅಸ​ಮ​ತೋ​ಲ​ನ​ಕ್ಕೆ ಕಳ​ವಳ ವ್ಯಕ್ತ​ಪ​ಡಿಸಿ ಲಡಾಖ್‌ನ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಶುಕ್ರವಾರ 2ನೇ ದಿನ ಪೂರೈಸಿದೆ. ಬಾಲಿ​ವುಡ್‌ನ ‘3 ಈಡಿ​ಯ​ಟ್ಸ್‌​’ಗೆ ಪ್ರೇರಣೆಯಾಗಿದ್ದ ವಾಂಗ್ಚುಕ್‌ ಇದೀಗ ಖಾರ್ದೋಂಗ್ಲಾ ಪಾಸ್‌ ಬಳಿ ಮೈಸನ್‌ 40 ಡಿಗ್ರಿ ಚಳಿ​ಯಲ್ಲಿ ಉಪ​ವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಲಡಾ​ಖ್‌​ನಲ್ಲಿ ಹೆಚ್ಚಾ​ಗಿ​ರುವ ಔದ್ಯ​ಮೀ​ಕ​ರ​ಣ​ದಿಂದಾಗಿ ಇಲ್ಲಿ​ರುವ ನೀರ್ಗ​ಲ್ಲು​ಗಳು ಅಳಿ​ವಿ​ನಂಚಿಗೆ ತಲು​ಪಿವೆ. ಒಂದು ವೇಳೆ ಇವು ನಾಶ​ವಾ​ದರೆ ಈ ಭಾಗಕ್ಕೆ ಭಾರಿ ಪ್ರಮಾ​ಣ​ದಲ್ಲಿ ಕುಡಿ​ಯುವ ನೀರಿನ ಬರ ಎದು​ರಾ​ಗ​ಲಿದೆ ಎಂದು ಅವರು ಹೇಳಿ​ದ್ದಾರೆ. 

ಇದನ್ನೂ ಓದಿ: ಚೀನಾ ಗಡಿಗಳನ್ನು ಬಲಪಡಿಸಲು 2000 Drone ಖರೀದಿಸಲಿದೆ ಮೋದಿ ಸರ್ಕಾರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ