ಭಾರತದ ಈ ಘೋಷಣೆ ಬೆನ್ನಲ್ಲೇ ಮೆತ್ತಗಾದ ಚೀನಾ

Published : Dec 04, 2020, 09:39 AM IST
ಭಾರತದ ಈ ಘೋಷಣೆ ಬೆನ್ನಲ್ಲೇ ಮೆತ್ತಗಾದ ಚೀನಾ

ಸಾರಾಂಶ

ಬ್ರಹ್ಮಪುತ್ರ ನದಿಗೆ ಅಣೆಕಟ್ಟು ಕಟ್ಟುವ ವಿಚಾರವಾಗಿ  ಭಾರತ ಹಾಗೂ ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಈ ಯೋಜನೆ ಪ್ರಾರಂಭಿಸುವುದಾಗಿ ಚೀನಾ ಹೇಳಿದೆ. 

ಬೀಜಿಂಗ್‌ (ಡಿ.04): ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವ ತನ್ನ ಘೋಷಣೆಗೆ ಪ್ರತಿಯಾಗಿ ಭಾರತವೂ ಡ್ಯಾಂ ಕಟ್ಟುವ ಘೋಷಣೆ ಮಾಡಿದ ಬಳಿಕ ಚೀನಾ ತಣ್ಣಗಾಗಿದೆ. ಭಾರತ ಹಾಗೂ ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಈ ಯೋಜನೆ ಪ್ರಾರಂಭಿಸುವುದಾಗಿ ಚೀನಾ ಹೇಳಿದೆ. 

ಕಳೆದ ಹಲವಾರು ವರ್ಷಗಳಿಂದ ಮೂರೂ ದೇಶಗಳು ನದಿಯಲ್ಲಿನ ಪ್ರವಾಹ ಹಾಗೂ ಇನ್ನಿತರ ಅಪಾಯಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತಿವೆ. ಭವಿಷ್ಯದಲ್ಲಿ ಭಾರತ, ಬಾಂಗ್ಲಾ ಸಹಿತ ಇನ್ನಿತರ ದೇಶಗಳ ಜತೆ ಉತ್ತಮ ಮಾತುಕತೆಗಳು ಮುಂದುವರಿಯಲಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಹುವಾ ಚುನಿಯಾಂಗ್‌ ಹೇಳಿದ್ದಾರೆ.

2 ವರ್ಷ ಬಳಿಕ ಭಾರತದ ಅಕ್ಕಿ ಖರೀದಿಸಿದ ಚೀನಾ! ...

ಇದೇ ವೇಳೆ ಬ್ರಹ್ಮಪುತ್ರ ನದಿ ಬಗ್ಗೆ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ವಿಚಾರದಲ್ಲಿ ನಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಚೀನಾದೊಂದಿಗೆ ತೊಡಗಿಕೊಳ್ಳಲು ನಾವು ಉದ್ದೇಶಿಸಿದ್ದೇವೆ ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಮಶಾನದಲ್ಲಿ ನಿಗೂಢ ಕೃತ್ಯ : ಚಿತೆಯ ಮೇಲೆ ಕುರಿ ತಲೆಬುರುಡೆ; ಮದ್ಯದ ಬಾಟಲಿಗಳು, ಬೆಚ್ಚಿಬಿದ್ದ ಗ್ರಾಮಸ್ಥರು
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?