
ನವದೆಹಲಿ(ಜು.27): ಅತೀ ಅವಶ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ, ಕೊರೋನಾ 2ನೇ ಅಲೆ ತಗ್ಗಿದೆ ಎಂದು ಹಿಗ್ಗುವ ಸಮಯ ಇದಲ್ಲ. ಕಾರಣ ತೀವ್ರಗತಿಯಲ್ಲಿ ಇಳಿಕೆಯಾಗುತ್ತಿದ್ದ ದೇಶದ ಕೊರೋನಾ ಪ್ರಕರಣ ಸಂಖ್ಯೆ ಇದೀಗ ಏರಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.
ಪೋಷಕರ ಆತಂಕ ದೂರ; ಮುಂದಿನ ತಿಂಗಳಿಂದ ಮಕ್ಕಳಿಕೆ ಕೊರೋನಾ ಲಸಿಕೆ ಅಭಿಯಾನ!
ಕಳೆದ ಕೆಲ ವಾರಗಳಿಂದ ದೇಶದಲ್ಲಿನ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ ದೇಶದ 54 ಜಿಲ್ಲೆಗಳಲ್ಲಿ ಹೊಸ ಕೊರೋನಾ ಪ್ರಕರಣ ಸಂಖ್ಯೆ ಶೇ.10ಕ್ಕಿಂತ ಹೆಚ್ಚಾಗಿದೆ. ಪ್ರತಿ ದಿನ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದೆ. ಮೇ. 25ರ ವೇಳೆ ಭಾರತ 379 ಜಿಲ್ಲೆಗಳಲ್ಲಿ 100ರೊಳಗೆ ಕೊರೋನಾ ಪ್ರಕರಣ ಸಂಖ್ಯೆ ದಾಖಲಾಗುತ್ತಿತ್ತು.
ಈ ಸಂಖ್ಯೆ ಜೂನ್ 25ರ ವೇಳೆಗೆ 121ಕ್ಕೆ ಇಳಿದಿತ್ತು. ಉಳಿದ ಜಿಲ್ಲೆಗಳಲ್ಲಿ ಪ್ರಕರಣ ಸಂಖ್ಯೆ 100ಕ್ಕಿಂತ ಹೆಚ್ಚಾಗಿದೆ. ಇದೀಗ 100ರೊಳಗೆ ಕೋವಿಡ್ ಪ್ರಕರಣ ದಾಖಲಾಗುವ ಜಿಲ್ಲೆಗಳ ಸಂಖ್ಯೆ 62ಕ್ಕೆ ಇಳಿದಿದೆ. ದೇಶದ 22 ಜಿಲ್ಲೆಗಳಲ್ಲಿ ಕೊರೋನಾ ಸಂಖ್ಯೆ ಏರಿಕೆಯಾಗುತ್ತಿದೆ. ಈ ಸಂಖ್ಯೆ ಪೈಕಿ 7 ಜಿಲ್ಲೆಗಳು ಕೇರಳದ ಜಿಲ್ಲೆಗಳಾಗಿದ್ದು, ಕರ್ನಾಟಕದ ಆತಂಕವೂ ಹೆಚ್ಚಾಗುತ್ತಿದೆ.
ಮಣಿಪುರದ 5 ಜಿಲ್ಲೆ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶದ 3 ಜಿಲ್ಲೆ, ಮಹಾರಾಷ್ಟ್ರದ 2 ಜಿಲ್ಲೆ, ಅಸ್ಸಾಂ ಹಾಗೂ ತ್ರಿಪುರದ 1 ಜಿಿಲ್ಲೆಗಳಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿ ಸಂಖ್ಯೆ ತೆರೆದಿಟ್ಟಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ