ಪುದುಚೇರಿಯಿಂದ ಬಿಜೆಪಿಗೆ ಮೊದಲ ರಾಜ್ಯಸಭಾ MP; ಹೆಮ್ಮೆಯ ವಿಚಾರ ಎಂದ ಪ್ರಧಾನಿ ಮೋದಿ!

By Suvarna NewsFirst Published Sep 28, 2021, 7:54 PM IST
Highlights
  • ಪುದುಚೇರಿ ರಾಜ್ಯಸಭೆಯಿಂದ ಸೆಲ್ವಗಣಬತಿ ಆಯ್ಕೆ
  • ಇದೇ ಮೊದಲ ಬಾರಿಗೆ ಪುದುಚೇರಿಯಿಂದ ಬಿಜೆಪಿ ಅಭ್ಯರ್ಥಿಗೆ ಗೆಲುವು
  • ಇತಿಹಾಸ ರಚಿಸಿದ ಸೆಲ್ವಗಣಬತಿಗೆ, ಬಿಜೆಪಿ ಕಾರ್ಯಕರ್ತರಿಗೆ ಮೋದಿ ಅಭಿನಂದನೆ
  • ಐತಿಹಾಸಿಕ ಗೆಲುವು ಸಂಭ್ರಮಿಸಿದ ಬಿಜೆಪಿ

ನವದೆಹಲಿ(ಸೆ.28): ದಕ್ಷಿಣ ಭಾರತದಲ್ಲಿ ಬಲವಾರಿ ಬೇರೂರಲು ಹವಣಿಸುತ್ತಿರುವ ಬಿಜೆಪಿಗೆ(BJP) ಇದೀಗ ಅತೀ ದೊಡ್ಡ ಗೆಲುವು ಸಿಕ್ಕಿದೆ. ಇದೇ ಮೊದಲ ಬಾರಿಗೆ ಪುದುಚೇರಿ(puducherry) ರಾಜ್ಯಸಭೆ ಬಿಜೆಪಿ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ಇದೇ ಮೊದಲ ಬಾರಿಗೆ ಪುದುಚೇರಿ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಗೆಲುವನ್ನು ಪ್ರಧಾನಿ ಮೋದಿ(Narendra Modi) ಸೇರಿ ಬಿಜೆಪಿ ಪಕ್ಷ ಸಂಭ್ರಮಿಸಿದೆ.

ರಾಜ್ಯಸಭೆಯ ಬಿಜೆಪಿ ನಾಯಕರಾಗಿ ಪಿಯೂಷ್ ಗೋಯೆಲ್ ಆಯ್ಕೆ!

ಪುದುಚೇರಿ ರಾಜ್ಯಸಭೆಯಿಂದ(puducherry Rajya sabha) ಇದೇ ಮೊದಲ ಬಾರಿಗೆ ಬಿಜೆಪಿ ಸಂಸದರಾಗಿ ಆಯ್ಕೆಯಾದ ಎಸ್ ಸೆಲ್ವಗಣಬತಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಬಿಜೆಪಿ ಪಕ್ಷದ ಕಾರ್ಯಕರ್ತರು, ನಾಯಕರಿಗೆ ಅತೀವ ಸಂತಸ ಹಾಗೂ ಹೆಮ್ಮೆಯ ದಿನವಾಗಿದೆ. ಬಿಜೆಪಿ ಇದೇ ಮೊದಲ ಬಾರಿಗೆ ಪುದುಚೇರಿ ರಾಜ್ಯಸಭೆ ಸಂಸದರನ್ನು ಪಡೆದಿದೆ. ಪುದುಚೇರಿ ಜನ ನಮ್ಮ ಮೇಲಿಟ್ಟಿರುವ ನಂಬಿಕೆಗೆ ತಕ್ಕ ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

It is a matter of immense pride for every BJP Karyakarta that our Party has got it’s first ever Rajya Sabha MP from Puducherry in Shri S. Selvaganabathy Ji. The trust placed in us by the people of Puducherry is humbling. We will keep working for Puducherry’s progress.

— Narendra Modi (@narendramodi)

ಇದೇ ವೇಳೆ ಅಸ್ಸಾನಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನ್ವಾಲ್ ಹಾಗೂ ಮಧ್ಯಪ್ರದೇಶದಿಂದ ಆಯ್ಕೆಯಾದ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಲ್ ಮುರುಗನ್ ಅವರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

 

Congratulations to my Ministerial colleagues, Shri Ji and Shri Ji on being elected to the Rajya Sabha from Assam and Madhya Pradesh respectively. I am confident that they will enrich Parliamentary proceedings and further our agenda of public good.

— Narendra Modi (@narendramodi)

ಆಯುಷ್ ಕಾಲೇಜಿಗೆ ಬಂಪರ್ ಕೊಡುಗೆ; ಆರ್ಥಿಕ ಸಹಾಯವನ್ನು 9 ರಿಂದ 70 ಕೋಟಿ ರೂ.ಗೆ ಹೆಚ್ಚಳ!

ತಮಿಳುನಾಡು, ಕೇರಳದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಬಿಜೆಪಿಗೆ ಸೆಲ್ವಗಣಬತಿ ಆಯ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಪುದುಚೇರಿ ರಾಜ್ಯಸಭೆ ಸೆಲ್ವಗಣಬತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಪುದುಚೇರಿಯಲ್ಲಿ ಬಿಜೆಪಿ AINRC ಜೊತೆ ಮೈತ್ರಿ ಮಾಡಿಕೊಂಡಿದೆ.

ಹೊಸ ಸಂಸತ್ ನಿರ್ಮಾಣ ಕಾರ್ಮಿಕರಿಗೆ ಲಸಿಕೆ, ಮಾಸಿಕ ಆರೋಗ್ಯ ತಪಾಸಣೆ ಕಡ್ಡಾಯ; ಪ್ರಧಾನಿ ಮೋದಿ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ನೂತನವಾಗಿ ಆಯ್ಕೆಯಾದ ರಾಜ್ಯಸಭಾ ಸಂಸದರಿಗೆ ಶುಭಕೋರಿದ್ದಾರೆ.

click me!