ಕೇಂದ್ರ-ರಾಜ್ಯ ಜಗಳದ ಕುರಿತು ಬ್ಯಾಂಕಾಕ್‌ನಲ್ಲಿ ಪ್ರಶ್ನೆ ಮಾಡಿದ ತಮಿಳುನಾಡು ವ್ಯಕ್ತಿ, 'ಉತ್ತರಿಸಲ್ಲ..' ಎಂದ ಜೈಶಂಕರ್‌!

By Santosh NaikFirst Published Aug 18, 2022, 10:34 AM IST
Highlights

ಭಾರತದಲ್ಲಿ ಬದುಕುವ ಬಗ್ಗೆ ಮಾತನಾಡಿದ ಜೈಶಂಕರ್‌, ನಾನು ವಿದೇಶಾಂಗ ಇಲಾಖೆಯ ಅಧಿಕಾರಿಯಾಗಿ ಸೇರಿದಾಗ ನನ್ನ ಸಂಬಂಧಿಕರು ಹೇಳುತ್ತಿದ್ದದ್ದು ಒಂದೇ ಮಾತು. ಕೊನೆಗೂ ದೇಶದಲ್ಲಿ ಪಾಸ್‌ಪೋರ್ಟ್‌ ಸುಲಭವಾಗಿ ಪಡೆದುಕೊಳ್ಳಲು ನಮ್ಮ ಒಬ್ಬ ವ್ಯಕ್ತಿ ಇದ್ದಾನೆ ಎನ್ನುವುದು. ಇದೇ ರೀತಿಯಾಗಿ ಅವರು ನನ್ನ ಕೆಲಸವನ್ನು ನೋಡಿದ್ದರು ಎಂದು ಜೈಶಂಕರ್‌ ಹೇಳಿದ್ದಾರೆ.

ಬ್ಯಾಂಕಾಕ್‌ (ಆ.18): ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಇತ್ತೀಚೆಗೆ ಥಾಯ್ಲೆಂಡ್‌ ಪ್ರವಾಸಕ್ಕೆ ಹೋಗಿದ್ದರು. ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಅವರಿಗೆ ತಮಿಳುನಾಡಿನ ಮೂಲದ ವ್ಯಕ್ತಿಯೊಬ್ಬ ದೇಶದ ರಾಜಕೀಯ ಕುರಿತಾಗಿ ಪ್ರಶ್ನೆ ಕೇಳಿದ್ದ. ಇದಕ್ಕೆ ಜೈಶಂಕರ್‌ ನೀಡಿದ ಉತ್ತರ ಸಾಕಷ್ಟು ವೈರಲ್‌ ಆಗಿದೆ.  ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಬ್ಯಾಂಕಾಕ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ದೇಶದ ರಾಜಕೀಯದ ಕುರಿತಾಗಿ ಎದುರಾದ ಪ್ರಶ್ನೆಗೆ, ವಿದೇಶದ ನೆಲದಲ್ಲಿ ಭಾರತದ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿದರು. ನಾನು ತಮಿಳುನಾಡು ಮೂಲದವನು ಎಂದು ಹೇಳಿಕೊಂಡ ವ್ಯಕ್ತಿ, ತಮಿಳುನಾಡು ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ-ರಾಜ್ಯ ಸಂಘರ್ಷದ ಬಗ್ಗೆ ವಿದೇಶಾಂಗ ಸಚಿವರಿಗೆ ಪ್ರಶ್ನೆ ಮಾಡಿದರು. "ನಾನು ವಿದೇಶದ ನೆಲದಲ್ಲಿದ್ದಾಗ ಭಾರತದ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ನೀವು ಈ ಪ್ರಶ್ನೆಯನ್ನು ಖಂಡಿತವಾಗಿ ನನಗೆ ಕೇಳಬಹುದು. ಅದಕ್ಕಾಗಿ ನೀವು ಭಾರತಕ್ಕೆ ಬರಬೇಕು. ಅಲ್ಲಿ ನಾನು ಖಂಡಿತವಾಗಿ ಇದಕ್ಕೆ ಉತ್ತರ ನೀಡುತ್ತೇನೆ' ಎಂದು ಖಡಕ್‌ ಆಗಿ ಹೇಳಿದ್ದಾರೆ.

EAM S.Jaishankar sir puts a clear picture in front of the world about importing crude oil, says, "I have a country with per capita income of $2000, these aren't people who can afford higher energy prices. My moral duty to ensure best deal."pic.twitter.com/hLOZGZomwu

— Kadak Samachar (@KadakSamachar)


ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಜೈಶಂಕರ್‌: ಸಂವಾದ ಕಾರ್ಯಕ್ರಮದಲ್ಲಿ ಜೈಶಂಕರ್‌ ಅವರಿಗೆ ಹಲವಾರು ವಿಚಾರಗಳ ಪ್ರಶ್ನೆ ಪ್ರಶ್ನೆ ಕೇಳಲಾಯಿತು. ಭಾರತ ಹಾಗೂ ಥಾಯ್ಲೆಂಡ್‌ ನಡುವಿನ ಸಂಬಂಧ, ಆತ್ಮನಿರ್ಭರ ಭಾರತ, ವ್ಯವಹಾರವನ್ನು ಸುಲಭಗೊಳಿಸುವುದು, ಭಾರತೀಯ ವಿಶ್ವವಿದ್ಯಾಲಯಗಳು,  ರಷ್ಯಾ-ಉಕ್ರೇನ್ ಯುದ್ಧದ ಹೊರತಾಗಿಯೂ ಭಾರತವು ರಷ್ಯಾದ ತೈಲವನ್ನು ಖರೀದಿಸುವುದು ಇತ್ಯಾದಿ ವಿಚಾರಗಳಲ್ಲಿ ಜೈಶಂಕರ್‌ ಅವರಿಗೆ ಸೇರಿದ್ದ ಜನಸಮೂಹ ಪ್ರಶ್ನೆ ಕೇಳಿದ್ದರು.

ಇಂದು ಪಾಸ್‌ಪೋರ್ಟ್‌ ಕೆಲವೇ ದಿನಗಳಲ್ಲಿ ಸಿಗುತ್ತದೆ: ಭಾರತದಲ್ಲಿ ವ್ಯವಹಾರದ ಸುಲಭತೆ ಮತ್ತು ಸುಲಭ ಜೀವನ ಕುರಿತು ಮಾತನಾಡಿದ ಸಚಿವರು, ಪೇಪರ್‌ ವರ್ಕ್‌ ಕೆಲಸವನ್ನು ಇನ್ನಷ್ಟು ಸರಳೀಕರಣ ಮಾಡುವ ಮೂಲಕ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗುತ್ತಿದೆ ಎಂದು ಹೇಳಿದರು. "ಭಾರತದಲ್ಲಿ ಪಾಸ್‌ಪೋರ್ಟ್‌ಗಳನ್ನು ವಿತರಿಸಲು ತಿಂಗಳುಗಟ್ಟಲೆ ತೆಗೆದುಕೊಳ್ಳುತ್ತಿದ್ದ ಸಮಯವಿತ್ತು. ಬಹುಶಃ ಒಂದು ವರ್ಷಕ್ಕೂ ಹೆಚ್ಚು. ನಾವು ಭಾರತೀಯ ವಿದೇಶಾಂಗ ಸೇವೆಗೆ ಸೇರಿದಾಗ, ರಾಯಭಾರಿ ಸ್ವಾಮಿನಾಥನ್ ಕೂಡ ಇದನ್ನು ನೆನಪಿಸಿಕೊಳ್ಳಬಹುದು. ನಮ್ಮ ಸಂಬಂಧಿಕರು 'ಕನಿಷ್ಠ ಈಗ ನಮಗೆ ಪಾಸ್‌ಪೋರ್ಟ್‌ಗೆ ಸಹಾಯ ಮಾಡುವ ಯಾರಾದರೂ ಒಬ್ಬರು ಈ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ' ಎನ್ನುತ್ತಿದ್ದರು. ಅವರು ನಮ್ಮ ಕೆಲಸವನ್ನು ಆ ರೀತಿಯಲ್ಲಿ ನೋಡಿದ್ದರು. ನಂತರ ಪಾಸ್‌ ಪೋರ್ಟ್‌ ಕಾಯುವಿಕೆಗಾಗಿ ಅನೇಕ ತಿಂಗಳುಗಳು ಈಗ ಕೆಲವೇ ತಿಂಗಳುಗಳಾಗಿವೆ ಮತ್ತು ಈಗ ಅದು ಕೆಲವು ದಿನಗಳ ಹಂತಕ್ಕೆ ತಲುಪಿದೆ," ಎಂದು ಜೈಶಂಕರ್ ಹೇಳಿದರು.

ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ ಇಮ್ರಾನ್‌ ಖಾನ್..!

"ಭಾರತ ಎಲ್ಲಿಗೆ ಹೋಗುತ್ತಿದೆ ಎಂಬುದರ ಕುರಿತು ವ್ಯಾಪಾರ ಜಗತ್ತು ಇಂದು ಅತ್ಯಂತ ಬುಲ್ಲಿಶ್‌ ಆಗಿದೆ. ಮತ್ತು ಅದರಲ್ಲಿ ಕೆಲವು ಸ್ಟಾಕ್ ಮಾರ್ಕರ್‌ನಲ್ಲಿ ಗೋಚರಿಸುತ್ತವೆ. ಎಫ್‌ಡಿಐ ಕೂಡ ಉತ್ತಮ ಕಥೆಯನ್ನು ತೋರಿಸುತ್ತದೆ" ಎಂದು ವಿದೇಶಾಂಗ ಸಚಿವರು ಹೇಳಿದರು. ಚೀನೀ ಉತ್ಪನ್ನಗಳು ಭಾರತೀಯ ಮಾರುಕಟ್ಟೆಯಲ್ಲಿ ಪ್ರವಾಹದ ರೀತಿಯಲ್ಲಿ ಬರುತ್ತಿರುವ ಕುರಿತು ಮಾತನಾಡಿದ ಜೈಶಂಕರ್ ಅವರು 90 ರ ದಶಕದಲ್ಲಿ ಆರ್ಥಿಕತೆಯನ್ನು ತೆರೆಯುವುದು ಸರಿಯಾದ ವಿಷಯ ಎಂದು ಹೇಳಿದರು. ಏಕೆಂದರೆ ಅಂದು ಹೆಚ್ಚು ರಾಜ್ಯ ನಿಯಂತ್ರಣವಿತ್ತು, ಆರ್ಥಿಕತೆಯು ಸ್ಪರ್ಧಾತ್ಮಕವಾಗಿಲ್ಲ, ಆದರೆ ವ್ಯಾಪಾರ ಸಂಸ್ಥೆಗಳು ಮತ್ತು ದೇಶಗಳು ಇತರರಿಂದ ಹೆಚ್ಚು ಹೆಚ್ಚು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದವು. "ಚೀನಾ ಮಾತ್ರವಲ್ಲ, ನೀವು ಕೊರಿಯಾ, ಜಪಾನ್‌ಗಳನ್ನು ನೋಡಿದರೆ, ಅವರು ದೇಶದೊಳಗೆ ಪೂರೈಕೆ ಸರಪಳಿಯನ್ನು ಹೊಂದುವ ಮೂಲಕ ತಮ್ಮ ಆರ್ಥಿಕತೆಯನ್ನು ನಿರ್ಮಿಸಿದ್ದಾರೆ. ಹಾಗಾಗಿ ವ್ಯಾಪಾರ ಸಂಸ್ಥೆಗಳು ತಮ್ಮ ಆಂತರಿಕ ಸರಬರಾಜುಗಳನ್ನು ಅವಲಂಬಿಸಿವೆ. ಎಂಎಸ್‌ಎಂಇಗಳಿಗೆ ಭಾರತದಲ್ಲಿ ಸಿಗಬೇಕಾದ ರೀತಿಯ ಬೆಂಬಲ ಸಿಗಲಿಲ್ಲ. ಉತ್ತಮ ಭಾರತೀಯ ಉತ್ಪನ್ನಗಳಿದ್ದಾಗ ಇದು ಸಂಭವಿಸುತ್ತದೆ. ಆತ್ಮನಿರ್ಭರ್ ಭಾರತ್ ವಸಾಹತುಶಾಹಿ ಮನಸ್ಥಿತಿಯನ್ನು ಹೋಗಲಾಡಿಸುವ ಬಗ್ಗೆಯೂ ಇದೆ" ಎಂದು ಜೈಶಂಕರ್ ಹೇಳಿದರು.

ಉ​ಕ್ರೇನ್‌ ವೈದ್ಯ​ ವಿದ್ಯಾ​ರ್ಥಿ​ಗಳ ಶಿಕ್ಷಣಕ್ಕೆ ಶೀಘ್ರ ಪರಿಹಾರ: ಕೇಂದ್ರ ಸಚಿವ ಜೈಶಂಕರ್‌

ದುಬಾರಿ ಗ್ಯಾಸ್, ತೈಲ ಖರೀದಿ ಸಾಧ್ಯವಿಲ್ಲ: ಯುದ್ಧದ ನಡುವೆಯೂ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಬಗ್ಗೆ ಮಾತನಾಡಿದ ಜೈಶಂಕರ್‌, ದುಬಾರಿ ಗ್ಯಾಸ್‌ ಹಾಗೂ ತೈಲ ಖರೀದಿ ನಮ್ಮಿಂದ ಸಾಧ್ಯವಿಲ್ಲ. ಬಹುಶಃ ಯುರೋಪ್‌ ಈ ಕೆಲಸ ಮಾಡಬಹುದು. ಹಾಗಾಗಿ ಕಡಿಮೆ ಬೆಲೆಯಲ್ಲಿ ನಾವು ರಷ್ಯಾದಿಂದ ತೈಲ ಖರೀದಿ ಮಾಡ್ತೇವೆ ಎಂದು ಜೈಶಂಕರ್‌ ಹೇಳಿದ್ದಾರೆ.
 

click me!