ಯಾವ ವಯಸ್ಸಿಗರನ್ನು ಹೆಚ್ಚು ಬಲಿ ಪಡೆದಿದೆ ಕೊರೋನಾ? ವರದಿ ಬಿಡುಗಡೆ ಮಾಡಿದ ಸರ್ಕಾರ !

Suvarna News   | Asianet News
Published : Apr 18, 2020, 06:55 PM ISTUpdated : Apr 18, 2020, 07:02 PM IST
ಯಾವ ವಯಸ್ಸಿಗರನ್ನು ಹೆಚ್ಚು ಬಲಿ ಪಡೆದಿದೆ ಕೊರೋನಾ? ವರದಿ ಬಿಡುಗಡೆ ಮಾಡಿದ ಸರ್ಕಾರ !

ಸಾರಾಂಶ

ಕೊರೋನಾ ವೈರಸ್ ಹರಡುವಿಕೆ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 480ಕ್ಕೇರಿದೆ. ಇದೀಗ ಕೇಂದ್ರ ಆರೋಗ್ಯ ಇಲಾಖೆ ಯಾವ ವಯಸ್ಸಿಗರನ್ನು ಕೊರೋನಾ ಬಲಿ ಪಡೆದಿದೆ ಅನ್ನೋ ವರದಿಯನ್ನು ಬಹಿರಂಗ ಮಾಡಿದೆ. ಈ ವರದಿಯ ಅಂಕಿ ಅಂಶ ನೋಡಿದರೆ ಕೊರೋನಾ ಯಾರನ್ನೂ ಬಿಟ್ಟಿಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ.  

ನವದೆಹಲಿ(ಏ.18): ಭಾರತದಲ್ಲಿ ಕೊರೋನಾ ವೈರಸ್ ಹರಡುವಿಕೆ ಆರಂಭವಾದಾದ ಇದು 60 ವಯಸ್ಸು ದಾಟಿದವರಿಗೆ ಹೆಚ್ಚಾಗಿ ಸೋಂಕು ತಗುಲುತ್ತಿದೆ ಎಂದು ಹಲವರು ನಿರಾಳರಾಗಿದ್ದರು. ಹಿರಿಯರು ಹೊರಗೆ ಹೋಗಲೇ ಬಾರದು, ಉಳಿದವರು ಎಚ್ಚರಿವಿದ್ದರೆ ಸಾಕು ಎಂದು ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ದಿನದಿಂದ ದಿನಕ್ಕೆ ಕೊರೋನಾ ಎಲ್ಲಾ ವಯಸ್ಸಿಗರನ್ನೂ ಆವರಿಸಿಕೊಂಡಿತು. ಇದೀಗ ಕೊರೋನಾಗೆ ಬಲಿಯಾದವರ ಸಂಖ್ಯೆ 480ಕ್ಕೇರಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಹೊಸ ಅಂಕಿ ಅಂಶ ಬಿಡುಗಡೆ ಮಾಡಿದೆ.

ಕೊರೋನಾ ನಿವಾರಣೆಗೆ ಹೊಸದೊಂದು 'ಬೆಂಕಿ ಟಿಪ್ಸ್' ನೀಡಿದ ಆರೋಗ್ಯ ಸಚಿವ ಶ್ರೀರಾಮುಲು..!.

ಕೊರೋನಾಗೆ ಮೃತರಾದ 480 ಮಂದಿಯಲ್ಲಿ ಎಲ್ಲಾ ವಯಸ್ಸಿನವರು ಇದ್ದಾರೆ. ಇಲ್ಲಿ ಹಸುಗೂಸಿನಿಂದ ಹಿಡಿದು ಅತ್ಯಂತ ಹಿರಿಯ ನಾಗರೀಕರೂ ಕೊರೋನಾಗೆ ಬಲಿಯಾಗಿದ್ದಾರೆ. ಆದರೆ ಗರಿಷ್ಠ ಬಲಿಯಾದವರ ವಯಸ್ಸು 60 ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಭಾರತದಲ್ಲಿ ಕೊರೋನಾಗೆ ಬಲಿಯಾದ ಶೇಕಡಾ 75.3 ರಷ್ಟು ಮಂದಿಯ ವಯಸ್ಸು 60 ದಾಟಿದೆ.

ಅಬ್ಬಬ್ಬಾ..! ಕರ್ನಾಟಕದಲ್ಲಿ 370ರ ಗಡಿ ದಾಟಿದ ಕೊರೋನಾ ಪೀಡಿತರ ಸಂಖ್ಯೆ..!.

ಯಾವ ವಯಸ್ಸಿಗರನ್ನು ಬಲಿ ಪಡೆದಿದೆ ಕೊರೋನಾ? ಇಲ್ಲಿದೆ ಅಂಕಿ ಅಂಶ
0 ಯಿಂದ 45 ವರ್ಷ ವಯೋಮಿತಿ = 14.4% ರಷ್ಟು ಮಂದಿ ಕೊರೋನಾಗೆ ಬಲಿ
45 ಯಿಂದ 60 ವರ್ಷ ವಯೋಮಿತಿ = 10.3% ರಷ್ಟು ಮಂದಿ ಕೊರೋನಾಗೆ ಬಲಿ
60 ಯಿಂದ 75 ವರ್ಷ ವಯೋಮಿತಿ = 33.1% ರಷ್ಟು ಮಂದಿ ಕೊರೋನಾಗೆ ಬಲಿ
75 ವರ್ಷಕ್ಕಿಂತ ಮೇಲ್ಪಟ್ಟವರು = 42.2% ರಷ್ಟು ಮಂದಿ ಕೊರೋನಾಗೆ ಬಲಿ

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14,378ಕ್ಕೇರಿದೆ. ಇದರಲ್ಲಿ ತಬ್ಲೀಘಿ ಜಮಾತ್ ನಂಟಿನ ಸಂಖ್ಯೆ 4291. ಕಳೆದ 24 ಗಂಟೆಯಲ್ಲಿ 991 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. 1,992 ಮಂದಿ ಕೊರೋನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ