ಛೀ.. ಎಂಥಾ ವಿಕೃತಿ! ಶಿವಾಜಿ ಮಹಾರಾಜ್‌, ರಾಣಿ ಪದ್ಮಿನಿ ಚಿತ್ರವನ್ನು ಶೌಚಾಲಯದ ಚಿಹ್ನೆಗೆ ಬಳಸಿದ ಪ್ರಖ್ಯಾತ ಹೋಟೆಲ್‌!

Published : Feb 23, 2026, 07:20 PM IST
Haryana Toilet Shivaji Maharaj

ಸಾರಾಂಶ

Portraits of Shivaji Maharaj & Rani Padmini Used as Washroom Signage ಹರಿಯಾಣದ 'ಮಿಲನ್ ಬ್ಯಾಂಕ್ವೆಟ್ ಹಾಲ್' ಶೌಚಾಲಯದ ಬಾಗಿಲುಗಳಿಗೆ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಸೈನೇಜ್‌ ಆಗಿ ಬಳಸಿ ಭಾರೀ ವಿವಾದ ಸೃಷ್ಟಿಸಿದೆ.

ನವದೆಹಲಿ (ಫೆ.23): ಹರಿಯಾಣದ ಸಿಕ್ರಿಯಲ್ಲಿರುವ 'ಮಿಲನ್ ಬ್ಯಾಂಕ್ವೆಟ್ ಹಾಲ್' (Milan Banquet Hall) ಮಾಡಿರುವ ಎಡವಟ್ಟು ಈಗ ಇಡೀ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದ ಹೆಮ್ಮೆಯ ವೀರ ಪುರುಷ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ತ್ಯಾಗದ ಸಂಕೇತ ರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಶೌಚಾಲಯದ ಸೈನೇಜ್‌ ಆಗಿ ಬಳಸಿರುವುದು ಭಾರಿ ವಿವಾದ ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣವಾದ 'X' (ಟ್ವಿಟರ್) ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಬ್ಯಾಂಕ್ವೆಟ್ ಹಾಲ್‌ನ ಶೌಚಾಲಯದ ಬಾಗಿಲಿಗಳಿಗೆ ಸೈನೇಜ್‌ ಆಗಿ ಈ ಐತಿಹಾಸಿಕ ವ್ಯಕ್ತಿಗಳ ಫೋಟೋಗಳನ್ನು ಹಾಕಲಾಗಿದೆ. ಪುರುಷರ ಶೌಚಾಲಯಕ್ಕೆ ಶಿವಾಜಿ ಮಹಾರಾಜ್ ಮತ್ತು ಮಹಿಳೆಯರ ಶೌಚಾಲಯಕ್ಕೆ ರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಬಳಸಲಾಗಿದೆ. ಈ ದೃಶ್ಯಗಳನ್ನು ಕಂಡ ನೆಟ್ಟಿಗರು ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರುತ್ತಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಅಲೆ

ಈ ಕೃತ್ಯವನ್ನು 'ಅಸಡ್ಡೆ' ಮತ್ತು 'ಅಗೌರವದ ಪರಮಾವಧಿ' ಎಂದು ಬಣ್ಣಿಸಿರುವ ಜನರು, ಹೋಟೆಲ್ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ "ಮಹಾನ್ ಪುರುಷರ ಫೋಟೋಗಳನ್ನು ಎಲ್ಲಿ ಹಾಕಬೇಕು ಎಂಬ ಕನಿಷ್ಠ ಜ್ಞಾನವೂ ನಿಮಗಿಲ್ಲವೇ?" ಎಂದು ಯೂಸರ್‌ ಒಬ್ಬರು ಪ್ರಶ್ನಿಸಿದ್ದಾರೆ. "ಶಿವಾಜಿ ಮಹಾರಾಜ್ ಸ್ವರಾಜ್ಯದ ಸಂಕೇತ, ರಾಣಿ ಪದ್ಮಿನಿ ಗೌರವಕ್ಕಾಗಿ ಪ್ರಾಣತ್ಯಾಗ ಮಾಡಿದವರು. ಅವರ ಫೋಟೋಗಳನ್ನು ಶೌಚಾಲಯದ ಬಾಗಿಲಿಗೆ ಬಳಸುವುದು ಕೋಟ್ಯಂತರ ಜನರ ಭಾವನೆಗಳಿಗೆ ಮಾಡಿದ ಗಾಯ" ಎಂದು ಮತ್ತೊಬ್ಬರು ಆಕ್ರೋಶ ಹೊರಹಾಕಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ

ಕೆಲವು ಬಳಕೆದಾರರು ಇದು ಉದ್ದೇಶಪೂರ್ವಕವಾಗಿ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ. ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ಭಾರಿ ದಂಡ ವಿಧಿಸಬೇಕು ಮತ್ತು ತಕ್ಷಣವೇ ಆ ಫೋಟೋಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಸ್ಥಳೀಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಇನ್ನೂ ಸಿಕ್ಕಿಲ್ಲ ಸ್ಪಷ್ಟನೆ

ಈ ವಿವಾದದ ಬಗ್ಗೆ ಮಿಲನ್ ಬ್ಯಾಂಕ್ವೆಟ್ ಹಾಲ್ ಮ್ಯಾನೇಜ್‌ಮೆಂಟ್ ಆಗಲಿ ಅಥವಾ ಸ್ಥಳೀಯ ಪೊಲೀಸರಾಗಲಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಫೋಟೋಗಳನ್ನು ಉದ್ದೇಶಪೂರ್ವಕವಾಗಿ ನಾಮಫಲಕವಾಗಿ ಬಳಸಲಾಗಿದೆಯೇ ಅಥವಾ ಅಲಂಕಾರಿಕ ಕಲೆಯ ಭಾಗವಾಗಿ ಹಾಕಲಾಗಿದ್ದನ್ನು ಯಾರಾದರೂ ತಪ್ಪಾಗಿ ಬಳಸಿಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Holastak 2026: ಮಾರ್ಚ್​ 3ರ ಹೋಳಿಯವರೆಗೆ ಈ ಆರು ರಾಶಿಗಳು ಮೈಯೆಲ್ಲಾ ಕಣ್ಣಾಗಿರಿ; ಎಡವಿದರೆ ಅಪಾಯ
ಮತ್ತೆ ಮತ್ತೆ ಕಾಣಿಸುವ ಹೊಟ್ಟೆನೋವು ಗ್ಯಾಸ್ಟಿಕ್ ಅಂತ ನಿರ್ಲಕ್ಷಿಸಿಬೇಡಿ: ಈ ಕಿರುತೆರೆ ನಟಿಗೆ ಏನಾಯ್ತು ನೋಡಿ