'ಕಾಶಿ ಮಸೀದಿ ತೆರವು ಮಾಡುತ್ತೇವೆ'!

Published : Apr 10, 2021, 04:52 PM ISTUpdated : Apr 10, 2021, 05:21 PM IST
'ಕಾಶಿ ಮಸೀದಿ ತೆರವು ಮಾಡುತ್ತೇವೆ'!

ಸಾರಾಂಶ

ಕಾಶಿ ಮಸೀದಿ ತೆರವು ಮಾಡುತ್ತೇವೆ: ಬಿಜೆಪಿ ಶಾಸಕ| ಈ ಜಾಗದಲ್ಲಿ ಭವ್ಯ ಶಿವ ಮಂದಿರ| ಹಿಂದೂ ರಾಷ್ಟ್ರ ನಿರ್ಮಾಣ

ಬಲಿಯಾ (ಏ.10): ಕಾಶಿಯ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡ ‘ಜ್ಞಾನವಾಪಿ ಮಸೀದಿ’ ಜಾಗದಲ್ಲಿ ಈ ಹಿಂದೆ ಮಂದಿರ ಇತ್ತೇ ಎಂಬುದರ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ(ಎಎಸ್‌ಐ)ಗೆ ನ್ಯಾಯಾಲಯ ಸೂಚಿಸಿದ ಬೆನ್ನಲ್ಲೇ, ‘ಈ ಮಸೀದಿಯನ್ನು ತೆರವುಗೊಳಿಸಲಾಗುತ್ತದೆ. ಆ ಜಾಗದಲ್ಲಿ ಭವ್ಯ ಶಿವನ ಮಂದಿರ ನಿರ್ಮಿಸಲಾಗುತ್ತದೆ’ ಎಂದು ಬಿಜೆಪಿಯ ವಿವಾದಿತ ಶಾಸಕ ಸುರೇಂದ್ರ ಸಿಂಗ್‌ ಹೇಳಿದ್ದಾರೆ.

"

ಶುಕ್ರವಾರ ಮಾತನಾಡಿದ ಸಿಂಗ್‌, ‘ಎಎಸ್‌ಐ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಬೇಕೆಂದು ವಾರಾಣಸಿ ಕೋರ್ಟ್‌ ನೀಡಿದ ಸೂಚನೆಯನ್ನು ಸ್ವಾಗತಿಸುತ್ತೇನೆ. ಇದು ಹಿಂದೂಗಳ ಸಬಲೀಕರಣದ ಯುಗವಾಗಿದೆ. ಸಮಸ್ಯೆಗಳನ್ನು ಬಗೆಹರಿಸಿಕೊಂಡು ಭಾರತ ಹಿಂದೂ ರಾಷ್ಟ್ರವಾಗಲಿದೆ’ ಎಂದರು.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಭಾರತ ಹಿಂದು ರಾಷ್ಟ್ರವಾಗುವ ಕನಸು ನನಸಾಗಲಿದೆ ಅಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌