
ನವದೆಹಲಿ(ಏ.10): ಕೊರೋನಾ 2ನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡುವಂತೆ ಕೇಂದ್ರ ಸರ್ಕಾರ ಸೂಚನೆಗಳನ್ನು ನೀಡುತ್ತಿರುವಾಗಲೇ, ದೇಶದಲ್ಲಿ ಮಾ.31ರವರೆಗೆ ಕೊರೋನಾ ಲಸಿಕೆ ಪಡೆದ ಜನರ ಪೈಕಿ 180 ಮಂದಿ ಸಾವಿಗೀಡಾಗಿದ್ದಾರೆ. ಆ ಪೈಕಿ ನಾಲ್ಕನೇ ಮೂರರಷ್ಟುಜನರು ಅಂದರೆ ಶೇ.75ರಷ್ಟುಮಂದಿ ಲಸಿಕೆ ಪಡೆದ ಮೂರೇ ದಿನದಲ್ಲಿ ಅಸುನೀಗಿದ್ದಾರೆ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.
ಲಸಿಕೆ ಪಡೆದ ಬಳಿಕ ಉಂಟಾದ ಪ್ರತಿಕೂಲ ಪರಿಣಾಮಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸಮಿತಿಗೆ ಈ ಕುರಿತ ಅಂಕಿ-ಸಂಖ್ಯೆಯನ್ನು ನೀಡಲಾಗಿದೆ. ಜ.16ರಂದು ಲಸಿಕೆ ಅಭಿಯಾನ ದೇಶದಲ್ಲಿ ಆರಂಭವಾಯಿತು. ಜ.27ರವರೆಗೆ ಲಸಿಕೆ ಪಡೆದವರಲ್ಲಿ 9 ಮಂದಿ ಸಾವಿಗೀಡಾಗಿದ್ದರು. ಫೆ.26ರ ವೇಳೆಗೆ ಈ ಸಂಖ್ಯೆ 46ಕ್ಕೆ ಏರಿತು. ಮಾ.16ರ ವೇಳೆಗೆ 89ಕ್ಕೆ ತಲುಪಿತು. ಈ ನಡುವೆ, ಮಾ.16ರಿಂದ 29ರವರೆಗೆ 91 ಮಂದಿ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಲಸಿಕೆ ಪಡೆದ ಬಳಿಕ ಆಸ್ಪತ್ರೆ ಸೇರಿದ 305 ಜನರ ಪೈಕಿ 276 ಜನರು, ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡ 63 ಜನರ ಪೈಕಿ 55 ಮಂದಿಗೆ ಮೂರೇ ದಿನದಲ್ಲಿ ಈ ರೀತಿಯ ಸಮಸ್ಯೆ ಎದುರಾಗಿದೆ ಎಂದು ಸಮಿತಿಗೆ ವಿವರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ