
ನವದೆಹಲಿ (ಅ.10): ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ ಮಾದರಿಯಲ್ಲಿಯೇ ಭಾರತದ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಉಗ್ರ ಹಾಗೂ ಸಿಖ್ ಫಾರ್ ಜಸ್ಟೀಸ್ನ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಭಾರತಕ್ಕೆ ಎಚ್ಚರಿಸಿದ್ದಾನೆ. ಈ ಕುರಿತಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. 40 ಸೆಕೆಂಡ್ನ ವಿಡಿಯೋ ಇದಾಗಿದ್ದು, ಇದರಲ್ಲಿ ಸ್ವತಃ ಗುರುಪತ್ವಂತ್ ಸಿಂಗ್ ಪನ್ನು ಮಾತನಾಡಿದ್ದಾನೆ. 'ಮೋದಿ, ಇಸ್ರೇಲ್ ಇಂದು ಪ್ಯಾಲೆಸ್ತೇನ್ನಿಂದ ಆಕ್ರಮಣಕ್ಕೆ ಒಳಗಾಗಿದೆ. ಇಸ್ರೇಲ್ ಮಾದರಿಯಲ್ಲಿಯೇ ಭಾರತ ಪಂಜಾಬ್ನ ಮೇಲೆ ಹಿಡಿತ ಸಾಧಿಸಿದೆ. ಭಾರತ ಹಿಂಸೆ ಮಾಡಿದರೆ, ನಾವೂ ಹಿಂಸೆಯನ್ನು ಆರಂಭ ಮಾಡುತ್ತೇವೆ. ಹಾಗೇನಾದರೂ ಭಾರತ ಪಂಜಾಬ್ನ ಮೇಲೆ ತನ್ನ ಅತಿಕ್ರಮಣವನ್ನು ಮುಂದುವರಿಸಿದರೆ, ಇದಕ್ಕೆ ಖಂಡಿತವಾಗಿಯೂ ಪ್ರತಿಕ್ರಿಯೆ ಇರುತ್ತದೆ. ಇದಕ್ಕೆ ಮೋದಿ ಹಾಗೂ ಭಾರತವೇ ಜವಾಬ್ದಾರಿಯಾಗಿರುತ್ತದೆ. ಎಸ್ಎಫ್ಜೆ ಬ್ಯಾಲಟ್ನ ಮೇಲೆ ನಂಬಿಕೆ ಇಟ್ಟಿದೆ. ವೋಟ್ನ ಮೇಲೆ ನಂಬಿಕೆ ಇಟ್ಟಿದೆ. ಪಂಜಾಬ್ನ ಪ್ರತ್ಯೇಕ ಮಾಡುವ ದಿನ ಹತ್ತಿರವಾಗಿದೆ. ಬ್ಯಾಲಟ್ ಬೇಕೋ? ಬುಲೆಟ್ ಬೇಕೋ? ಭಾರತ ಆಯ್ಕೆ ನಿಮ್ಮದು' ಎಂದು ಗುರುಪತ್ವಂತ್ ಎಚ್ಚರಿಕೆ ನೀಡಿದ್ದಾರೆ.
Isreal Dispatch: ಗಾಜಾಕ್ಕೆ ವಿದ್ಯುತ್, ಇಂಧನ, ಆಹಾರ ಬಂದ್; ಈವರೆಗೂ 1 ಸಾವಿರ ಟನ್ ಬಾಂಬ್ ಗಿಫ್ಟ್!
Israel Palestine War: ಬಂದೂಕು ಹಿಡಿದು ರಣಾಂಗಣಕ್ಕೆ ಕಾಲಿಟ್ಟ ಇಸ್ರೇಲ್ನ 61 ವರ್ಷದ ಮಾಜಿ ಯೋಧ ಯೈರ್ ಗೋಲನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ