From the India Gate: ಬಿಎಸ್‌ವೈ ಚೀಟಿ ಅಭ್ಯಾಸದ ಬಗ್ಗೆ ನಿಮಗೆಷ್ಟು ಗೊತ್ತು..? ಯುಪಿ ಸಿಎಂ ಎದುರು ರಾಜಿಯಾದ ಅಖಿಲೇಶ್‌..!

Published : Mar 05, 2023, 11:01 AM ISTUpdated : Mar 05, 2023, 11:50 AM IST
From the India Gate: ಬಿಎಸ್‌ವೈ ಚೀಟಿ ಅಭ್ಯಾಸದ ಬಗ್ಗೆ ನಿಮಗೆಷ್ಟು ಗೊತ್ತು..? ಯುಪಿ ಸಿಎಂ ಎದುರು ರಾಜಿಯಾದ ಅಖಿಲೇಶ್‌..!

ಸಾರಾಂಶ

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ತುಂಬಾ ಸ್ವಾರಸ್ಯಕರವಾಗಿರುತ್ತವೆ. ಆದರೂ, ಅನೇಕ ಬೆಳವಣಿಗೆಗಳು ವರದಿಯಾಗೋದೇ ಇಲ್ಲ. ಗುಸುಗುಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

ಹೊಸದೆಹಲಿ (ಮಾರ್ಚ್‌ 5, 2023):

'ಚೀಟಿ'ಯೂರಪ್ಪ..!

ಹಿರಿಯ ರಾಜಕಾರಣಿ, ಕರ್ನಾಟಕ ಬಿಜೆಪಿಯ ರಾಜಾಹುಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದು ಅನ್ವರ್ಥಿಸುವ ನಾಮ ಇದು. ಬಿಳಿ ಸಫಾರಿ, ಹಾಫ್ ಶರ್ಟ್‌ಗೆ 3 ಜೇಬು, ಆ ಜೇಬಲ್ಲಿ ಒಂದು ಪೆನ್. ಜೊತೆಗೆ ಒಂದಷ್ಟು ಚೀಟಿಗಳು. ಇವೆಲ್ಲಾ ಒಂದು ರೀತಿ ಬಿಎಸ್‌ವೈ ಬ್ರ್ಯಾಂಡ್‌.

ಶಾಸಕ, ಅಧ್ಯಕ್ಷ, ಡಿಸಿಎಂ ಬಳಿಕ ಸಿಎಂ ನಂತರ ಸಂಸದ ಹೀಗೆ ಹತ್ತಾರು ಪದವಿಗಳನ್ನು ಅವರು ಅಲಂಕರಿಸಿದ್ದಾರೆ. ಆದ್ರೂ ಅವರು ಜೇಬಲ್ಲಿ ಚೀಟಿ ಇಟ್ಟುಕೊಳ್ಳುವುದು, ಹಿರಿಯ ಅಥವಾ ಕಿರಿಯ ಎನ್ನದೇ ತಮ್ಮ ಭಾಷಣಗಳಲ್ಲಿ ಮುಖ್ಯವಾದ ವಿಚಾರ ಮಂಡಿಸಿದ್ರೆ ಸಾಕು ಅದನ್ನು ಗುರುತು ಹಾಕಿಕೊಳ್ಳುವ ಯಡಿಯೂರಪ್ಪನವರು ಈ ಅಭ್ಯಾಸ ಮಾತ್ರ ಬಿಡಲಿಲ್ಲ. 

ಇದನ್ನು ಓದಿ: From the India Gate: ಕಾಂಗ್ರೆಸ್‌ ಒಗ್ಗಟ್ಟಿನ ಮಂತ್ರದ ವಾಸ್ತವ ಹೀಗಿದೆ; ‘ಭಜರಂಗಿ’ಗೆ ನೋಟಿಸ್‌ ಕಳಿಸಿದ ಸರ್ಕಾರ..!

ಜೊತೆಗೆ ತಾವು ಭಾಷಣ ಮಾಡಬೇಕಾದ ವಿಚಾರಗಳನ್ನು ಸಹ ಗುರುತು ಹಾಕಿಕೊಂಡು, ಆ ಚೀಟಿ ಇಟ್ಟುಕೊಂಡೇ ಭಾಷಣ ಮಾಡುತ್ತಿದ್ದರು. ಇವರ ಚೀಟಿಯಲ್ಲಿ ಬರೆದುಕೊಳ್ಳುವ ಚಟ ನೋಡಿ ಪಿಎಚ್‌ಡಿ ಥೀಸಿಸ್‌ಗೆ ಸಂಶೋಧಕರು ನಡೆಸುವ ಸಿದ್ದತೆಯಂತೆ ಕಂಡು ಬರುತ್ತದೆ ಅಂತ ಬಲ್ಲವರು ಹಾಸ್ಯ ಮಾಡಿದ್ದೂ ಉಂಟು.

ಸಿಎಂ ಆಗಿದ್ದಾಗ ಬಿಎಸ್‌ವೈ ಅವರು ನಿತ್ಯ ಬರೆದು ಬರೆದು ತರುತ್ತಿದ್ದ ಚೀಟಿಗಳು ರಾಶಿ ಆಯ್ತಂತೆ. ಈ ರಾಶಿ ಪುಸ್ತಕ ರೂಪಕ್ಕೆ ತರಬೇಕು ಅನ್ನುವಷ್ಟು ಚೀಟಿಗಳು ಸಂಗ್ರಹವಾಗಿದ್ದವಂತೆ. ಕೊನೆಗೆ ಪುಸ್ತಕ ಕಾರ್ಯ ಆಗಲಿಲ್ಲ‌ ಅನ್ನಿಸುತ್ತೆ. ಆದ್ರೆ ಅವರ ಚೀಟಿಗಳು ಮಾತ್ರ ಇದ್ದ ರಾಶಿಯನ್ನು ದೊಡ್ಡದು ಮಾಡುತ್ತಲೇ ಇವೆಯಂತೆ.

ಇದನ್ನೂ ಓದಿ: From the India Gate: ಹರಿಯೋ ನೀರಿಗೆ 'ಗೋವಾ' ದೊಣ್ಣೆ ನಾಯಕನ ಅಪ್ಪಣೆ: ರಾಜ್ಯದಲ್ಲಿ ಸಮರ್ಥ ಭಾಷಾಂತರಕಾರರ ಕೊರತೆ..!

ರಾಜಿ ಮಾಡಿಕೊಂಡ ಛೋಟಾ ನೇತಾಜಿ..!
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ವಿಧಾನಸಭೆಯ ಎಲ್ಲಾ ಸದಸ್ಯರು ಛೋಟಾ ನೇತಾಜಿಯವರ ಅಂದ್ರೆ ಅಖಿಲೇಶ್‌ ಯಾದವ್‌ ಅಬ್ಬರದ ಪ್ರತಿದಾಳಿಯನ್ನು ನಿರೀಕ್ಷಿಸಿದ್ದರು. ವಾಸ್ತವವಾಗಿ, ತಮ್ಮ ತಂದೆಯ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗಳಿಗೆ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಅವರ ಉತ್ತರವು ಶಕ್ತಿಯುತವಾಗಿರುತ್ತದೆ ಎಂದು ಸಮಾಜವಾದಿ ಪಕ್ಷದವರು ಭಾವಿಸಿದ್ದರು.

ಆದರೆ ಅಖಿಲೇಶ್‌ ಪಾಯಿಂಟ್-ಕೌಂಟರ್‌ಪಾಯಿಂಟ್ ದಾಳಿಯ ಬದಲು ಭಾವನಾತ್ಮಕ ಮನವಿಯನ್ನು ಆಶ್ರಯಿಸಿದರು. ಅಖಿಲೇಶ್‌ ಯಾದವ್‌ ಅವರು ತಮ್ಮ ತಂದೆಯ ಬಗ್ಗೆ ಇನ್ಮುಂದೆ ಯಾವುದೇ ಹೆಚ್ಚಿನ ಕಾಮೆಂಟ್‌ಗಳನ್ನು ನಿಲ್ಲಿಸುವ ದೃಷ್ಟಿಯಿಂದ ರಾಜಿ ಮಾಡಿಕೊಳ್ಳುತ್ತಿರುವಂತೆ ತೋರುತ್ತಿತ್ತು.

ಇದನ್ನೂ ಓದಿ: From the India Gate: ಸಿದ್ದರಾಮಯ್ಯ ಪುತ್ರ ವ್ಯಾಮೋಹ; ಬಂಗಾಳದಲ್ಲಿ ಬಡ ಪಕ್ಷ, ಸಿರಿವಂತ ನಾಯಕರು..!

ದೊಡ್ಡ ನಿರೀಕ್ಷೆಗಳು

ಇನ್ನೊಂದೆಡೆ, ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಮಾಡಿರುವ ಟ್ವೀಟ್ ಭಾರೀ ರಾಜಕೀಯ ಬದಲಾವಣೆಗೆ ನಾಂದಿ ಹಾಡಿದೆ. ``ಬದಲಾಗುತ್ತಿರುವ ಕಾಲಕ್ಕೆ ಸಿದ್ಧರಾಗಿರಿ'' ಎಂಬ ಕ್ಯಾಪ್ಷನ್‌ನೊಂದಿಗೆ ಉಪ ಮುಖ್ಯಮಂತ್ರಿ ಅವರು ಫೋಟೋವನ್ನು ಟ್ವೀಟ್ ಮಾಡಿದ ನಂತರ ಅವರ ಬೆಂಬಲಿಗರೆಲ್ಲರೂ ಆಶ್ಚರ್ಯಚಕಿತರಾಗಿದ್ದು, ಯಾವ ರೀತಿ ಬದಲಾವಣೆಯಾಗಲಿದೆ ಎಂದು ಚಿಂತಿಸುತ್ತಿದ್ದಾರೆ.

ಅವರ ಈ ಟ್ವೀಟ್‌ಗಳು ದೆಹಲಿಯಲ್ಲಾಗಲೀ ಅಥವಾ ಯುಪಿಯಲ್ಲಾಗಲೀ ಅವರಿಗೆ ಭವಿಷ್ಯದಲ್ಲಿ ಕಾದಿರುವ ಸಂಭವನೀಯ ``ದೊಡ್ಡ ಜವಾಬ್ದಾರಿ''ಯ ಸುಳಿವು ನೀಡುತ್ತವೆ ಎಂದು ಹಲವರು ಭಾವಿಸುತ್ತಾರೆ. ಡಿಸಿಎಂ ಅವರ ನೆಚ್ಚಿನ ಅಭಿಮಾನಿಗಳು ಅವರು ಶೀಘ್ರದಲ್ಲೇ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಹಾರೈಸುತ್ತಾರೆ. ಇನ್ನು, ಇತರರು 2024 ರ ಲೋಕಸಭೆ ಚುನಾವಣೆಗೆ ಮುನ್ನ ದೆಹಲಿಯಲ್ಲಿ ಪಾತ್ರವೊಂದನ್ನು ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: From the India Gate: ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ; ಭಾರತ್‌ ಜೋಡೋ ಯಾತ್ರೆ ಯಶಸ್ಸಿನ ಗುಟ್ಟು..!

ಉನ್ನತ ನಾಯಕ ಯಾವುದೇ ಹೆಚ್ಚಿನ ಮಾಹಿತಿಯನ್ನು ಸೇರಿಸಿಲ್ಲ. ಅವರ ಫೋಟೋ ಮತ್ತು ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಮುಂದುವರಿಯುತ್ತದೆ, ಪಕ್ಷದ ಪುರುಷರನ್ನು ಊಹೆಗೆ ಒತ್ತಾಯಿಸುತ್ತದೆ. ಆದರೆ, ಅವರ ಹಿಂಬಾಲಕರು ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!
ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್