ಎಡ ಪಕ್ಷದವರಿಗೆ 'ಗಣೇಶ'ನಿಗಿಂತ ಮಿಡತೆ ಮೇಲೆ ಗೌರವ: ಪೈಲಟ್‌ಗಿಲ್ಲ ಕೃತಜ್ಞತೆ; ‘ಪವರ್’ ಕಳ್ಳರ ಮೇಲೆ ಗೆಹ್ಲೋಟ್‌ ಪ್ರೇಮ!

By Suvarna NewsFirst Published Jul 30, 2023, 10:03 AM IST
Highlights

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

ಸಿಎಂಗೆ ಮುಜುಗರ ತಂದ ಕೇರಳ ಪೊಲೀಸರು 
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದಿವಂಗತ ಸಿಎಂ ಉಮ್ಮನ್ ಚಾಂಡಿ ಅವರ ಸ್ಮರಣಾರ್ಥ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡುತ್ತಿದ್ದಾಗ 10 ಸೆಕೆಂಡುಗಳ ಕಾಲ ಮೈಕ್‌ ಸ್ವಲ್ಪ ಸದ್ದು ಮಾಡಿತು. ಈ ಅಸಮರ್ಪಕ ಕಾರ್ಯ ಹಿನ್ನೆಲೆ ಸೌಂಡ್ ಸಿಸ್ಟಂ ಆಪರೇಟರ್ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಿಣರಾಯಿ ವಿಜಯನ್ ತಮ್ಮ ಭಾಷಣವನ್ನು ಪೂರ್ಣಗೊಳಿಸಿ ಸಭಾಂಗಣದಿಂದ ನಿರ್ಗಮಿಸಿದರೂ, ಸಂಸ್ಥೆಯ ಮಾಲೀಕರಿಗೆ ಕರೆ ಮಾಇಡದ ಪೊಲೀಸರು ಸಿಎಂಗೆ ಮುಜುಗರ ಉಂಟು ಮಾಡಿದ ಎಲ್ಲಾ ಉಪಕರಣಗಳನ್ನು ಜಪ್ತಿ ಮಾಡಲು ರೇಡ್‌ ಮಾಡಿದ್ದಾರೆ.

ಇದರಿಂದ ಸಿಎಂ ಮತ್ತು ಅವರ ಕಚೇರಿ ಮೇಲೆ ಅವಮಾನ ಮತ್ತು ಅಪಹಾಸ್ಯವಾಗ್ತಿದ್ದಂತೆ, ಆಯೋಜಕರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲಾಯ್ತು. ಆದರೆ ಈ ಘಟನೆಯಿಂದ ಎಚ್ಚೆತ್ತ ಪೊಲೀಸರು,  ಗುರುವಾರ ಸಂಜೆ ಪೊಲೀಸರು ಮತ್ತು ತಂತ್ರಜ್ಞರು ಸಿಎಂ ಮಾತನಾಡುವ ಕಾರ್ಯಕ್ರಮಕ್ಕೆ ಗಂಟೆಗಳ ಮೊದಲು ಸಾರ್ವಜನಿಕ ಘೋಷಣೆ ವ್ಯವಸ್ಥೆಯನ್ನು ಪರೀಕ್ಷಿಸುತ್ತಿರುವುದು ಕಂಡುಬಂದಿದೆ. 

Latest Videos

ಇದನ್ನು ಓದಿ: ರಾಜ್ಯದಲ್ಲಿ ‘ಕೈ’ ಗೆಲ್ಲಿಸಿದ್ರೂ ಸುನೀಲ್‌ ಕನುಗೋಲಿಗೆ ತೆಲಂಗಾಣದಿಂದ ಗೇಟ್‌ಪಾಸ್‌: 3 ಭೂಕಂಪವಾದ್ರೂ ಇವರಿಗೆ ಎಚ್ಚರನೇ ಆಗಿಲ್ಲ!

ಈ ಹಿನ್ನೆಲೆ ಪ್ರತಿಪಕ್ಷದ ನಾಯಕ ವಿ.ಡಿ. ಸತೀಶ್‌ ಕಾಮೆಂಟ್‌ ಮಾಡಿದ್ದು, `ಮೊದಲ ಆರೋಪಿ ಮೈಕ್ರೋಫೋನ್ ಮತ್ತು ಎರಡನೇ ಆರೋಪಿ ಆಂಪ್ಲಿಫೈಯರ್’’ ಎಂದು ವ್ಯಂಗ್ಯವಾಡಿದ್ದಾರೆ. ವಾಸ್ತವವಾಗಿ, ಈ ಘಟನೆಯು ಬಾಸ್ ಅನ್ನು ಮೆಚ್ಚಿಸಲು ಪೊಲೀಸ್ ಸಿಬ್ಬಂದಿ ಪರಸ್ಪರರ ವಿರುದ್ಧ ಸ್ಪರ್ಧಿಸಿದಾಗ ಅಸಂಬದ್ಧತೆಯ ಉತ್ತುಂಗವನ್ನು ಹೆಚ್ಚಿಸಿದೆ.
 
ನಾಸ್ತಿಕರ ಚೀನಾ ಪ್ರೀತಿ
ಕಮ್ಯುನಿಸ್ಟ್ ಸಿದ್ಧಾಂತ ಯಾವಾಗಲೂ ಮೂಢನಂಬಿಕೆಗಳ ವಿರುದ್ಧ ನಿಲುವು ತಳೆದಿದೆ. ಆದರೆ ಕೆಲವು ಕಾರಣಗಳಿಗಾಗಿ, ಹಿಂದೂ ದೇವರುಗಳು ಮತ್ತು ಆಚರಣೆಗಳ ವಿಷಯಕ್ಕೆ ಬಂದಾಗ ಎಡ ಬುದ್ಧಿಜೀವಿಗಳ ಕಾಮೆಂಮ್‌ಗಳು ಸದ್ದು ಮಾಡುತ್ತದೆ. ಸಿಪಿಎಂ ನಾಯಕ ಮತ್ತು ಸ್ಪೀಕರ್ ಎ.ಎನ್ ಶಂಸೀರ್ ಅವರು ಗಣೇಶನ ವಿರುದ್ಧ ಮಾಡಿದ ಟೀಕೆಗಳನ್ನು ಇತ್ತೀಚಿನ ಉದಾಹರಣೆ ಎಂದು ಉಲ್ಲೇಖಿಸಲಾಗಿದೆ. ಶಂಸೀರ್ ವಿರುದ್ಧ ಬಿಜೆಪಿ ಈಗಾಗಲೇ ಕಿಡಿಕಾರಿದೆ. ಆದರೆ, ಸಿಪಿಎಂ ನಾಯಕರು ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಚಾಟ್‌ ಜಿಪಿಟಿ ಫಾರ್ಮುಲಾ: ತಮಿಳುನಾಡಲ್ಲಿ ಅಣ್ಣಾಮಲೈ ‘ಚೆನ್ನೈ ಎಕ್ಸ್‌ಪ್ರೆಸ್‌’ ರಾಜಕೀಯ!

ಇನ್ನು, ಸಿಪಿಎಂ ನೇತೃತ್ವದ ಎಡ ಸರ್ಕಾರವು ಮಿಡತೆಯನ್ನು ರಾಜ್ಯ ಲಾಟರಿಯ ಮ್ಯಾಸ್ಕಾಟ್ ಆಗಿ ಆಯ್ಕೆ ಮಾಡಿರುವುದು ಹಲವರಲ್ಲಿ ಅಚ್ಚರಿ ತಂದಿದೆ. ಸರ್ಕಾರವು ತನ್ನ ವ್ಯವಹಾರವನ್ನು ನಡೆಸಲು ಲಾಟರಿ ತೆರಿಗೆಯಿಂದ ಬರುವ ಆದಾಯದ ಮೇಲೆ ಹೆಚ್ಚು ಅವಲಂಬಿತವಾಗಿದೆ; ಇನ್ನೊಂದು ಮೂಲವೆಂದರೆ ಮದ್ಯ ಮಾರಾಟ.

ಕಮ್ಯುನಿಸ್ಟ್ ಸರ್ಕಾರವು ಮಿಡತೆಯ ಮೇಲೆ ಅವಲಂಬಿತವಾಗಿರುವುದನ್ನು ನೋಡುವುದು ನಿಜಕ್ಕೂ ವಿಚಿತ್ರವಾಗಿದೆ. ಬಹುಶಃ ಈ ನಿರ್ಧಾರವು ಮಿಡತೆ ಪುರಾಣವು ಚೀನೀ ಮೂಲವನ್ನು ಹೊಂದಿರುವುದು ಎನ್ನಲಾಗ್ತಿದೆ.

ಇದನ್ನೂ ಓದಿ: ಈ ಪಕ್ಷದ ಸಭೆಗಳಲ್ಲಿ ಮೊಬೈಲ್‌ ಬ್ಯಾನ್ ಆತಂಕ; ಕಾಂಗ್ರೆಸ್‌ - ಎಡಪಕ್ಷದ ನಡುವೆ ದಿಲ್ಲಿಯಲ್ಲಿ ದೋಸ್ತಿ, ಕೇರಳದಲ್ಲಿ ಕುಸ್ತಿ!

‘ಕೆಂಪು ಡೈರಿ’
 ರಾಜಸ್ಥಾನದ ಕೆಂಪು ಡೈರಿಯು ರಾಜಸ್ಥಾನದ ಮಾಜಿ ಸಚಿವರಿಗೆ ದುಸ್ಥಿತಿ ಎದುರಾಗಿದೆ. ಇದು ರಾಜ್ಯದ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಅವರು ಈ ಪ್ರೇತ ಡೈರಿ ವಿಷಯವನ್ನು ಎತ್ತಿದ ನಂತರ, ಒಂದು ಕಾಲದಲ್ಲಿ ಸಚಿನ್ ಪೈಲಟ್‌ನ ನೆಚ್ಚಿನ ವ್ಯಕ್ತಿಯಾಗಿದ್ದ ಇವರು ಈಗ ಯಾರಿಗೂ ಬೇಡವಾಗಿದ್ದಾರೆ. ವಿಧಾನಸಭೆಯಲ್ಲಿ ಅಕ್ಷರಶಃ ಕೋಲಾಹಲ ಎಬ್ಬಿಸಿದ ನಂತರ ಈ ಮಾಜಿ ಸಚಿವರ ದೂರವಾಣಿ ಕರೆಗಳನ್ನು ಸಚಿನ್‌ ಪೈಲಟ್‌ ಕೂಡ ಸ್ವೀಕರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ನಾಯಕ ಪೈಲಟ್‌ನಿಂದಲೂ ನಿರಾಸೆಗೊಳ್ಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಒಮ್ಮೆ ಅವರು ಕಾಂಗ್ರೆಸ್ ನಾಯಕರಿಗೆ ``ನೀವು ತಾಯಿ ಹಾಲು ಕುಡಿದಿದ್ದರೆ ಪೈಲಟ್ ವಿರುದ್ಧ ಕ್ರಮ ಕೈಗೊಳ್ಳಲಿ'' ಎಂದು ಬಹಿರಂಗ ಸವಾಲು ಹಾಕಿದ್ದರು. ಆದರೆ ಕೆಂಪು ಡೈರಿ ಘಟನೆಯ ನಂತರ ಈ ಮಾಜಿ ಸಚಿವರಿಗೆ ಪೈಲಟ್‌ ಯಾವುದೇ ಕೃತಜ್ಞತೆಯನ್ನು ತೋರುತ್ತಿಲ್ಲ.

ಇದನ್ನೂ ಓದಿ: ಪತ್ರಕರ್ತರಂದ್ರೆ ರಾಜ್ಯದ ಈ ರಾಜಕಾರಣಿಗೆ ಭಯ, ಕೇರಳದಲ್ಲಿ ಆಪರೇಷನ್ ಶಕ್ತಿಗೆ ಥರಗುಟ್ಟಿದ ಎಡಪಕ್ಷ!

‘ಪವರ್’ ಕಳ್ಳರ ಮೇಲೆ ಕೇಸಿಲ್ಲ!
ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ``ಶಾಕಿಂಗ್'' ಆದೇಶ ನೀಡಿದ್ದಾರೆ. ಉಚಿತವಾಗಿ ಒದಗಿಸಲಾದ ಕೇಬಲ್‌ಗಳು ಮತ್ತು ಕನೆಕ್ಟರ್‌ಗಳನ್ನು ಬಳಸಿಕೊಂಡು ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳದಂತೆ ಅವರು ಪೊಲೀಸರಿಗೆ ಸಲಹೆ ನೀಡಿದ್ದಾರೆ. 

ಕುತೂಹಲಕಾರಿಯಾಗಿ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಹೆಚ್ಚಿನ ವಿದ್ಯುತ್ ಕಳ್ಳತನ ಪ್ರಕರಣಗಳು ನಡೆದಿವೆ. ಗ್ರಾಮೀಣ ಪ್ರದೇಶದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಒಂದೆರಡು ಪ್ರಕರಣಗಳನ್ನು ಹೊರತುಪಡಿಸಿದರೆ ವಿದ್ಯುತ್ ಇಲಾಖೆ ಯಾವುದೇ ಮಹತ್ವದ ಕ್ರಮ ಕೈಗೊಂಡಿಲ್ಲ. ಬಿಜೆಪಿ ಇದಕ್ಕೆ ವಿದ್ಯುಕ್ತ ಉತ್ತರ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಡಿಕೆ ‘ಶಿವ’ ತಾಂಡವ; ಕೈಗೊಂಬೆಯಾದ್ರು ಖರ್ಗೆ: ತಮಿಳ್ನಾಡು ರಾಜಕೀಯಕ್ಕೆ ಧುಮುಕಲು ದಳಪತಿ ರೆಡಿ

click me!