
ಕೊಲ್ಕತ್ತಾ(ಜೂ.01): ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿ, ಹೇಳಿಕೆಗಳ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಪ್ರಧಾನಿಯನ್ನು ಕಾಯಿಸಿದ್ದಕ್ಕಾಗಿ ಮಮತಾ ಟೀಕೆಗೊಳಗಾದರೆ, ಪಶ್ಚಿಮ ಬಂಗಾಳ ಸಿಎಂ ಮಾತ್ರ ಮೋದಿಯೇ ನನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಮಮತಾ ಬ್ಯಾನರ್ಜಿ ಬಹಳಷ್ಟು ಸ್ಪಷ್ಟನೆ, ಹೇಳಿಕೆಗಳನ್ನು ಕೊಟ್ಟಿದ್ದಾರೆ. ನನಗೆ ಮೋದಿ ಅವರ ಕಾರ್ಯಕ್ರಮ ಮತ್ತು ಸಭೆಯ ಬಗ್ಗೆ ತಡವಾಗಿ ತಿಳಿಯಿತು. ಪ್ರಧಾನಿ ಕಾರ್ಯಕ್ರಮಕ್ಕಾಗಿ ನಾನು ಎಲ್ಲ ನಿಯೋಜಿತ ಕಾರ್ಯಕ್ರಮ ರದ್ದು ಮಾಡಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
'ಕಾಯಿಸಿ ಅವಮಾನಿಸಿದ್ದು ನಾನಲ್ಲ, ಮೋದಿ'
ಯಾಸ್ ಚಂಡಮಾರುತದಿಂದಾಗಿ ಆದ ಹಾನಿ ಪರಿಶೀಲನೆ ಪ್ರಧಾನಮಂತ್ರಿಯ ಭೇಟಿಯ ಕಾರಣವಾಗಿತ್ತು. ಆದ್ದರಿಂದ ಚಂಡಮಾರುತ ಬರುವ ಮೊದಲು ಈ ಮೋದಿಯ ಈ ಭೇಟಿಯನ್ನು ಫೈನಲ್ ಮಾಡಲಾಗುವುದಿಲ್ಲ. ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಏಕಕಾಲಕ್ಕೆ ಭೇಟಿಯ ಮಾಹಿತಿ ನೀಡಲಾಯಿತು. ಪಶ್ಚಿಮ ಬಂಗಾಳಕ್ಕಿಂತ ಮುಂಚೆಯೇ ಒಡಿಶಾಗೆ ಹೋದರೂ ಅಲ್ಲಿ ಮಾತ್ರ ಕಾರ್ಯಕ್ರಮ ಚೆನ್ನಾಗಿ ನಡೆದಿತ್ತು ಎನ್ನಲಾಗಿದೆ.
ಪ್ರಧಾನಿಯವರನ್ನು ಭೇಟಿಯಾಗಲು ನಾನು ಕಾದಿದ್ದೇನೆ ಎಂದಿದ್ದಾರೆ ಸಿಎಂ ಮಮತಾ. ಪಿಎಂ 13.59ಕ್ಕೆ ಕಲೈಕುಂಡದಲ್ಲಿ ಬಂದಿಳಿದರು. ಮಮತಾ ಬ್ಯಾನರ್ಜಿ 14.10ಕ್ಕೆ ಪಿಎಂ ನಂತರ ಕಲೈಕುಂಡಕ್ಕೆ ಬಂದಿಳಿದರು. ಇದರಲ್ಲಿ ಮೋದಿ ಕಾಯುವಂತಾಗಿದ್ದು ಸ್ಪಷ್ಟವಾಗಿದೆ. ಟಿಎಂಸಿ ಸಂಸದರು ಇದನ್ನು ದೃಢಪಡಿಸಿದ್ದಾರೆ. ಟಿಎಂಸಿ ಸಂಸದರು ಪ್ರಧಾನಮಂತ್ರಿಯನ್ನು ಕಾಯಿಸುವುದರಲ್ಲಿ ಯಾವುದೇ ದೊಡ್ಡ ವಿಚಾರವಿಲ್ಲ ಎಂದು ಹಗುರವಾಗಿ ಟ್ವೀಟ್ ಮಾಡಿದ್ದಾರೆ. ಚಾಪರ್ನಿಂದ ಇಳಿದ ನಂತರ, ಅವರು ಸುಮಾರು 500 ಮೀಟರ್ ದೂರದಲ್ಲಿರುವ ಮೀಟಿಂಗ್ ಲೊಕೇಷನ್ ತಲುಪಿದರು. ಪ್ರಧಾನ ಮಂತ್ರಿಯನ್ನು ಭೇಟಿಯಾದ ನಂತರ, ಅವರು ತಮ್ಮ ಮುಂದಿನ ಪ್ರಯಾಣಕ್ಕಾಗಿ 14.35ಕ್ಕೆ ಹೊರಟರು. ಬರೀ 25 ನಿಮಿಷಗಳಲ್ಲಿ ನಿರ್ಗಮಿಸಿದರು. ಪಿಎಂ ಹೊರಡುವ ಮೊದಲು ಅವರು ಹೊರಟುಹೋದರು. ಇದು ಸ್ವೀಕೃತವಲ್ಲದ ನಡವಳಿಕೆಯಾಗಿದ್ದು ಪ್ರೋಟೋಕಾಲ್ಗೆ ವಿರುದ್ಧವಾಗಿದೆ. ತನ್ನನ್ನು ಕಾಯಿಸಿದ್ದಾರೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆಯು ಸಂಪೂರ್ಣವಾಗಿ ಸುಳ್ಳು ಮತ್ತು ಅವರು ಪ್ರಧಾನ ಮಂತ್ರಿಯನ್ನು ಕಾಯುವಂತೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಮೋದಿ, ಗೌರ್ನರನ್ನೇ ಕಾಯಿಸಿದ ದೀದಿ: ಬಂಗಾಳಕ್ಕೆ ಹೋದ ಪ್ರಧಾನಿಗೆ ಅವಮಾನ!.
ನನ್ನ ಕಾರ್ಯಕ್ರಮಗಳು ನಿಗದಿಯಾಗಿತ್ತು. ಪ್ರತಿ ಬಾರಿ ಸಿಎಂ ಹೋಗಿ ಸ್ವಾಗತಿಸಬೇಕೆಂದೇನೂ ಇಲ್ಲ. ಕೆಲವೊಮ್ಮೆ ಬೇರೆ ಕಾರ್ಯಕ್ರಮಗಳೂ ಇರುತ್ತವೆ ಎಂದಿದ್ದಾರೆ ಮಮತಾ ಬ್ಯಾನರ್ಜಿ. ಮಮತಾ ಬ್ಯಾನರ್ಜಿ ಸಭೆಯಲ್ಲಿ ಭಾಗವಹಿಸಲು ಒಪ್ಪಿದ್ದರು. ಹೀಗಿದ್ದರೂ ವಿರೋಧ ಪಕ್ಷದ ಮುಖಂಡರು ಸಭೆಗೆ ಬಂದರೆ ತಾನು ಭಾಗವಹಿಸುವುದಿಲ್ಲ ಎಂದೂ ಹೇಳಿದ್ದರು. ಇದನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದರು.
ಪ್ರಧಾನಿಯ ಹೆಲಿಪಾಕ್ಟರ್ ಬಂದಿಳಿಯಬೇಕಾದ್ದರಿಂದ ನನ್ನನ್ನು 20 ನಿಮಿಷ ಸಾಗರದಲ್ಲಿ ಕಾಯಲು ಹೇಳಿದ್ದರು. ಆದರೆ ನಂತರ 15 ನಿಮಿಷ ಹೆಲಿಕಾಪ್ಟರ್ ಆಕಾಶದಲ್ಲಿ ಹಾರುತ್ತಿತ್ತು ಎಂದಿದ್ದಾರೆ ಸಿಎಂ ಮಮತಾ. ಯಾವುದೇ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಇಳಿಯುತ್ತಾರೆ ಎಂದಾಗ ಎಲ್ಲರೂ ಮಾಡುವಂತೆ ಅವರು ಮುಂಚಿತವಾಗಿ ಬರುವ ನಿರೀಕ್ಷೆಯಿತ್ತು. ಪಿಎಂ ಭದ್ರತೆಯನ್ನು ವೃತ್ತಿಪರ ಸಂಸ್ಥೆಯಾದ ಎಸ್ಪಿಜಿ ನೋಡಿಕೊಳ್ಳುತ್ತದೆ ಎನ್ನಲಾಗಿದೆ.
ಮುಖ್ಯ ಕಾರ್ಯದರ್ಶಿ ಏಕಪಕ್ಷೀಯ ಆದೇಶದಿಂದ ಆಘಾತಕ್ಕೊಳಗಾಗಿದ್ದಾರೆ. ರಾಜ್ಯದೊಂದಿಗೆ ಪೂರ್ವ ಸಮಾಲೋಚನೆ ಇಲ್ಲದೆ ಆದೇಶ ನೀಡುವುದು ಕಾನೂನುಬದ್ಧವಲ್ಲ, ಅಸಂವಿಧಾನಿಕ ಆದೇಶ ಎಂದಿದ್ದಾರೆ.
ಮುಖ್ಯ ಕಾರ್ಯದರ್ಶಿ ಅಖಿಲ ಭಾರತ ಸೇವೆಗಳ ಅಧಿಕಾರಿಯಾಗಿರುವುದರಿಂದ ಆದೇಶವು ಸಂಪೂರ್ಣವಾಗಿ ಸಾಂವಿಧಾನಿಕವಾಗಿದೆ. ಅವರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ಲಕ್ಷಿಸಲು ನಿರ್ಧರಿಸಿದರು. ಇದರ ಪರಿಣಾಮವಾಗಿ ಪ್ರಧಾನಮಂತ್ರಿಗೆ ಯಾವುದೇ ಪ್ರಸ್ತುತಿಯನ್ನು ನೀಡಲಾಗಿಲ್ಲ ಮತ್ತು ಪಶ್ಚಿಮ ಬಂಗಾಖ ಸರ್ಕಾರದ ಯಾವುದೇ ಅಧಿಕಾರಿಯು ಪ್ರಧಾನಮಂತ್ರಿಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿಲ್ಲ.
ಕೆಲವೇ ದಿನಗಳ ಹಿಂದೆಯಷ್ಟೇ, ಈ ನಿರ್ಣಾಯಕ ಸಮಯದಲ್ಲಿ ಮುಖ್ಯ ಕಾರ್ಯದರ್ಶಿಯ ಸೇವೆ ಮೂರು ತಿಂಗಳವರೆಗೆ ವಿಸ್ತರಿಸಲು ಸರ್ಕಾರ ಒಪ್ಪಿಕೊಂಡಿತ್ತು ಎಂದಿದ್ದಾರೆ ಸಿಎಂ. ಇದಕ್ಕೆ ಕೇಂದ್ರ ಒಪ್ಪಿಕೊಂಡಿತ್ತು. ಕೇಂದ್ರ ಪಶ್ಚಿಮ ಬಂಗಾಳಕ್ಕೆ ಸಂಪೂರ್ಣ ಸಹಕಾರ ಕೊಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎನ್ನಲಾಗಿದೆ.
ನಿಮ್ಮ ಪಕ್ಷದಿಂದ ಸ್ಥಳೀಯ ಶಾಸಕರನ್ನು ಸೇರಿಸಲು ನೀವು ಸಭೆಯ ರಚನೆಯನ್ನು ಪರಿಷ್ಕರಿಸಿದ್ದೀರಿ. ಪಿಎಂ-ಸಿಎಂ ಸಭೆಯಲ್ಲಿ ಹಾಜರಾಗಲು ಅವರಿಗೆ ಯಾವುದೇ ಅವಕಾಶವಿಲ್ಲ. ಸಭೆಗೆ ರಾಜ್ಯಪಾಲರು ಮತ್ತು ಕೇಂದ್ರ ಸಚಿವರನ್ನು ಆಹ್ವಾನಿಸುವುದನ್ನು ನಾನು ಆಕ್ಷೇಪಿಸಲಿಲ್ಲ ಎಂದು ಮಮತಾ ಅಸಮಾಧಾನ ವ್ಯಕ್ತಪಡಿಸಿದ್ದರು.
ಶಾಸಕರು ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದಾರೆ. ಪೀಡಿತ ಪ್ರದೇಶದ ಚುನಾಯಿತ ಪ್ರತಿನಿಧಿಯಾಗಿದ್ದಾರೆ. ಬಿಜೆಪಿ ಅಲ್ಲದ ಆಡಳಿತದ ರಾಜ್ಯಗಳಲ್ಲಿ ಈ ಹಿಂದೆ ಹಲವಾರು ಸಭೆಗಳು ನಡೆದಿವೆ, ಅಲ್ಲಿ ಇತರ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.
ನಮಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ನನ್ನ ನಿರ್ದೇಶಕರು (ಭದ್ರತೆ) ಎಸ್ಪಿಜಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮಮತಾ ಹೇಳಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಡಬ್ಲ್ಯುಬಿ ಯ ಎಲ್ಒಪಿ ಇರುವುದರಿಂದ ಮಮತಾ ಬ್ಯಾನರ್ಜಿ ವಿಮರ್ಶೆ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಪರಿಶೀಲನಾ ಸಭೆಯ ನಂತರ ಪಿಎಂ ಅವರನ್ನು ಭೇಟಿಯಾಗುತ್ತಾರೆ ಎಂದು ಅವರಿಗೆ ಸೂಚಿಸಲಾಯಿತು. ಪರಿಶೀಲನಾ ಸಭೆ ಮುಗಿಯುವವರೆಗೂ ತಾನು ಕಾಯಬೇಕಾಗಬಹುದು ಎಂದು ಭಾವಿಸಿದ ಅವರು, ಇತರ ಅಧಿಕಾರಿಗಳೂ ಸಭೆಗೆ ಹಾಜರಾಗುವುದನ್ನು ತಡೆಯಲು ನಿರ್ಧರಿಸಿ ಪರಿಣಾಮಕಾರಿಯಾಗಿ ಪ್ರಧಾನಿ ನಿಗದಿಪಡಿಸಿದ ಪರಿಶೀಲನಾ ಸಭೆಯನ್ನು ರದ್ದುಗೊಳಿಸಿದರು ಎಂದಿದೆ.
ನಮಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ನನ್ನ ನಿರ್ದೇಶಕರು (ಭದ್ರತೆ) ಎಸ್ಪಿಜಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮಮತಾ ಹೇಳಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಡಬ್ಲ್ಯುಬಿ ಯ ಎಲ್ಒಪಿ ಇರುವುದರಿಂದ ಮಮತಾ ಬ್ಯಾನರ್ಜಿ ವಿಮರ್ಶೆ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಪರಿಶೀಲನಾ ಸಭೆಯ ನಂತರ ಪಿಎಂ ಅವರನ್ನು ಭೇಟಿಯಾಗುತ್ತಾರೆ ಎಂದು ಅವರಿಗೆ ಸೂಚಿಸಲಾಯಿತು. ಪರಿಶೀಲನಾ ಸಭೆ ಮುಗಿಯುವವರೆಗೂ ತಾನು ಕಾಯಬೇಕಾಗಬಹುದು ಎಂದು ಭಾವಿಸಿದ ಅವರು, ಇತರ ಅಧಿಕಾರಿಗಳೂ ಸಭೆಗೆ ಹಾಜರಾಗುವುದನ್ನು ತಡೆಯಲು ನಿರ್ಧರಿಸಿ ಪರಿಣಾಮಕಾರಿಯಾಗಿ ಪ್ರಧಾನಿ ನಿಗದಿಪಡಿಸಿದ ಪರಿಶೀಲನಾ ಸಭೆಯನ್ನು ರದ್ದುಗೊಳಿಸಿದರು ಎಂದಿದೆ.
ನಾನು ವರದಿಯನ್ನು ನೀಡಲು ಸಭೆಗೆ ಬಂದೆ. ಸಭೆ ನಡೆಯಬೇಕಿದ್ದ ದಿಘಾಗೆ ತೆರಳಲು ನಾನು ನಿಮ್ಮಿಂದ ಸ್ಪಷ್ಟವಾಗಿ ಅನುಮತಿ ಕೋರಿದ್ದೆ. ನಮ್ಮ ರಜೆ ತೆಗೆದುಕೊಳ್ಳಲು ನೀವು ನಮಗೆ ಸ್ಪಷ್ಟವಾಗಿ ಅನುಮತಿ ನೀಡಿದ್ದೀರಿ ಎಂದು ಮಮತಾ ಆರೋಪಿಸಿದ್ದರೆ ಮಮತಾ ಬ್ಯಾನರ್ಜಿಗೆ ಸಭೆಯಿಂದ ಹೊರಹೋಗಲು ಪಿಎಂ ಅನುಮತಿ ನೀಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ