Fact Check: ಇಸ್ಲಾಂಗೆ ಜಗತ್ತಿನ ಶಾಂತಿಯುತ ಧರ್ಮ ಮಾನ್ಯತೆ ನೀಡಿದ ಯುನೆಸ್ಕೊ

Published : Nov 19, 2019, 10:38 AM IST
Fact Check: ಇಸ್ಲಾಂಗೆ ಜಗತ್ತಿನ ಶಾಂತಿಯುತ ಧರ್ಮ ಮಾನ್ಯತೆ ನೀಡಿದ ಯುನೆಸ್ಕೊ

ಸಾರಾಂಶ

ವಿಶ್ವಸಂಸ್ಥೆಯ ಯುನೆಸ್ಕೊ ಇಸ್ಲಾಂ ಧರ್ಮ ಜಗತ್ತಿನ ಅತ್ಯಂತ ಶಾಂತಿಯುತ ಎಂದು ಘೋಷಿಸಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವಾರು ಇಸ್ಲಾಮಿಕ್‌ ಫೇಸ್‌ಬುಕ್‌ ಪೇಜ್‌ಗಳು ಇದನ್ನು ಪೋಸ್ಟ್‌ ಮಾಡಿದ್ದು, ಇದೀಗ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ವಿಶ್ವಸಂಸ್ಥೆಯ ಯುನೆಸ್ಕೊ ಇಸ್ಲಾಂ ಧರ್ಮ ಜಗತ್ತಿನ ಅತ್ಯಂತ ಶಾಂತಿಯುತ ಎಂದು ಘೋಷಿಸಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವಾರು ಇಸ್ಲಾಮಿಕ್‌ ಫೇಸ್‌ಬುಕ್‌ ಪೇಜ್‌ಗಳು ಇದನ್ನು ಪೋಸ್ಟ್‌ ಮಾಡಿದ್ದು, ಇದೀಗ ವೈರಲ್‌ ಆಗುತ್ತಿದೆ.

Fact Check: ಕೊಬ್ಬರಿ ಎಣ್ಣೆಯನ್ನು ಕಾಲಿಗೆ ಹಚ್ಚೋದ್ರಿಂದ ಡೆಂಘೀ ಹರಡಲ್ಲ!

ಯುನೆಸ್ಕೊ ನಿರ್ದೇಶಕ ಐರಿನಾ ಬೊಕೊವಾ ಅವರ ಸಹಿ ಹೊಂದಿದ ಸರ್ಟಿಫಿಕೇಟನ್ನು ಪೋಸ್ಟ್‌ ಮಾಡಿದ್ದು, ಅದರಲ್ಲಿ ‘2016ರ ಜುಲೈ 4ರಂದು ನಾವು ಇಸ್ಲಾಮನ್ನು ಜಗತ್ತಿನ ಅತ್ಯಂತ ಶಾಂತಿಯುತ ಧರ್ಮ ಎಂದು ಘೋಷಿಸಿದ್ದೇವೆ’ ಎಂದು ಬರೆಯಲಾಗಿದೆ. ಅದರೊಂದಿಗೆ ಅಂತಾರಾಷ್ಟ್ರೀಯ ಶಾಂತಿ ಸಂಘಟನೆಯ ಲೋಗೋ ಕೂಡ ಸರ್ಟಿಫಿಕೇಟ್‌ನಲ್ಲಿದೆ.

Fact Check: ರಾಮಮಂದಿರ ನಿರ್ಮಾಣಕ್ಕೆ ತಿರುಪತಿಯಿಂದ 100 ಕೋಟಿ ದೇಣಿಗೆ!

ಹಲವರು ‘ಐ ಲವ್‌ ಇಸ್ಲಾಂ’ ಎಂದು ಬರೆದು ಈ ಸರ್ಟಿಫಿಕೇಟನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆದರೆ ನಿಜಕ್ಕೂ ಯುನೆಸ್ಕೋ ಇಸ್ಲಾಂ ಧರ್ಮಕ್ಕೆ ಈ ಮಾನ್ಯತೆ ನೀಡಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

ಸೋಷಿಯಲ್‌ ಮೀಡಿಯಗಳಲ್ಲಿ ವೈರಲ್‌ ಆಗಿರುವ ಸರ್ಟಿಫಿಕೇಟ್‌ ನಕಲಿ. ಇದು ಹಲವು ವರ್ಷಗಳಿಂದಲೂ ಹರಿದಾಡುತ್ತಿದೆ. ಅಲ್ಲದೆ ಯುನೆಸ್ಕೊಗೆ ಯಾವುದೇ ಅಂತಾರಾಷ್ಟ್ರೀಯ ಶಾಂತಿ ಸಂಘಟನೆಗಳೊಂದಿಗೆ ಅಧಿಕೃತ ಸಂಬಂಧ ಇಲ್ಲ. ಹಾಗಾಗಿ ಯುನೆಸ್ಕೋ ಇಸ್ಲಾಂ ಧರ್ಮ ಜಗತ್ತಿನ ಅತ್ಯಂತ ಶಾಂತಿಯುತ ಧರ್ಮ ಎಂದು ಮಾನ್ಯತೆ ನೀಡಿರುವುದು ಸುಳ್ಳು.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!