Fact Check: ದೆಹಲಿ ಹಿಂಸಾ​ಚಾ​ರದಲ್ಲಿ ಪುಟ್ಟಮಗು​ವಿಗೇ ಥಳಿ​ಸಿದ ಪೊಲೀ​ಸ್‌!

Srilakshmi kashyap   | Asianet News
Published : Mar 02, 2020, 12:00 PM ISTUpdated : Mar 02, 2020, 12:19 PM IST
Fact Check: ದೆಹಲಿ ಹಿಂಸಾ​ಚಾ​ರದಲ್ಲಿ ಪುಟ್ಟಮಗು​ವಿಗೇ ಥಳಿ​ಸಿದ ಪೊಲೀ​ಸ್‌!

ಸಾರಾಂಶ

ದೆಹಲಿ ಹಿಂಸಾಚಾರದಲ್ಲಿ ಪೊಲೀಸ್‌ ಪುಟ್ಟ ಬಾಲ​ಕ​ನಿಗೆ ಲಾಠಿ​ಯಿಂದ ಹೊಡೆ​ಯು​ತ್ತಿ​ರುವ ಫೋಟೋ​ವೊಂದು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗು​ತ್ತಿದೆ. ದೆಹಲಿ ಹಿಂಸಾ​ಚಾ​ರದ ಸಂದ​ರ್ಭ​ದಲ್ಲಿ ಪೊಲೀಸ್‌ ಇಲಾಖೆ ಹೇಗೆ ಜನ​ವಿ​ರೋ​ಧಿ​ಯಾಗಿ ವರ್ತಿ​ಸಿತು ಎಂದು ಈ ಫೋಟೋ ಮೂಲಕ ಹೇಳ​ಲಾ​ಗಿದೆ. ನಿಜನಾ ಈ ಸುದ್ದಿ? 

ಪೌರತ್ವ ತಿದ್ದು​ಪಡಿ ಕಾಯ್ದೆ ಕುರಿತ ಪರ-ವಿರೋಧಿ ಪ್ರತಿ​ಭ​ಟ​ನೆ​ಯಲ್ಲಿ ಕೆಲ ದಿನ​ಗ​ಳಿಂದ ದೆಹಲಿ ಹೊತ್ತಿ ಉರಿದು ಸದ್ಯ ಅಲ್ಪ ಮಟ್ಟಿಗೆ ತಣ್ಣ​ಗಾ​ಗಿದೆ. ಈ ಕೋಮು ಹಿಂಸಾ​ಚಾ​ರ​ದಲ್ಲಿ 40ಕ್ಕೂ ಹೆಚ್ಚು ಜನರು ಮೃತಪ​ಟ್ಟಿ​ದ್ದಾರೆ, 250ಕ್ಕೂ ಹೆಚ್ಚು ಜನರು ಗಾಯ​ಗೊಂಡಿ​ದ್ದಾ​ರೆ. ಈ ಹಿಂಸಾ​ಚಾ​ರಕ್ಕೆ ಸಂಬಂಧ​ಪಟ್ಟಹಲವು ಫೋಟೋ​ಗಳು ಮನ​ಕ​ಲ​ಕು​ವಂತಿ​ವೆ.

ಸದ್ಯ ಪೊಲೀಸ್‌ ಪುಟ್ಟಬಾಲ​ಕ​ನಿಗೆ ಲಾಠಿ​ಯಿಂದ ಹೊಡೆ​ಯು​ತ್ತಿ​ರುವ ಫೋಟೋ​ವೊಂದು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗು​ತ್ತಿದೆ. ದೆಹಲಿ ಹಿಂಸಾ​ಚಾ​ರದ ಸಂದ​ರ್ಭ​ದಲ್ಲಿ ಪೊಲೀಸ್‌ ಇಲಾಖೆ ಹೇಗೆ ಜನ​ವಿ​ರೋ​ಧಿ​ಯಾಗಿ ವರ್ತಿ​ಸಿತು ಎಂದು ಈ ಫೋಟೋ ಮೂಲಕ ಹೇಳ​ಲಾ​ಗಿದೆ.

Fact Check: ಹೋಳಿಗೆ ಚೀನಾ ಬಣ್ಣ ಬಳ​ಸ​ದಂತೆ ಪ್ರಕ​ಟ​ಣೆ!

ಅನಿಲ್‌ ಕುಮಾರ್‌ ಯಾದವ್‌ ಎಂಬು​ವ​ವರು ಈ ಫೋಟೋ​ವನ್ನು ಪೋಸ್ಟ್‌ ಮಾಡಿ, ‘ದೆ​ಹಲಿ ಪೊಲೀಸ್‌ ದೊಡ್ಡ ಭಯೋ​ತ್ಪಾ​ದ​ಕ​ನನ್ನು ಹಿಡಿದು ತಳಿ​ಸು​ತ್ತಿ​ದ್ದಾ​ರೆ’ ಎಂದು ಹಿಂದಿ​ಯಲ್ಲಿ ಮಾರ್ಮಿ​ಕ​ವಾಗಿ ಒಕ್ಕಣೆ ಬರೆ​ದು​ಕೊಂಡಿದ್ದು, ಅದು 27,000 ಬಾರಿ ಶೇರ್‌ ಆಗಿದೆ.

ಆದರೆ ಇಂಡಿಯಾ ಟುಡೇ ಈ ಫೋಟೋ ನಿಜಕ್ಕೂ ದೆಹಲಿ ಹಿಂಸಾ​ಚಾ​ರಕ್ಕೆ ಸಂಬಂಧಿ​ಸಿದ್ದೇ ಎಂದು ಪರಿ​ಶೀ​ಲಿ​ಸಿ​ದಾಗ ವೈರಲ್‌ ಸುದ್ದಿ ಸುಳ್ಳು, ಈ ಫೋಟೋ 10 ವರ್ಷ ಹಿಂದಿ​ನದ್ದು ಎಂಬ ವಾಸ್ತವ ತಿಳಿ​ದಿ​ದೆ. 2010ರಲ್ಲಿ ‘ದ ಗಾರ್ಡಿ​ಯನ್‌’ ಇದೇ ಫೋಟೋ​ವನ್ನು ಬಳಸಿ ಸುದ್ದಿ​ಯೊಂದನ್ನು ಪ್ರಕ​ಟಿ​ಸಿ​ರು​ವುದು ಪತ್ತೆ​ಯಾ​ಗಿದೆ.

ಅದ​ರಲ್ಲಿ ‘ಬಾಂಗ್ಲಾದ ಢಾಕಾ​ದಲ್ಲಿ ಗಾರ್ಮೆಂಟ್‌ ನೌಕ​ರರು ವೇತ​ನಕ್ಕೆ ಆಗ್ರ​ಹಿಸಿ ಪ್ರತಿ​ಭ​ಟ​ನೆ ನಡೆ​ಸು​ತ್ತಿದ್ದ ಸಂದ​ರ್ಭ​ದಲ್ಲಿ ಬಾಂಗ್ಲಾ ಪೊಲೀಸ್‌ ಅಧಿ​ಕಾರಿ ಪುಟ್ಟಮಗು​ವನ್ನೇ ಥಳಿ​ಸಿ​ದ್ದಾ​ರೆ’ ಎಂದು ಒಕ್ಕಣೆ ಬರೆ​ಯ​ಲಾ​ಗಿ​ದೆ. ಈ ಪ್ರತಿ​ಭ​ಟ​ನೆ​ಯಲ್ಲಿ ಪೊಲೀ​ಸರು ಪ್ರತಿ​ಭ​ಟ​ನಾ​ಕಾ​ರ​ರನ್ನು ಚದು​ರಿ​ಸಲು ಟಿಯರ್‌ ಗ್ಯಾಸ್‌, ಲಾಠಿ, ವಾಟರ್‌ ಕ್ಯಾನನ್‌ ಬಳ​ಸಿ​ದ್ದರು. ಅಲ್ಲಿಗೆ ಈ ಸುದ್ದಿ ದೆಹಲಿ ಹಿಂಸಾ​ಚಾ​ರ​ಕ್ಕೆ ಅಥವಾ ಭಾರ​ತಕ್ಕೆ ಸಂಬಂಧ​ಪ​ಟ್ಟಿದ್ದು ಅಲ್ಲ ಎಂಬುದು ಸ್ಪಷ್ಟ.

- ವೈರಲ್ ಚೆಕ್ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?