ಸರ್ಕಾರಿ ಭೂಮಿ ನುಂಗಿದ ಆರೋಪ, ಪ್ರಕಾಶ್‌ ರಾಜ್‌ಗೆ ನೋಟಿಸ್‌!

Published : Aug 29, 2023, 06:44 PM IST
 ಸರ್ಕಾರಿ ಭೂಮಿ ನುಂಗಿದ ಆರೋಪ, ಪ್ರಕಾಶ್‌ ರಾಜ್‌ಗೆ ನೋಟಿಸ್‌!

ಸಾರಾಂಶ

ಚಂದ್ರಯಾನ-3 ಯಶಸ್ಸನ್ನು ಕೆಣಕಿ ಟ್ವೀಟ್‌ ಮಾಡಿ ಸುದ್ದಿಯಾಗಿದ್ದ ನಟ ಪ್ರಕಾಶ್‌ ರಾಜ್‌ಗೆ ತಮಿಳುನಾಡು ಸರ್ಕಾರ ನೋಟಿಸ್‌ ಜಾರಿ ಮಾಡಿದೆ. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.

ದಿಂಡಿಗಲ್‌ (ಆ.29): ಕೊಡೈಕೆನಾಲ್‌ನ ವಿಲ್‌ಪಟ್ಟಿ ಪಂಚಾಯತ್‌ನಲ್ಲಿ ಬಂಗಲೆ ನಿರ್ಮಿಸಲು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದ ಮೇಲೆ ನಟರಾದ ಪ್ರಕಾಶ್ ರಾಜ್ ಮತ್ತು ಬಾಬಿ ಸಿಂಹ ಅವರಿಗೆ ಕೊಡೈಕೆನಾಲ್ ವಲಯ ಉಪ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.  ಮೂಲಗಳ ಪ್ರಕಾರ, ಪೇತುಪರೈ ಗ್ರಾಮದ ಅಧ್ಯಕ್ಷ ಕೆ.ವಿ.ಮಹೇಂದ್ರನ್ ಅವರು ರೈತರೂ ಆಗಿದ್ದು, ನಟರಾದ ಪ್ರಕಾಶ್ ರಾಜ್ ಮತ್ತು ಬಾಬಿ ಸಿಂಹ ಅವರು ತಮ್ಮ ಬಂಗಲೆಗಳನ್ನು ನಿರ್ಮಿಸಲು ಪೇತುಪರೈ ಮತ್ತು ಭಾರತಿಪುರಂ ಅಣ್ಣಾನಗರ ಬಳಿಯ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇಬ್ಬರೂ ನಟರು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯದೆ ಬಂಗಲೆಗಳನ್ನು ನಿರ್ಮಿಸಿದ್ದಾರೆ ಮತ್ತು ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿ ಬಂಗೆಲೆಗೆ ರಸ್ತೆಗಳನ್ನು ನಿರ್ಮಿಸಿದ್ದಾರೆ, ಇದರಿಂದ ಗ್ರಾಮದ ನಿವಾಸಿಗಳು ರಸ್ತೆಗಳನ್ನು ಬಳಸದಂತೆ ತಡೆಯುತ್ತಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಇದರ ಬೆನ್ನಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಮತ್ತು ಶುಕ್ರವಾರ ಎರಡೂ ನಟರ ಜಮೀನು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಕೊಡೈಕೆನಾಲ್‌ ಕಂದಾಯ ವಿಭಾಗಾಧಿಕಾರಿ ರಾಜಾ, ತಹಶೀಲ್ದಾರ್ ಮತ್ತು ಸರ್ವೆಯರ್ ಇಬ್ಬರೂ ನಟರ ಜಮೀನುಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಪರಿಶೀಲನೆ ಪೂರ್ಣಗೊಂಡ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸದ್ಯ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಇಬ್ಬರೂ ನಟರ ಜಮೀನುಗಳು ಪಂಚಾಯತ್ ವ್ಯಾಪ್ತಿಗೆ ಬರುತ್ತವೆಯೇ ಎಂದು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾಧ್ಯಮಗಳು ವಿಲ್ಪಟ್ಟಿ ಪಂಚಾಯತ್ ಅಧ್ಯಕ್ಷೆ ಪಕ್ಕಿಯಲಕ್ಷ್ಮಿ ರಾಮಚಂದ್ರನ್ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದೆ.  ಪಕ್ಕಿಯಲಕ್ಷ್ಮಿ ರಾಮಚಂದ್ರನ್ ಪರವಾಗಿ ಅವರ ಪತಿ ರಾಮಚಂದ್ರನ್ ಅವರು ನಟ ಬಾಬಿ ಸಿಂಹ ಅವರ ಜಮೀನು ಪೋಷಕರಾದ ಕೃಷ್ಣಕುಮಾರಿ ಮತ್ತು ರಾಮಕೃಷ್ಣನ್ ಅವರ ಹೆಸರಿನಲ್ಲಿದೆ ಮತ್ತು ಇದು ಪೇತುಪರೈ ಗ್ರಾಮದ ಅಡಿಯಲ್ಲಿ ಬರುವ ಪಟ್ಟಾ ಜಮೀನು ಎಂದು ಹೇಳಿದರು. "2021 ರಲ್ಲಿ, ವಿಶೇಷ ಅಧಿಕಾರಿಯ ಅಧಿಕಾರಾವಧಿಯಲ್ಲಿ, ಅವರು 2,500 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡವನ್ನು ನಿರ್ಮಿಸಲು ಅನುಮೋದನೆಯನ್ನು ಪಡೆದರು. ಆದರೆ, ನಂತರ, ಅವರು ತಮ್ಮ ಅನುಮೋದನೆಯನ್ನು ನವೀಕರಿಸಿದರು ಮತ್ತು 4,000 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡವನ್ನು ನಿರ್ಮಿಸಿದರು," ಎಂದು ತಿಳಿಸಿದ್ದಾರೆ.

ಇನ್ನು ಭಾರತೀಪುರಂ ಅಣ್ಣಾನಗರ ಗ್ರಾಮದಲ್ಲಿ ನಟ ಪ್ರಕಾಶ್ ರಾಜ್ ಅವರಿಗೂ ಪಟ್ಟಾ ಜಮೀನು ಇದ್ದು, ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೆ ಬಂಗಲೆ ನಿರ್ಮಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇಬ್ಬರೂ ನಟರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

Chandrayaan-3: ಚಂದ್ರಯಾನದ ಬಗ್ಗೆ ಲೇವಡಿ ಮಾಡಿದ್ದ ಪ್ರಕಾಶ್‌ ರಾಜ್‌ ವಿರುದ್ಧ ಕೇಸ್‌

ಉಪ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಆರ್.ಪಂಡಿಕುಮಾರ್ ಪ್ರಸಾದ್‌ ಮಾತನಾಡಿದ್ದು, ಏಳು ದಿನಗಳೊಳಗೆ ಯೋಜನಾ ರೇಖಾಚಿತ್ರದ ಜೊತೆಗೆ ತಮ್ಮ ಉಲ್ಲಂಘನೆಗಳಿಗೆ ವಿವರಣೆ ನೀಡುವಂತೆ ಇಬ್ಬರೂ ನಟರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು. ಅವರ ಉತ್ತರದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಕಾಶ್‌ ರಾಜ್‌ ಚಂದ್ರಯಾನ ಗೇಲಿ ವಿವಾದ: ಸ್ಪಷ್ಟನೆ ನೀಡಿದ ನಟ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ