
ದೇಶದ ತುಂಬಾ ಎಲ್ ನಿನೊ ಭೀತಿ ಆವರಿಸಿದೆ. ಶೇಕಡಾ 60ರಷ್ಟು ಬರಗಾಲ ಆವರಿಸಿಕೊಳ್ಳಲಿದೆ. ಈ ಭವಿಷ್ಯ ಹೇಳ್ತಾ ಇರೋದು ಜ್ಯೋತಿಷಿಗಳಲ್ಲ.. ವಿಜ್ಞಾನಿಗಳು. ಬದುಕನ್ನೇ ಬುಡಮೇಲು ಮಾಡೋ ರಕ್ಕಸ ಬದಲಾವಣೆ ಏನು?
ಮಳೆಗಾಲ ಶುರುವಾಗುತ್ತೆ ಅನ್ನೋವಷ್ಟರಲ್ಲೇ ಮಳೆ ಮಾಯವಾಗಿದೆ. ಎಲ್ಲೆಡೆ ಬಿಸಿಲು ಕಾಣಿಸಿಕೊಂಡಿದೆ. ಇದೇನಾಯ್ತು ಅನ್ನೋವಾಗಲೇ ವಿಜ್ಞಾನಿಗಳು ನುಡಿದ ಭವಿಷ್ಯ ಭಾರತವನ್ನೇ ತಲ್ಲಣಿಸಿದೆ.ಇಡೀ ದೇಶವೇ ಈ ಬಾರಿ ಬೃಹತ್ ಬರಗಾಲಕ್ಕೆ ಸಾಕ್ಷಿಯಾಗೋ ಸಾಧ್ಯತೆ ಇದೆ. ಎಲ್ ನಿನೊ ಅಂದ್ರೆ ಬರೀ ಮಳೆ ಕೊರತೆಯಲ್ಲ.. ಇದು ಇಡೀ ದೇಶವನ್ನೇ ಕೊಲ್ಲುವ ಸೈಲೆಂಟ್ ಕಿಲ್ಲರ್.. ದೇಶದ 60% ಭಾಗ ಬರಗಾಲದ ಸುಳಿಗೆ ಸಿಲುಕೊ ಹಾಗೆ ಮಾಡೋ ವೈಪರಿತ್ಯ ಇದು..