ಒಂದೇ ಲಾಂಚರ್‌ ಮೂಲಕ ಎರಡು ಪ್ರಳಯ್‌ ಕ್ಷಿಪಣಿ ಪರೀಕ್ಷೆ ಮಾಡಿದ ಭಾರತ!

Published : Dec 31, 2025, 05:57 PM IST
DRDO

ಸಾರಾಂಶ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಒಡಿಶಾ ಕರಾವಳಿಯಲ್ಲಿ ಪ್ರಳಯ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಒಂದೇ ಲಾಂಚರ್‌ನಿಂದ ಎರಡು ಕ್ಷಿಪಣಿಗಳನ್ನು ಹಾರಿಸಲಾಗಿದ್ದು, ಇವು ತಮ್ಮ ಗುರಿಗಳನ್ನು ನಿಖರವಾಗಿ ತಲುಪಿವೆ. 

ಭುವನೇಶ್ವರ (ಡಿ.31): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಬುಧವಾರ ಒಡಿಶಾ ಕರಾವಳಿಯಲ್ಲಿ ಪ್ರಳಯ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಒಂದೇ ಲಾಂಚರ್‌ನಿಂದ ಎರಡು ಪ್ರಳಯ್‌ ಕ್ಷಿಪಣಿಗಳನ್ನು ಒಂದರ ನಂತರ ಒಂದರಂತೆ ಹಾರಿಸಲಾಯಿತು. ಇದನ್ನು ಸಾಲ್ವೋ ಲಾಂಚ್‌ ಎಂದು ಹೇಳಲಾಗುತ್ತದೆ.

ಕ್ಷಿಪಣಿಗಳ ಸಂಪೂರ್ಣ ಹಾರಾಟವನ್ನು ಮೇಲ್ವಿಚಾರಣೆ ಮಾಡಲು ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಲ್ಲಿ ಸೆನ್ಸಾರ್‌ಗಳನ್ನು ಸ್ಥಾಪಿಸಲಾಗಿತ್ತು. ರಕ್ಷಣಾ ಸಚಿವಾಲಯದ ಪ್ರಕಾರ, ಈ ಪರೀಕ್ಷೆಯನ್ನು ಬೆಳಿಗ್ಗೆ 10:30 ರ ಸುಮಾರಿಗೆ ನಡೆಸಲಾಯಿತು ಮತ್ತು ಇದು ಯೂಸರ್‌ ಮೌಲ್ಯಮಾಪನ ಪ್ರಯೋಗದ ಭಾಗವಾಗಿತ್ತು. ಎರಡೂ ಕ್ಷಿಪಣಿಗಳು ತಮ್ಮ ಉದ್ದೇಶಿತ ಪಥಗಳಲ್ಲಿ ನಿಖರವಾಗಿ ಹಾರಿದವು ಮತ್ತು ಯಶಸ್ವಿಯಾಗಿ ತಮ್ಮ ಗುರಿಗಳನ್ನು ತಲುಪಿದವು.

ಭಾರತದ ಕಾರ್ಯತಂತ್ರದ ಕ್ಷಿಪಣಿ ಸಾಮರ್ಥ್ಯಕ್ಕೆ ಇದು ಮಹತ್ವದ ಮೈಲಿಗಲ್ಲು ಎಂದು ರಕ್ಷಣಾ ಸಚಿವಾಲಯ ಬಣ್ಣಿಸಿದೆ. ಪ್ರಳಯ್‌ ಒಂದು ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದನ್ನು ಸಂಪೂರ್ಣವಾಗಿ ಸ್ಥಳೀಯವಾಗಿ ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ.

ಈಗಾಗಲೇ ಯಶಸ್ವಿ ಪರೀಕ್ಷೆ

ಇದಕ್ಕೂ ಮೊದಲು, ಡಿಆರ್‌ಡಿಒ ಜುಲೈ 28-29 ರಂದು ಒಡಿಶಾದ ಕರಾವಳಿಯಲ್ಲಿ ಪ್ರಳಯ್‌ ಕ್ಷಿಪಣಿಯ ಎರಡು ಯಶಸ್ವಿ ಪರೀಕ್ಷೆಗಳನ್ನು ನಡೆಸಿತು. ಈ ಪರೀಕ್ಷೆಗಳನ್ನು ಸೇನೆ ಮತ್ತು ವಾಯುಪಡೆಯ ಯೂಸರ್‌ ಮೌಲ್ಯಮಾಪನ ಪ್ರಯೋಗಗಳ ಭಾಗವಾಗಿಯೂ ನಡೆಸಲಾಯಿತು.ಸ್ಥಳೀಯ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾದ ಈ ಆಧುನಿಕ ಕ್ವಾಸಿ-ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಶೀಘ್ರದಲ್ಲೇ ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಿಸಲಾಗುವುದು, ಇದು ದೇಶದ ರಕ್ಷಣಾ ಸಾಮರ್ಥ್ಯ ಮತ್ತು ಸ್ವಾವಲಂಬನೆಯನ್ನು ಬಲಪಡಿಸುತ್ತದೆ.

K-4 ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ್ದ ಡಿಆರ್‌ಡಿಓ

ಇದಕ್ಕೂ ಮೊದಲು, ಡಿಸೆಂಬರ್ 23 ರಂದು, ಭಾರತವು ಬಂಗಾಳಕೊಲ್ಲಿಯಲ್ಲಿ 3,500 ಕಿಲೋಮೀಟರ್ ವ್ಯಾಪ್ತಿಯ K-4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಈ ಪರೀಕ್ಷೆಯನ್ನು ವಿಶಾಖಪಟ್ಟಣಂ ಕರಾವಳಿಯ INS ಅರಿಘಾಟ್‌ನಿಂದ ನಡೆಸಲಾಯಿತು. ಭಾರತವು ಈಗ ಭೂಮಿ ಮತ್ತು ಗಾಳಿಯಿಂದ ಮತ್ತು ಸಮುದ್ರದಿಂದಲೂ ಪರಮಾಣು ಶಸ್ತ್ರಾಸ್ತ್ರಗಳನ್ನು ಉಡಾಯಿಸಲು ಸಾಧ್ಯವಾಗುತ್ತದೆ.

ಈ ಕ್ಷಿಪಣಿಯು 2 ಟನ್‌ಗಳವರೆಗಿನ ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. K-ಸರಣಿಯ ಕ್ಷಿಪಣಿಗಳಲ್ಲಿನ "K" ಅಕ್ಷರವು ಭಾರತದ ಕ್ಷಿಪಣಿ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. APJ ಅಬ್ದುಲ್ ಕಲಾಂ ಅವರ ಗೌರವಾರ್ಥವಾಗಿ ನೀಡಲಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿವೋರ್ಸ್​ಗೆ ಪತ್ನಿ ಅರ್ಜಿ: ಜೀವನಾಂಶ ತಪ್ಪಿಸಿಕೊಳ್ಳಲು ಕಿಲಾಡಿ ಪತಿ ಭರ್ಜರಿ ಪ್ಲ್ಯಾನ್​! ಹೆಂಡ್ತಿ ಹೊಡೆದರೂ ನಕ್ಕ ಗಂಡ!
ದೇವರೇ.. 2025ರಲ್ಲಿ ಅಡಲ್ಟ್ ವೀಡಿಯೋ ನೋಡುವುದಕ್ಕೆ ಭಾರತೀಯರು ಖರ್ಚು ಮಾಡಿದ್ದು, ಇಷ್ಟೊಂದು ಕೋಟಿ ನಾ?