
ನವದೆಹಲಿ (ಜನವರಿ 24, 2023): ನ್ಯಾಯಾಂಗ ಹಾಗೂ ಸರ್ಕಾರದ ನಡುವೆ ನಡೆದಿರುವ ಸಂಘರ್ಷ ಕುರಿತ ತಮ್ಮ ಹೇಳಿಕೆಯನ್ನು ರಾಜಕಾರಣಿಗಳು ಬಳಸಿಕೊಳ್ಳುವುದಕ್ಕೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಆರ್.ಎಸ್. ಸೋಧಿ ವಿರೋಧ ವ್ಯಕ್ತಪಡಿಸಿದ್ದಾರೆ. ‘ಕೊಲಿಜಿಯಂ ಬಗ್ಗೆ ನಾನು ಆಡಿದ ಮಾತನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜುಗೆ ಮನವಿ ಮಾಡಿದ್ದಾರೆ. ‘ಕೊಲಿಜಿಯಂ ವ್ಯವಸ್ಥೆ ಮೂಲಕ ಸಂವಿಧಾನವನ್ನೇ ಸುಪ್ರೀಂಕೋರ್ಟ್ ಹೈಜಾಕ್ ಮಾಡಿದೆ’ ಎಂದು ಇತ್ತೀಚೆಗೆ ನಿವೃತ್ತ ನ್ಯಾಯಮೂರ್ತಿ ಸೋಧಿ ಹೇಳಿದ್ದರು. ಈ ಹೇಳಿಕೆ ಸಮರ್ಥಿಸಿದ್ದ ಸಚಿವ ರಿಜಿಜು, ‘ಇದು ಜಡ್ಜ್ ಒಬ್ಬರ ನ್ಯಾಯಸಮ್ಮತ ದನಿ’ ಎಂದಿದ್ದರು.
ಸೋಮವಾರ ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ನ್ಯಾಯಮೂರ್ತಿ ಸೋಧಿ (Sodhi), ‘ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಸಮಸ್ಯೆಯನ್ನು ಪ್ರಸ್ತಾಪಿಸುತ್ತಿರುವುದಕ್ಕೆ ಕಿರಣ್ ರಿಜಿಜು (Kiren Rijiju) ಅವರಿಗೆ ಧನ್ಯವಾದಗಳು. ಆದರೆ ನಾನು ರಾಜಕೀಯ ವ್ಯಕ್ತಿಯಲ್ಲ (Political Person). ಅದು ವೈಯಕ್ತಿಕ ಅಭಿಪ್ರಾಯ (Personal Opinion). ನನ್ನ ಹೆಗಲ ಮೇಲೆ ಗನ್ (Gun) ಇಟ್ಟು ಶೂಟ್ (Shoot) ಮಾಡಬೇಡಿ’ ಎಂದು ಕೋರಿದ್ದಾರೆ.
ಇದನ್ನು ಓದಿ: ಮತ್ತೆ ಕೇಂದ್ರ v/s ಸುಪ್ರೀಂ: ಸುಪ್ರೀಂನಿಂದ ಸಂವಿಧಾನ ಹೈಜಾಕ್; ನಿವೃತ್ತ ಜಡ್ಜ್ ಹೇಳಿಕೆಗೆ ಸಚಿವ ಬೆಂಬಲ
‘ಕೇವಲ ಕೆಲ ಜಡ್ಜ್ಗಳು ಮಾತ್ರ ಸೇರಿಕೊಂಡು ಜಡ್ಜ್ಗಳನ್ನು ನೇಮಿಸಲು ಹೇಗೆ ಸಾಧ್ಯ? ಕೊಲಿಜಿಯಂ ವ್ಯವಸ್ಥೆ ವಿಫಲವಾಗಿದೆ. ಆದರೆ ಸಾಂವಿಧಾನಿಕ ಸಂಸ್ಥೆಗಳು ಸಾರ್ವಜನಿಕವಾಗಿ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಸೋಧಿ ಅಭಿಪ್ರಾಯಪಟ್ಟಿದ್ದಾರೆ.
ಜನರು ಜಡ್ಜ್ಗಳ ನಡೆ ಗಮನಿಸುತ್ತಾರೆ: ಸಚಿವ ಕಿರಣ್ ರಿಜಿಜು
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕುರಿತಾಗಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಡುವಿನ ಜಟಾಪಟಿ ಮುಂದುವರೆದಿದೆ. ‘ನ್ಯಾಯಮೂರ್ತಿಗಳು ಚುನಾವಣೆಗಳನ್ನು ಎದುರಿಸುವುದಿಲ್ಲವಾದರೂ ಅವರ ನಡೆ-ನುಡಿ, ತೀರ್ಪುಗಳನ್ನು ಜನರು ಸದಾ ಗಮನಿಸುತ್ತಿರುತ್ತಾರೆ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸೋಮವಾರ ಹೇಳಿದ್ದಾರೆ.
ಇದನ್ನೂ ಓದಿ: ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ಸೇರ್ಪಡೆ ಮಾಡಿ: ಸಿಜೆಐಗೆ ಕಾನೂನು ಸಚಿವ ರಿಜಿಜು ಪತ್ರ
ಸೋಮವಾರ ಸಮಾರಂಭವೊಂದರಲ್ಲಿ ಅವರು ಮಾತನಾಡಿ, ‘ನ್ಯಾಯಮೂರ್ತಿಗಳು ಚುನಾವಣೆಗಳಲ್ಲಿ ಭಾಗಿಯಾಗುವುದಿಲ್ಲ ಅಥವಾ ನೇರವಾಗಿ ಜನರ ವಿಮರ್ಶೆಗೆ ಒಳಗಾಗುವುದಿಲ್ಲ. ಆದರೂ ಅವರು ತಮ್ಮ ಕೆಲಸಗಳು, ತೀರ್ಪುಗಳ ಮೂಲಕ ಸಾರ್ವಜನಿಕ ನಿಗಾದಲ್ಲಿರುತ್ತಾರೆ. ಜನರು ಸದಾ ನಿಮ್ಮನ್ನು (ನ್ಯಾಯಮೂರ್ತಿಗಳು) ಗಮನಿಸುತ್ತಿರುತ್ತಾರೆ ಮತ್ತು ವಿಮರ್ಶಿಸುತ್ತಾರೆ. ಜನರು ಗಮನಿಸುತ್ತಿರುತ್ತಾರೆ, ಪರಿಶೀಲಿಸುತ್ತಾರೆ. ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಾರೆ’ ಎಂದರು.
‘ಈಗ ಸಾಮಾಜಿಕ ಜಾಲತಾಣಗಳ ಬಲದಿಂದ ಎಲ್ಲರಿಗೂ ಮಾತನಾಡುವ ಧೈರ್ಯ ಬಂದಿದೆ. ಇವುಗಳು ಇಲ್ಲದ ಕಾಲದಲ್ಲಿ ಕೇವಲ ರಾಜಕಾರಣಿಗಳು ಮಾತ್ರ ಮಾತನಾಡುತ್ತಿದ್ದರು. ಜಾಲತಾಣದಲ್ಲಿ ಮುಖ್ಯ ನ್ಯಾಯಮೂರ್ತಿ ಅವರ ವಿರುದ್ಧ ಆಗಿರುವ ನಿಂದನೆಗೆ ಅವರು ಜಾಲತಾಣದಲ್ಲೇ ಉತ್ತರಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಸಹಾಯ ಕೋರಿದ್ದಾರೆ. ದೃಢವಾದ ನಿರ್ಧಾರ ಕೈಗೊಳ್ಳುವಂತೆ ನಮಗೆ ಮನವಿ ಮಾಡಿದ್ದಾರೆ’ ಎಂದೂ ಹೇಳಿದರು. 1947 ರಿಂದ ಸಾಕಷ್ಟು ಬದಲಾವಣೆ ಆಗಿವೆ. ಹೀಗಾಗಿ ಹಾಲಿ ವ್ಯವಸ್ಥೆ ಬದಲಾಗಲೇಬಾರದು ಎಂದು ಭಾವಿಸುವುದು ತಪ್ಪು ಎಂದು ಕೊಲಿಜಿಯಂ ವ್ಯವಸ್ಥೆ ಬದಲಾವಣೆಗೆ ವಿರೋಧಿಸುವವರಿಗೆ ಟಾಂಗ್ ನೀಡಿದರು.
ಇದನ್ನೂ ಓದಿ: ಜಡ್ಜ್ ನೇಮಕ ಪ್ರಕ್ರಿಯೆ ಬಗ್ಗೆ ಮತ್ತೆ ರಿಜಿಜು ಅತೃಪ್ತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ