ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ₹2,500 ಹಣ ಪಡೆಯಲು 'ಗರ್ಭಕಂಠ ಕ್ಯಾನ್ಸರ್ ಲಸಿಕೆ' ಪಡೆಯುವುದು ಕಡ್ಡಾಯ!

Sathish Kumar KH   | Kannada Prabha
Published : Aug 11, 2026, 06:51 AM IST
Delhi Lakshmi yojana

ಸಾರಾಂಶ

ಸರ್ಕಾರದಿಂದ ಮಹಿಳೆಯರಿಗೆ ಮಾಸಿಕವಾಗಿ ನೀಡುವ 2,500 ರೂ. ಲಕ್ಷ್ಮೀ ಯೋಜನೆ ಹಣವನ್ನು ಪಡೆಯಬೇಕೆಂದರೆ ಸಂಬಂಧಪಟ್ಟ ಕುಟುಂಬದ ಹೆಣ್ಣುಮಕ್ಕಳಿಗೆ ಹೆಚ್‌ಪಿವಿ ಲಸಿಕೆ ಹಾಕಿಸುವುದು, ಗರ್ಭಿಣಿಯರಿಗೆ ಪೋಷಣ್ ಟ್ರ್ಯಾಕರ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಆದೇಶ ಹೊರಡಿಸಲಾಗಿದೆ.

ನವದೆಹಲಿ (ಆ.11): ದೆಹಲಿ ಸರ್ಕಾರ ಜಾರಿಗೆ ತರಲಿರುವ ‘ದೆಹಲಿ ಲಕ್ಷ್ಮೀ ಯೋಜನೆ’ಯಡಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು 2,500 ರು. ಆರ್ಥಿಕ ನೆರವು ಒದಗಿಸಲು ಹಲವು ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ. ಈ ಯೋಜನೆಯ ಲಾಭ ಪಡೆಯಲು ಕುಟುಂಬದ ಹೆಣ್ಣುಮಕ್ಕಳಿಗೆ ಹೆಚ್‌ಪಿವಿ ಲಸಿಕೆ ಹಾಕಿಸುವುದು, ಗರ್ಭಿಣಿಯರಿಗೆ ಪೋಷಣ್ ಟ್ರ್ಯಾಕರ್‌ನಲ್ಲಿ ನೋಂದಣಿ ಮತ್ತು ವೈಯಕ್ತಿಕ ಡೇಟಾ ಹಂಚಿಕೆಗೆ ಸಮ್ಮತಿ ನೀಡುವುದು ಸೇರಿದಂತೆ ವಿವಿಧ ಮಾನದಂಡಗಳನ್ನು ಕಡ್ಡಾಯಗೊಳಿಸಲಾಗಿದೆ.

ಪೋಷಣ್ ಟ್ರ್ಯಾಕರ್‌ನಲ್ಲಿ ನೋಂದಣಿ

ಯೋಜನೆಯ ಹೊಸ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಕುಟುಂಬದಲ್ಲಿ 14 ವರ್ಷಕ್ಕಿಂತ ಮೇಲ್ಪಟ್ಟ ಹೆಣ್ಣುಮಕ್ಕಳಿದ್ದರೆ, ಅವರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಹೆಚ್‌ಪಿವಿ ಲಸಿಕೆ ಹಾಕಿಸಿರುವುದು ಕಡ್ಡಾಯವಾಗಿದೆ. ಇದರೊಂದಿಗೆ ಕುಟುಂಬದ ಇತರೆ ಮಕ್ಕಳಿಗೂ ನಿಗದಿತ ಲಸಿಕೆಗಳನ್ನು ನೀಡಿರಬೇಕು. ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರಿದ್ದಲ್ಲಿ ಅವರನ್ನು ಕೇಂದ್ರ ಸರ್ಕಾರದ ಪೋಷಣ್ ಟ್ರ್ಯಾಕರ್ ವೇದಿಕೆಯಲ್ಲಿ ನೋಂದಾಯಿಸಿರಬೇಕಾಗುತ್ತದೆ.

ಲಸಿಕೆ ಸುರಕ್ಷಿತವಲ್ಲ ಎಂಬ ತಪ್ಪು ಕಲ್ಪನೆ

ಎಚ್.ಪಿ.ವಿ. ಲಸಿಕೆ ಸುರಕ್ಷಿತವಾಗಿದ್ದು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 14-15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ನೀಡುವ ಉಚಿತ ಎಚ್.ಪಿ.ವಿ. ಲಸಿಕಾ ಅಭಿಯಾನವಾಗಿದೆ. ಈ ಕುರಿತು ಶಾಲೆಗಳಲ್ಲಿ ಸಭೆ ನಡೆಸುವ ಮೂಲಕ ಅಥವಾ ಇತರ ಇಲಾಖೆಗಳ ಸಹಕಾರದಿಂದ ಮಕ್ಕಳಿಂದಲೂ ಪೋಷಕರಿಗೆ ಮಾಹಿತಿ ನೀಡಬೇಕು. ಲಸಿಕೆ ಸುರಕ್ಷಿತವಲ್ಲ ಎಂಬ ತಪ್ಪು ಕಲ್ಪನೆ ಹೋಗಲಾಡಿಸಬೇಕು. ಎಚ್.ಪಿ.ವಿ. ಲಸಿಕೆಯ ಬಗ್ಗೆ ಪೋಷಕರು ಮಾಹಿತಿ ಕೊರತೆಯಿಂದ ಲಸಿಕೆ ಕೊಡಿಸಲು ನಿರಾಕರಿಸುತ್ತಿದ್ದು, ಲಸಿಕೆಯ ಅವಶ್ಯಕತೆ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಯುವ ಬಗ್ಗೆ ಸರಿಯಾದ ಅರಿವು ಮೂಡಿಸಬೇಕು. 35 ವರ್ಷ ಕಳೆದ ಮಹಿಳೆಯರು ಗರ್ಭಕಂಠದ ತಪಾಸಣೆ ಮಾಡಿಸುವುದರಿಂದ ಗರ್ಭಕಂಠದ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಳ್ಳಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿಲ್ಲಿ ವಿಶ್ವ ಬ್ಯಾಡ್ಮಿಂಟನ್‌ಗೆ ಲಂಗೂರ್‌ಗಳಿಂದ ಸೆಕ್ಯೂರಿಟಿ - ಮಂಗಗಳಿಂದ ರಕ್ಷಣೆಗೆ 3 ಮಾನವ ಲಂಗೂರ್‌ ನೇಮಕ
ಜಾರ್ಖಂಡ್‌ ಅಸೆಂಬ್ಲಿಗೇ ನುಗ್ಗಲು 'ಜೆನ್‌ ಝೀ'ಗಳ ಯತ್ನ: ಪೊಲೀಸರಿಂದ ಲಾಠಿಚಾರ್ಜ್, ಜಲಫಿರಂಗಿ; ಕೈ-ಮೈತ್ರಿಯಲ್ಲಿ ಕ್ರಾಂತಿ!