
ದೆಹಲಿ (ಜನವರಿ 8, 2024): ಸತ್ತು ಹೋಗಿದ್ದಾರೆ ಅನ್ನೋ ವ್ಯಕ್ತಿ ನಿಮ್ಮ ಎದುರಿಗೆ ಬಂದ್ರೆ ನಿಮಗೆ ಏನಾಗುತ್ತೆ? ಯೋಚ್ನೆ ಮಾಡಿದ್ರಾ? ಉತ್ತರ ಪ್ರದೇಶದಲ್ಲೂ ಇಂತದ್ದೇ ಒಂದು ಘಟನೆ ನಡೆದಿದೆ ನೋಡಿ..
ಯುಪಿಯ ಬಾಗ್ಪತ್ನ 45 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿ ಸುಮಾರು 5 ವರ್ಷದ ಬಳಿಕ ಪತ್ತೆಯಾಗಿದ್ದಾರೆ. ಇವರು ಕೊಲೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೀಗ ರಾಷ್ಟ್ರ ರಾಜಧಾನಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದರೆ. ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಬೇರೊಬ್ಬರು ಮಹಿಳೆ ಮತ್ತು ನಾಲ್ಕು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ ಎಂದು ಭಾನುವಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ಹಾಡಹಗಲೇ ಟಿಎಂಸಿ ಮುಖಂಡನ ಹತ್ಯೆ: ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಂದ ಕೊಲೆ
ಪೊಲೀಸರ ಪ್ರಕಾರ, ಬಾಗ್ಪತ್ನ ಸಿಂಘವಾಲಿ ಅಹಿರ್ ನಿವಾಸಿ ಯೋಗೇಂದ್ರ ಕುಮಾರ್ 2018 ರಲ್ಲಿ ನಾಪತ್ತೆಯಾಗಿದ್ದರು. ಜಗಳ ನಡೆದ ಬಳಿಕ ಇವರು ಹಾಗೂ ಅವರ ಇಬ್ಬರು ಸಹೋದರರ ವಿರುದ್ಧ ಗ್ರಾಮಸ್ಥ ವೇದ್ ಪ್ರಕಾಶ್ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ನಂತರ ಇವರು ಕಾಣೆಯಾಗಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಮಾಹಿತಿ ನೀಡಿದ ಸಿಂಘವಾಲಿ ಅಹಿರ್ನ ಎಸ್ಎಚ್ಒ ಜಿತೇಂದ್ರ ಸಿಂಗ್, ಯೋಗೇಂದ್ರ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 325 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು, ನಂತರ ಅವರು ನಾಪತ್ತೆಯಾಗಿದ್ದರು.
Bengaluru: ಕಾರಿನ ಜಿಪಿಎಸ್ನಿಂದ ಬಯಲಾಯ್ತು ಪತ್ನಿಯ ಅನೈತಿಕ ಸಂಬಂಧ..!
ಅಲ್ಲದೆ, ವೇದ್ ಪ್ರಕಾಶ್ ಅವರೇ ಅವರನ್ನು ಕೊಂದಿದ್ದಾರೆ ಎಂದು ಕುಟುಂಬ ಆರೋಪಿಸಿತ್ತು. ಮತ್ತು ಅವರ ವಿರುದ್ಧ ಪೊಲೀಸ್ ಪ್ರಕರಣವನ್ನು ಬಯಸಿದ್ದರು. ಕಳೆದ ವರ್ಷದ ಏಪ್ರಿಲ್ನಲ್ಲಿ, ನ್ಯಾಯಾಲಯದ ಆದೇಶದ ನಂತರ, ಪ್ರಕಾಶ್ ಮತ್ತು ಇತರ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 364 (ಅಪಹರಣ) ಮತ್ತು 302 (ಕೊಲೆ) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ ಎಂಟು ತಿಂಗಳ ತನಿಖೆಯ ನಂತರ ಪೊಲೀಸರಿಗೆ ಯೋಗೇಂದ್ರ ಕುಮಾರ್ ಸತ್ತಿದ್ದಾರೆ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳು ಕಂಡುಬಂದಿಲ್ಲ.
ಬಾಕಿ ಉಳಿದಿರುವ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಹೋಗಿದ್ದ ನಂತರ ಯೋಗೇಂದ್ರ ಕುಮಾರ್ ದೆಹಲಿಯಲ್ಲಿದ್ದಾರೆ ಎಂದು ಬಾಗ್ಪತ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅವರು ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಗುರುತನ್ನು ಹಾಗೇ ಇಟ್ಟುಕೊಂಡಿದ್ದಾರೆ. ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, 4 ಮಕ್ಕಳಿದ್ದಾರೆ ಎಂದೂ ಎಸ್ಎಚ್ಒ ಹೇಳಿದ್ದಾರೆ.
ಇನ್ನು, ಪೊಲೀಸರು ಇವರನ್ನು ಪ್ರಶ್ನೆ ಮಾಡಿದ್ದು, ತನಗೆ ಪ್ರಕಾಶ್ ರೊಂದಿಗೆ ವೈಷಮ್ಯ ಇತ್ತು. ಮತ್ತು ದೆಹಲಿಯ ರೋಹಿಣಿ ಪ್ರದೇಶದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇತ್ತು ಎಂದು ಹೇಳಿದ್ದಾಗಿಯೂ ಪೊಲೀಸರಿಗೆ ತಿಳಿಸಿದರು. 2018 ರಲ್ಲಿ, ಪ್ರಕರಣ ದಾಖಲಿಸಿದ ನಂತರ, ಮನೆ ತೊರೆದು ಆಕೆಯೊಂದಿಗೆ ವಾಸಿಸಲು ಪ್ರಾರಂಭಿಸಿದೆ. ಆದರೆ, ಕುಟುಂಬದವರು ತನ್ನನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಭಾವಿಸಿದ್ದಾರೆ ಎಂದೂ ಯೋಗೇಂದ್ರ ಕುಮಾರ್ ತಿಳಿಸಿದ್ದಾರೆ.
ಈ ಮಧ್ಯೆ, ಬಾಗ್ಪತ್ನಲ್ಲಿರುವ ಯೋಗೇಂದ್ರ ಕುಮಾರ್ ಪತ್ನಿ ರೀಟಾ, ಅವರು 2018 ರಿಂದ ನಮ್ಮನ್ನು ಭೇಟಿ ಮಾಡಿಲ್ಲ ಅಥವಾ ನಮ್ಮಲ್ಲಿ ಯಾರೊಂದಿಗೂ ಮಾತನಾಡಿಲ್ಲ. ಪೊಲೀಸರು ಯಾವಾಗಲೂ ಸತ್ಯವನ್ನು ತಿಳಿದುಕೊಳ್ಳಬೇಕೆಂದು ನಾವು ಬಯಸಿದ್ದೆವು ಎಂದೂ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ