
ಕೊರೋನಾ ವೈರಸ್ಗೆ ಲಸಿಕೆಗಳು ಲಭ್ಯವಾದಾಗ ಅದನ್ನು ಜನರಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಘೋಷಿಸಿದ್ದಾರೆ. ಔಷಧ ಸಿಗಲು ಆರಂಭಿಸಿದ ಕೂಡಲೇ ಕೇರಳದ ಜನರಿಗೆ ಉಚಿತವಾಗಿ ಲಸಿಕೆ ಒದಗಿಸಲಾಗುತ್ತದೆ ಎಂದಿದ್ದಾರೆ ಪಿಣರಾಯ್ ವಿಜಯನ್.
ಕೊರೋನಾ ವೈರಸ್ ವಾಕ್ಸಿನೇಷನ್ ಒಂದು ಮುಖ್ಯ ವಿಷಯ. ಇದು ಇಂದು ಬಹುತೇಕ ಜನರು ಯೋಚಿಸುತ್ತಿರುವ ಪ್ರಧಾನ ವಿಚಾರ. ಇದರಲ್ಲಿ ಸಂದೇಹವೇ ಇಲ್ಲ. ಕೇರಳದ ಜನರಿಗೆ ಕೊರೋನಾ ಔಷಧದ ಲಭ್ಯತೆ ಆಲೊಚಿಸಬೇಕಾದ ವಿಷಯ ಎಂದಿದ್ದಾರೆ.
ಟೆಸ್ಟ್ಗೆ ಒಳಗಾಗಲು ನಕಾರ, ಕೊರೋನಾದಿಂದ ರೈತರ ಹೋರಾಟ ದುರ್ಬಲ ಭೀತಿ!
ನಮಗೆ ಸಿಗುವ ಕೊರೋನಾ ಔಷಧವನ್ನು ಕೇರಳದ ಜನರಿಗೆ ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ಯಾವ ಹಣವನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಉಚಿತವಾಗಿ ಔಷಧ ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ ಎಂದಿದ್ದಾರೆ.
ತಮಿಳುನಾಡು, ಮಧ್ಯಪ್ರದೇಶ, ಅಸ್ಸಾಂ, ಪುದುಚೇರಿಯ ನಂತರ ಉಚಿತ ಕೊರೋನಾ ಔಷಧ ಘೋಷಿಸಿದ 4ನೇ ರಾಜ್ಯವಾಗಿದೆ ಕೇರಳ. ಡಿಸೆಂಬರ್ 12ರಂದು ಕೇರಳದಲ್ಲಿ 60029 ಕೊರೋನಾ ಕೇಸ್ಗಳಿದ್ದು, 437 ಕೊರೋನಾ ಆಸ್ಪತ್ರೆಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ