ರೈಲ್ವೆ ದುರಂತ ತನಿಖೆ ಸಿಬಿ​ಐ​ಗೆ ವಹಿಸಿದ್ದಕ್ಕೆ ಮಲ್ಲಿಕಾರ್ಜುನ್ ಖರ್ಗೆ ಆಕ್ಷೇ​ಪ

Published : Jun 06, 2023, 08:18 AM IST
 ರೈಲ್ವೆ ದುರಂತ ತನಿಖೆ ಸಿಬಿ​ಐ​ಗೆ ವಹಿಸಿದ್ದಕ್ಕೆ ಮಲ್ಲಿಕಾರ್ಜುನ್ ಖರ್ಗೆ ಆಕ್ಷೇ​ಪ

ಸಾರಾಂಶ

: 275 ಜನರನ್ನು ಬಲಿಪಡೆದ ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ಅಪಘಾತದ ತನಿಖೆಯನ್ನು ರೈಲ್ವೆ ಇಲಾಖೆಯು ಸಿಬಿಐಗೆ ನೀಡಿದ್ದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.

ನವದೆಹಲಿ: 275 ಜನರನ್ನು ಬಲಿಪಡೆದ ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ಅಪಘಾತದ ತನಿಖೆಯನ್ನು ರೈಲ್ವೆ ಇಲಾಖೆಯು ಸಿಬಿಐಗೆ ನೀಡಿದ್ದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಖರ್ಗೆ, ತನಿಖಾ ಸಂಸ್ಥೆಗಳು ಇರುವುದು ಅಪರಾಧವನ್ನು ತನಿಖೆ ಮಾಡಲು ಹೊರತು ರೈಲು ಅಪಘಾತಗಳನ್ನು ತನಿಖೆ ಮಾಡಲು ಅಲ್ಲ. ತಾಂತ್ರಿಕ ದೋಷ, ಸಾಂಸ್ಥಿಕ ವೈಫಲ್ಯ ಮತ್ತು ರಾಜಕೀಯ ವೈಫಲ್ಯಗಳನ್ನು (Political Failure) ಸಿಬಿಐ ತನಿಖೆ (CBI Investigation) ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ತಮ್ಮ ಸುದೀರ್ಘ ನಾಲ್ಕು ಪುಟಗಳ ಪತ್ರದಲ್ಲಿ ರೈಲು ದುರಂತವನ್ನು ಭಾರತೀಯ ಇತಿಹಾಸಲ್ಲೇ ಅತ್ಯಂತ ಕೆಟ್ಟ ಘಟನೆ ಎಂದು ಬೇಸರಿಸಿರುವ ಖರ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwini vaishnav) ಅವರ ಎಲ್ಲಾ ಖಾಲಿ ಸುರಕ್ಷತಾ ಕ್ರಮಗಳು ಬಯ​ಲಾ​ಗಿ​ವೆ. ಹದಗೆಟ್ಟಿರುವ ರೈಲ್ವೆ ಸುರಕ್ಷತೆ ಬಗ್ಗೆ ಸಾಮಾನ್ಯ ಪ್ರಯಾಣಿಕರಲ್ಲಿ ಗಂಭೀರ ಕಳವಳ ವ್ಯಕ್ತವಾಗಿದೆ. ಹೀಗಾಗಿ ಸರ್ಕಾರವು ಈ ಭೀಕರ ಅಪಘಾತದ ನಿಜವಾದ ಕಾರಣಗಳನ್ನು ಕಂಡು ಹಿಡಿದು ಬೆಳಕಿಗೆ ತರಬೇಕು. ಇದು ಸರ್ಕಾರದ ಕರ್ತವ್ಯವಾಗಿದೆ ಎಂದು ಆಗ್ರಹಿಸಿದ್ದಾರೆ.

ಅಲ್ಲದೇ ರೈಲ್ವೆಯನ್ನು ತಳಮಟ್ಟದಿಂದ ಬಲಪಡಿಸುವತ್ತ ಗಮನ ಹರಿಸುವ ಬದಲು ಸುದ್ದಿಯಲ್ಲಿರಲು ಕೇವಲ ‘ಟಚ್‌ ಅಪ್‌’ (ತೋರ್ಪಡಿಕೆಗೆ ಮೇಲ್ನೋಟದ ಕೆಲಸ) ಮಾಡಲಾಗುತ್ತಿದೆ. ಸರ್ಕಾರವು ರೈಲ್ವೆಗೆ ‘ಮಲತಾಯಿ ಧೋರಣೆ’ ಮಾಡುತ್ತಿದೆ. ದೋಷಪೂರಿತ ನಿರ್ಧಾರಗಳಿಂದ ರೈಲ್ವೆ ಪ್ರಯಾಣವನ್ನು ಅಸುರಕ್ಷಿತವನ್ನಾಗಿ ಮಾಡಲಾಗಿದೆ’ ಎಂದು ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!