
ನವದೆಹಲಿ(ಆ.13):: ಕನಿಷ್ಠ ಪ್ರಮಾಣದಲ್ಲಾದರೂ ಸ್ಥಳೀಯ ಭಾಷೆಯ ಅರಿವಿರುವ ಸಿಬ್ಬಂದಿಯನ್ನೇ ಮುಂಬರುವ ದಿನಗಳಲ್ಲಿ ವಿಮಾನ ನಿಲ್ದಾಣದ ತಪಾಸಣಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಹೇಳಿದೆ. ಹಿಂದಿಯಲ್ಲಿ ಮಾತನಾಡಲು ಬರುವುದಿಲ್ಲ ಎಂದಿದ್ದ ಡಿಎಂಕೆ ಸಂಸದೆ ಕನಿಮೋಳಿ ಅವರನ್ನು ಸಿಐಎಸ್ಎಫ್ ಸಿಬ್ಬಂದಿಯೊಬ್ಬರು ‘ನೀವು ಭಾರತೀಯರಾ?’ ಎಂದು ಪ್ರಶ್ನಿಸಿದ ಘಟನೆ ಇತ್ತೀಚೆಗೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸಿಐಎಸ್ಎಫ್ ಈ ಹೇಳಿಕೆ ನೀಡಿದೆ.
ಹಿಂದಿ ಬರಲ್ಲ ಎಂದ ಸಂಸದೆಗೆ ನೀವು ಭಾರತೀಯರಾ? ಎಂದು ಪ್ರಶ್ನಿಸಿದ ಅಧಿಕಾರಿ!
ಪರಿಶೀಲನೆ, ತಪಾಸಣೆ ಮೊದಲಾದ ಕೆಲಸಗಳಿಗೆ ತಾಂತ್ರಿಕ ಪರಿಣತಿಯೂ ಅನಿವಾರ್ಯವಾದ ಕಾರಣ, ಇಂಥ ಹುದ್ದೆಗಳಿಗೆ ಶೇ.100ರಷ್ಟುಸ್ಥಳೀಯರ ನೇಮಕ ಸಾಧ್ಯವಾಗದು. ಆದರೂ ಸ್ಥಳೀಯ ಭಾಷೆಯ ಕನಿಷ್ಠ ಮಾಹಿತಿ ಹೊಂದಿರುವ ವ್ಯಕ್ತಿಗಳನ್ನೇ ಇಂಥ ಹುದ್ದೆಗೆ ನಿಯೋಜಿಸಲು ಯತ್ನಿಸಲಾಗುವುದು ಎಂದು ಸಿಐಎಸ್ಎಫ್ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹೊಸ ಶಿಕ್ಷಣ ನೀತಿ ನವಭಾರತಕ್ಕೆ ಭವ್ಯ ಮುನ್ನುಡಿ
ಅಲ್ಲದೆ ಕನಿಮೋಳಿ ಅವರು ಹೇಳುತ್ತಿರುವಂತೆ ಅಧಿಕಾರಿ ಮಾತನಾಡಿಲ್ಲ. ಹಿಂದಿ ಕೂಡ ಭಾರತೀಯ ಅಥವಾ ಅಧಿಕೃತ ಭಾಷೆ ಎಂದಷ್ಟೇ ತಿಳಿಸಿದ್ದಾರೆ. ಇದನ್ನು ವಿಚಾರಣೆ ವೇಳೆ ಮಹಿಳಾ ಅಧಿಕಾರಿ ಒಪ್ಪಿಕೊಂಡಿದ್ದಾರೆ. ಅದೂ ಅಲ್ಲದೆ ಮಹಿಳಾ ಅಧಿಕಾರಿ ದಕ್ಷಿಣ ಭಾರತದ ರಾಜ್ಯವೊಂದಕ್ಕೆ ಸೇರಿದವರಾಗಿದ್ದಾರೆ ಎಂದು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ