ಭ್ರಷ್ಟ, ಅದಕ್ಷ ಸರ್ಕಾರಿ ನೌಕರರಿಗೆ ಮೋದಿ ಶಾಕ್: ಕೇಂದ್ರದ ಆದೇಶಕ್ಕೆ ಸಿಬ್ಬಂದಿ ತತ್ತರ!

Published : Aug 31, 2020, 08:48 AM ISTUpdated : Aug 31, 2020, 09:01 AM IST
ಭ್ರಷ್ಟ, ಅದಕ್ಷ ಸರ್ಕಾರಿ ನೌಕರರಿಗೆ ಮೋದಿ ಶಾಕ್: ಕೇಂದ್ರದ ಆದೇಶಕ್ಕೆ ಸಿಬ್ಬಂದಿ ತತ್ತರ!

ಸಾರಾಂಶ

ಅದಕ್ಷ ಕೇಂದ್ರ ಸರ್ಕಾರಿ ನೌಕರರ ವಜಾಕ್ಕೆ ನಿರ್ಧಾರ| ಪಟ್ಟಿ ತಯಾರಿಸಲು ಸೂಚನೆ| ಎಲ್ಲಾ ಇಲಾಖೆಗಳಿಗೆ ಮಾರ್ಗದರ್ಶಿ ಸೂತ್ರ ಕಳಿಸಿದ ಸಿಬ್ಬಂದಿ ಸಚಿವಾಲಯ| 30 ವರ್ಷ ಸೇವೆ ಸಲ್ಲಿಸಿದ, 50/55 ವರ್ಷ ದಾಟಿದ ನೌಕರರಿಗಷ್ಟೇ ಅನ್ವಯ| ಇದು ಒಂದು ಸಲದ ಕ್ರಮವಲ್ಲ, ಇನ್ನುಮುಂದೆ ನಿರಂತರ ನಡೆಯುವ ಪ್ರಕ್ರಿಯೆ

ನವದೆಹಲಿ(ಆ.31): ಭ್ರಷ್ಟ ಹಾಗೂ ಅದಕ್ಷ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅಂತಹ ನೌಕರರ ಪಟ್ಟಿತಯಾರಿಸುವಂತೆ ಎಲ್ಲಾ ಇಲಾಖೆಗಳಿಗೆ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.

ಜಿಎಸ್‌ಟಿ ವಿಚಾರ, ಕೇಂದ್ರಕ್ಕೆ ಶಾಕ್ ನೀಡಲು ಮುಂದಾಗಿವೆ ಈ ರಾಜ್ಯಗಳು!

ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಭ್ರಷ್ಟಹಾಗೂ ಅದಕ್ಷ ನೌಕರರನ್ನು ಶಾಶ್ವತವಾಗಿ ನಿವೃತ್ತಿಗೊಳಿಸಲು ಅಂತಹವರ ಪಟ್ಟಿಯನ್ನು ಎಲ್ಲಾ ಇಲಾಖೆಗಳು ಸಿದ್ಧಪಡಿಸಬೇಕು. ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮ 1972ರಡಿ ಮೂಲಭೂತ ನಿಯಮ (ಎಫ್‌ಆರ್‌) 56(ಜೆ) ಹಾಗೂ 56(ಐ) ಮತ್ತು ನಿಯಮ 48(ಐ) ಅಡಿ ಸರ್ಕಾರಿ ನೌಕರರ ಕಾರ್ಯದಕ್ಷತೆಯನ್ನು ಪರಾಮರ್ಶಿಸಬೇಕು. ನೌಕರರು ಭ್ರಷ್ಟರು ಅಥವಾ ಅದಕ್ಷರು ಎಂದು ಕಂಡುಬಂದರೆ ಮೂರು ತಿಂಗಳ ಮೊದಲೇ ನೋಟಿಸ್‌ ನೀಡಿ ಅಥವಾ ಒಮ್ಮೆಲೇ ಮೂರು ತಿಂಗಳ ವೇತನ ನೀಡಿ ಅವರನ್ನು ನಿವೃತ್ತಿಗೊಳಿಸಲು ಸಂಬಂಧಿಸಿದ ಮೇಲಧಿಕಾರಿಗೆ ಅಧಿಕಾರವಿರುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

50/55 ವರ್ಷ ದಾಟಿದ ಅಥವಾ ಸೇವೆಯಲ್ಲಿ 30 ವರ್ಷಗಳನ್ನು ಪೂರ್ಣಗೊಳಿಸಿದ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಇದು ಅನ್ವಯಿಸುತ್ತದೆ. ವಿಶೇಷವೆಂದರೆ, ಇದು ಒಂದು ಸಲದ ಕ್ರಮವಲ್ಲ. ನೌಕರರ ಕಾರ್ಯದಕ್ಷತೆ ಪಟ್ಟಿಯನ್ನು ನಿರಂತರವಾಗಿ ಪರಿಷ್ಕರಿಸುತ್ತಿರಬೇಕು. ಯಾರ ಪ್ರಾಮಾಣಿಕತೆಯು ಅನುಮಾನಾಸ್ಪದವಾಗಿದೆಯೋ ಅಂತಹವರನ್ನು ಅಗತ್ಯ ಕಂಡುಬಂದಲ್ಲಿ ಕಾಲಕಾಲಕ್ಕೆ ನಿವೃತ್ತಿಗೊಳಿಸುತ್ತಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪೇಟಿಎಂ ಮಾಲ್‌ ಡೇಟಾ ಹ್ಯಾಕ್!

ಇನ್ನು, ಈ ಕಡ್ಡಾಯ ನಿವೃತ್ತಿಯು ಭ್ರಷ್ಟಅಥವಾ ಅದಕ್ಷ ನೌಕರರಿಗೆ ವಿಧಿಸುವ ಶಿಕ್ಷೆಯಲ್ಲ. ಕೇಂದ್ರ ನಾಗರಿಕ ಸೇವೆಗಳ 1965ರ ನಿಯಮದಡಿ ಹೇಳಲಾದ ‘ಕಡ್ಡಾಯ ನಿವೃತ್ತಿ’ ಇದಾಗಿರುವುದಿಲ್ಲ. ಜೊತೆಗೆ, ವಯೋನಿವೃತ್ತಿಗೆ ಒಂದು ವರ್ಷ ಮಾತ್ರ ಬಾಕಿಯಿರುವ ನೌಕರರ ವಿರುದ್ಧ ಈ ಕ್ರಮ ಕೈಗೊಳ್ಳುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?