ಮಹದಾಯಿ ಐತೀರ್ಪು ಜಾರಿಗೆ ಕೇಂದ್ರ ಪ್ರಾಧಿಕಾರ:‘ಪ್ರವಾಹ್‌’ ಪ್ರಾಧಿಕಾರ ರಚನೆ

By Kannadaprabha NewsFirst Published Feb 23, 2023, 6:38 AM IST
Highlights

ಮಹದಾಯಿ ನದಿ ನೀರು ವಿವಾ​ದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಹ​ತ್ವದ ನಿರ್ಧಾರ ತೆಗೆ​ದು​ಕೊಂಡಿದೆ. ಮಹ​ದಾಯಿ ನದಿ ನೀರು ನಿರ್ವಹಣೆ ಮತ್ತು ಯೋಜನೆ ಕುರಿತು ನಿಗಾ ವಹಿಸುವ ಉದ್ದೇ​ಶ​ದಿಂದ ಹೊಸ ಪ್ರಾಧಿಕಾರ ‘ಪ್ರವಾ​ಹ್‌’ ರಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
 

ನವದೆಹಲಿ (ಫೆ.23): ಮಹದಾಯಿ ನದಿ ನೀರು ವಿವಾ​ದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಹ​ತ್ವದ ನಿರ್ಧಾರ ತೆಗೆ​ದು​ಕೊಂಡಿದೆ. ಮಹ​ದಾಯಿ ನದಿ ನೀರು ನಿರ್ವಹಣೆ ಮತ್ತು ಯೋಜನೆ ಕುರಿತು ನಿಗಾ ವಹಿಸುವ ಉದ್ದೇ​ಶ​ದಿಂದ ಹೊಸ ಪ್ರಾಧಿಕಾರ ‘ಪ್ರವಾ​ಹ್‌’ ರಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾ​ರದ ಈ ನಿರ್ಧಾ​ರ​ವ​ನ್ನು ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ, ಕೇಂದ್ರ ಸಂಸ​ದೀಯ ಸಚಿವ ಪ್ರಹ್ಲಾದ್‌ ಜೋಶಿ ಮತ್ತಿ​ತ​ರರು ಸ್ವಾಗ​ತಿ​ಸಿ​ದ್ದಾ​ರೆ. ಇದ​ರಿಂದ ಕರ್ನಾ​ಟ​ಕದ ಪಾಲಿನ ನೀರು ಬಳಸುವ ಯೋಜನೆ ಅನು​ಷ್ಠಾ​ನಕ್ಕೆ ಮತ್ತಷ್ಟುಅನು​ಕೂ​ಲ​ವಾ​ಗ​ಲಿದೆ ಎಂದು ಅಭಿ​ಪ್ರಾ​ಯ​ಪ​ಟ್ಟಿ​ದ್ದಾ​ರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ‘ಮಹದಾಯಿ ಪ್ರವಾಹ್‌’ Mahadayi Prawah’ ( Progressiver River Auuthority For Welfare and Harmony) ಪ್ರಾಧಿಕಾರ ರಚನೆಗೆ ಒಪ್ಪಿಗೆ ನೀಡಿದೆ. ಈ ಪ್ರಾಧಿಕಾರ ಮಹದಾಯಿ ನದಿ ನೀರು ಯೋಜನೆ ಅನುಷ್ಠಾನ, ಮಹದಾಯಿ ನೀರಿನ ಹಂಚಿಕೆ ಕುರಿತು ನ್ಯಾಯಮಂಡಳಿಯ ನಿರ್ಣಯ ಅನುಸರಣೆ ಮತ್ತು ಅನುಷ್ಠಾನಕ್ಕೆ ಈ ಪ್ರಾಧಿಕಾರದಿಂದ ಅನುಕೂಲವಾಗಲಿದೆ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಮೂರು ರಾಜ್ಯಗಳು ಕೂಡ ಪ್ರಾಧಿಕಾರದ ಸದಸ್ಯರಾಗಿರುತ್ತಾರೆ.

Latest Videos

ಮಹ​ದಾ​ಯಿ: ತಡೆ​ಯಾ​ಜ್ಞೆ ಕೋರಿ ಗೋವಾ ಸಲ್ಲಿ​ಸಿದ್ದ ಅರ್ಜಿ ವಜಾ

ಮಹದಾಯಿ ನ್ಯಾಯಾಧಿಕರಣ ತನ್ನ ತೀರ್ಪಿನಲ್ಲಿ ಪ್ರಾಧಿಕಾರ ರಚನೆ ಬಗ್ಗೆ ಪ್ರಸ್ತಾಪಿಸಿತ್ತು. ಅದರಂತೆ ಕೇಂದ್ರ ಸಂಪುಟ ಈ ಪ್ರಾಧಿ​ಕಾರ ರಚ​ನೆಗೆ ಒಪ್ಪಿಗೆ ನೀಡಿದೆ. ಮೂರು ರಾಜ್ಯಗಳಿಂದ ಮೂವರು ಸದಸ್ಯರ ಜೊತೆ ಮೂರು ತಜ್ಞರು ಹಾಗೂ ಒಬ್ಬ ಅಧ್ಯಕ್ಷರು ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಅಧ್ಯಕ್ಷರು ಹಾಗೂ ತಜ್ಞರನ್ನು ನೇಮಿಸಲಿದೆ.

ಮಹ​ದಾಯಿ ನದಿ ನೀರು ವಿವಾದ ನ್ಯಾಯ​ಮಂಡ​ಳಿಯು 2018ರಲ್ಲಿ ಕರ್ನಾ​ಟ​ಕಕ್ಕೆ 13.42 ಟಿಎಂಸಿ ನೀರು ಹಂಚಿ​ಕೆ​ಯಾ​ಗಿತ್ತು. ಇದ​ರಲ್ಲಿ 3.9 ಟಿಎಂಸಿ​ ನೀರನ್ನು ಕುಡಿ​ಯುವ ನೀರಿಗಾಗಿ ಬಳ​ಸುವ ಉದ್ದೇ​ಶ​ದಿಂದ ಕಳ​ಸಾ-ಬಂಡೂರಿ ನಾಲಾ​ಗಳ ಮೂಲಕ ಹುಬ್ಬಳ್ಳಿ, ಧಾರ​ವಾಡ ಹಾಗೂ ಬೆಳ​ಗಾವಿಯ ಕೆಲ ಪ್ರದೇ​ಶ​ಗ​ಳಿಗೆ ಪೂರೈ​ಸಲು ಕರ್ನಾ​ಟಕ ಸರ್ಕಾರ ಉದ್ದೇ​ಶಿ​ಸಿ​ತ್ತು. ಇತ್ತೀ​ಚೆ​ಗಷ್ಟೇ ಕಳ​ಸಾ-ಬಂಡೂರಿ ನಾಲಾ ಯೋಜ​ನೆಯ ಪರಿ​ಷ್ಕೃತ ಡಿಪಿ​ಆ​ರ್‌ಗೆ ಕೇಂದ್ರ ಸರ್ಕಾರ ಅನು​ಮತಿ ನೀಡಿದ್ದು, ಪರಿ​ಸರ ಅನು​ಮತಿ ಸಿಗು​ವು​ದೊಂದೇ ಬಾಕಿ ಇದೆ. ಪರಿ​ಸರ ಅನು​ಮ​ತಿ​ ಸಿಕ್ಕರೆ ಕರ್ನಾ​ಟ​ಕಕ್ಕೆ ನಾಲಾ ಯೋಜನೆ ಆರಂಭಿ​ಸಲು ಅನು​ಕೂ​ಲ​ವಾ​ಗ​ಲಿ​ದೆ.

ಮೋದಿಗೆ ಧನ್ಯವಾದ: ಕರ್ನಾ​ಟಕ, ಮಹಾ​ರಾಷ್ಟ್ರ ಹಾಗೂ ಗೋವಾ ರಾಜ್ಯಗಳ ನಡುವೆ ನೀರು ಹಂಚಿಕೆ ಮಾಡುವ ನಿಟ್ಟಿ​ನಲ್ಲಿ ಈ ಪ್ರಾಧಿ​ಕಾ​ರ​ದಿಂದ ಅನು​ಕೂ​ಲ​ವಾ​ಗ​ಲಿ​ದೆ. ಪ್ರಾಧಿಕಾರ ಸ್ಥಾಪನೆಗೆ ಅನುಮತಿ ನೀಡಿದ ಪ್ರಧಾನಿ ಮೋದಿ ಮತ್ತು ಕೇಂದ್ರ ಜಲಶಕ್ತಿ ಮಂತ್ರಿ ಗಜೇಂದ್ರ ಸಿಂಗ್‌ ಶೇಖಾ​ವ​ತ್‌ ಅವರಿಗೆ ಧನ್ಯವಾದಗಳು. ಇದೊಂದು ಸ್ವಾಗತಾರ್ಹ ಕ್ರಮ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿ​ದ್ದಾ​ರೆ.

ಏನು ಪ್ರಯೋಜನ?
- 2018ರಲ್ಲಿ ಕರ್ನಾಟಕಕ್ಕೆ ಮಹದಾಯಿ ನದಿಯಲ್ಲಿ 13.4 ಟಿಎಂಸಿ ನೀರು ಹಂಚಿಕೆ ಮಾಡಿದ್ದ ನ್ಯಾಯಾಧಿಕರಣ
- ಪ್ರಾಧಿಕಾರ ರಚಿಸುವಂತೆ ಐತೀರ್ಪಿನಲ್ಲೇ ಸೂಚನೆ ನೀಡಿದ್ದ ಟ್ರಿಬ್ಯುನಲ್‌
- ಅದರಂತೆ ಈಗ ಕೇಂದ್ರದಿಂದ ಪ್ರಾಧಿಕಾರ ರಚನೆ: ಯೋಜನೆ ಜಾರಿಯಲ್ಲಿ ಮಹತ್ವದ ಪ್ರಗತಿ
- ಯಾವುದೇ ಹೆಜ್ಜೆ ಮುಂದಿಡಬಾರದು ಎಂಬ ಗೋವಾದ ಮನವಿಗೆ ಕೇಂದ್ರದಲ್ಲಿ ದೊಡ್ಡ ಹಿನ್ನಡೆ

ಮಹದಾಯಿ ಯೋಜನೆ ಹಂತ ಹಂತವಾಗಿ ಅನುಷ್ಠಾನ: ಸಿಎಂ ಬೊಮ್ಮಾಯಿ

ಮಹದಾಯಿ ಪ್ರವಾಹ್‌ ರಚನೆಯ ತೀರ್ಮಾನ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನ್ಯಾಯಾಧಿಕರಣದ ತೀರ್ಪುಗಳ ಜಾರಿಗೆ ಇದು ಮಹತ್ವದ ಹೆಜ್ಜೆಯಾಗಿದೆ. ಕರ್ನಾಟಕದ ಯೋಜನೆ ಜಾರಿಗೂ ಅನುಕೂಲವಾಗಲಿದೆ. ಪ್ರಾಧಿಕಾರದ ರಚನೆಯು ಮುಂದಿನ ಹೆಜ್ಜೆ ಇಡಲು ನಮಗೆ ಸಹಕಾರಿಯಾಗಲಿದೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

click me!