ಮಹದಾಯಿ ಐತೀರ್ಪು ಜಾರಿಗೆ ಕೇಂದ್ರ ಪ್ರಾಧಿಕಾರ:‘ಪ್ರವಾಹ್‌’ ಪ್ರಾಧಿಕಾರ ರಚನೆ

Published : Feb 23, 2023, 06:38 AM IST
ಮಹದಾಯಿ ಐತೀರ್ಪು ಜಾರಿಗೆ ಕೇಂದ್ರ ಪ್ರಾಧಿಕಾರ:‘ಪ್ರವಾಹ್‌’ ಪ್ರಾಧಿಕಾರ ರಚನೆ

ಸಾರಾಂಶ

ಮಹದಾಯಿ ನದಿ ನೀರು ವಿವಾ​ದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಹ​ತ್ವದ ನಿರ್ಧಾರ ತೆಗೆ​ದು​ಕೊಂಡಿದೆ. ಮಹ​ದಾಯಿ ನದಿ ನೀರು ನಿರ್ವಹಣೆ ಮತ್ತು ಯೋಜನೆ ಕುರಿತು ನಿಗಾ ವಹಿಸುವ ಉದ್ದೇ​ಶ​ದಿಂದ ಹೊಸ ಪ್ರಾಧಿಕಾರ ‘ಪ್ರವಾ​ಹ್‌’ ರಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.  

ನವದೆಹಲಿ (ಫೆ.23): ಮಹದಾಯಿ ನದಿ ನೀರು ವಿವಾ​ದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಹ​ತ್ವದ ನಿರ್ಧಾರ ತೆಗೆ​ದು​ಕೊಂಡಿದೆ. ಮಹ​ದಾಯಿ ನದಿ ನೀರು ನಿರ್ವಹಣೆ ಮತ್ತು ಯೋಜನೆ ಕುರಿತು ನಿಗಾ ವಹಿಸುವ ಉದ್ದೇ​ಶ​ದಿಂದ ಹೊಸ ಪ್ರಾಧಿಕಾರ ‘ಪ್ರವಾ​ಹ್‌’ ರಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾ​ರದ ಈ ನಿರ್ಧಾ​ರ​ವ​ನ್ನು ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ, ಕೇಂದ್ರ ಸಂಸ​ದೀಯ ಸಚಿವ ಪ್ರಹ್ಲಾದ್‌ ಜೋಶಿ ಮತ್ತಿ​ತ​ರರು ಸ್ವಾಗ​ತಿ​ಸಿ​ದ್ದಾ​ರೆ. ಇದ​ರಿಂದ ಕರ್ನಾ​ಟ​ಕದ ಪಾಲಿನ ನೀರು ಬಳಸುವ ಯೋಜನೆ ಅನು​ಷ್ಠಾ​ನಕ್ಕೆ ಮತ್ತಷ್ಟುಅನು​ಕೂ​ಲ​ವಾ​ಗ​ಲಿದೆ ಎಂದು ಅಭಿ​ಪ್ರಾ​ಯ​ಪ​ಟ್ಟಿ​ದ್ದಾ​ರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ‘ಮಹದಾಯಿ ಪ್ರವಾಹ್‌’ Mahadayi Prawah’ ( Progressiver River Auuthority For Welfare and Harmony) ಪ್ರಾಧಿಕಾರ ರಚನೆಗೆ ಒಪ್ಪಿಗೆ ನೀಡಿದೆ. ಈ ಪ್ರಾಧಿಕಾರ ಮಹದಾಯಿ ನದಿ ನೀರು ಯೋಜನೆ ಅನುಷ್ಠಾನ, ಮಹದಾಯಿ ನೀರಿನ ಹಂಚಿಕೆ ಕುರಿತು ನ್ಯಾಯಮಂಡಳಿಯ ನಿರ್ಣಯ ಅನುಸರಣೆ ಮತ್ತು ಅನುಷ್ಠಾನಕ್ಕೆ ಈ ಪ್ರಾಧಿಕಾರದಿಂದ ಅನುಕೂಲವಾಗಲಿದೆ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಮೂರು ರಾಜ್ಯಗಳು ಕೂಡ ಪ್ರಾಧಿಕಾರದ ಸದಸ್ಯರಾಗಿರುತ್ತಾರೆ.

ಮಹ​ದಾ​ಯಿ: ತಡೆ​ಯಾ​ಜ್ಞೆ ಕೋರಿ ಗೋವಾ ಸಲ್ಲಿ​ಸಿದ್ದ ಅರ್ಜಿ ವಜಾ

ಮಹದಾಯಿ ನ್ಯಾಯಾಧಿಕರಣ ತನ್ನ ತೀರ್ಪಿನಲ್ಲಿ ಪ್ರಾಧಿಕಾರ ರಚನೆ ಬಗ್ಗೆ ಪ್ರಸ್ತಾಪಿಸಿತ್ತು. ಅದರಂತೆ ಕೇಂದ್ರ ಸಂಪುಟ ಈ ಪ್ರಾಧಿ​ಕಾರ ರಚ​ನೆಗೆ ಒಪ್ಪಿಗೆ ನೀಡಿದೆ. ಮೂರು ರಾಜ್ಯಗಳಿಂದ ಮೂವರು ಸದಸ್ಯರ ಜೊತೆ ಮೂರು ತಜ್ಞರು ಹಾಗೂ ಒಬ್ಬ ಅಧ್ಯಕ್ಷರು ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಅಧ್ಯಕ್ಷರು ಹಾಗೂ ತಜ್ಞರನ್ನು ನೇಮಿಸಲಿದೆ.

ಮಹ​ದಾಯಿ ನದಿ ನೀರು ವಿವಾದ ನ್ಯಾಯ​ಮಂಡ​ಳಿಯು 2018ರಲ್ಲಿ ಕರ್ನಾ​ಟ​ಕಕ್ಕೆ 13.42 ಟಿಎಂಸಿ ನೀರು ಹಂಚಿ​ಕೆ​ಯಾ​ಗಿತ್ತು. ಇದ​ರಲ್ಲಿ 3.9 ಟಿಎಂಸಿ​ ನೀರನ್ನು ಕುಡಿ​ಯುವ ನೀರಿಗಾಗಿ ಬಳ​ಸುವ ಉದ್ದೇ​ಶ​ದಿಂದ ಕಳ​ಸಾ-ಬಂಡೂರಿ ನಾಲಾ​ಗಳ ಮೂಲಕ ಹುಬ್ಬಳ್ಳಿ, ಧಾರ​ವಾಡ ಹಾಗೂ ಬೆಳ​ಗಾವಿಯ ಕೆಲ ಪ್ರದೇ​ಶ​ಗ​ಳಿಗೆ ಪೂರೈ​ಸಲು ಕರ್ನಾ​ಟಕ ಸರ್ಕಾರ ಉದ್ದೇ​ಶಿ​ಸಿ​ತ್ತು. ಇತ್ತೀ​ಚೆ​ಗಷ್ಟೇ ಕಳ​ಸಾ-ಬಂಡೂರಿ ನಾಲಾ ಯೋಜ​ನೆಯ ಪರಿ​ಷ್ಕೃತ ಡಿಪಿ​ಆ​ರ್‌ಗೆ ಕೇಂದ್ರ ಸರ್ಕಾರ ಅನು​ಮತಿ ನೀಡಿದ್ದು, ಪರಿ​ಸರ ಅನು​ಮತಿ ಸಿಗು​ವು​ದೊಂದೇ ಬಾಕಿ ಇದೆ. ಪರಿ​ಸರ ಅನು​ಮ​ತಿ​ ಸಿಕ್ಕರೆ ಕರ್ನಾ​ಟ​ಕಕ್ಕೆ ನಾಲಾ ಯೋಜನೆ ಆರಂಭಿ​ಸಲು ಅನು​ಕೂ​ಲ​ವಾ​ಗ​ಲಿ​ದೆ.

ಮೋದಿಗೆ ಧನ್ಯವಾದ: ಕರ್ನಾ​ಟಕ, ಮಹಾ​ರಾಷ್ಟ್ರ ಹಾಗೂ ಗೋವಾ ರಾಜ್ಯಗಳ ನಡುವೆ ನೀರು ಹಂಚಿಕೆ ಮಾಡುವ ನಿಟ್ಟಿ​ನಲ್ಲಿ ಈ ಪ್ರಾಧಿ​ಕಾ​ರ​ದಿಂದ ಅನು​ಕೂ​ಲ​ವಾ​ಗ​ಲಿ​ದೆ. ಪ್ರಾಧಿಕಾರ ಸ್ಥಾಪನೆಗೆ ಅನುಮತಿ ನೀಡಿದ ಪ್ರಧಾನಿ ಮೋದಿ ಮತ್ತು ಕೇಂದ್ರ ಜಲಶಕ್ತಿ ಮಂತ್ರಿ ಗಜೇಂದ್ರ ಸಿಂಗ್‌ ಶೇಖಾ​ವ​ತ್‌ ಅವರಿಗೆ ಧನ್ಯವಾದಗಳು. ಇದೊಂದು ಸ್ವಾಗತಾರ್ಹ ಕ್ರಮ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿ​ದ್ದಾ​ರೆ.

ಏನು ಪ್ರಯೋಜನ?
- 2018ರಲ್ಲಿ ಕರ್ನಾಟಕಕ್ಕೆ ಮಹದಾಯಿ ನದಿಯಲ್ಲಿ 13.4 ಟಿಎಂಸಿ ನೀರು ಹಂಚಿಕೆ ಮಾಡಿದ್ದ ನ್ಯಾಯಾಧಿಕರಣ
- ಪ್ರಾಧಿಕಾರ ರಚಿಸುವಂತೆ ಐತೀರ್ಪಿನಲ್ಲೇ ಸೂಚನೆ ನೀಡಿದ್ದ ಟ್ರಿಬ್ಯುನಲ್‌
- ಅದರಂತೆ ಈಗ ಕೇಂದ್ರದಿಂದ ಪ್ರಾಧಿಕಾರ ರಚನೆ: ಯೋಜನೆ ಜಾರಿಯಲ್ಲಿ ಮಹತ್ವದ ಪ್ರಗತಿ
- ಯಾವುದೇ ಹೆಜ್ಜೆ ಮುಂದಿಡಬಾರದು ಎಂಬ ಗೋವಾದ ಮನವಿಗೆ ಕೇಂದ್ರದಲ್ಲಿ ದೊಡ್ಡ ಹಿನ್ನಡೆ

ಮಹದಾಯಿ ಯೋಜನೆ ಹಂತ ಹಂತವಾಗಿ ಅನುಷ್ಠಾನ: ಸಿಎಂ ಬೊಮ್ಮಾಯಿ

ಮಹದಾಯಿ ಪ್ರವಾಹ್‌ ರಚನೆಯ ತೀರ್ಮಾನ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನ್ಯಾಯಾಧಿಕರಣದ ತೀರ್ಪುಗಳ ಜಾರಿಗೆ ಇದು ಮಹತ್ವದ ಹೆಜ್ಜೆಯಾಗಿದೆ. ಕರ್ನಾಟಕದ ಯೋಜನೆ ಜಾರಿಗೂ ಅನುಕೂಲವಾಗಲಿದೆ. ಪ್ರಾಧಿಕಾರದ ರಚನೆಯು ಮುಂದಿನ ಹೆಜ್ಜೆ ಇಡಲು ನಮಗೆ ಸಹಕಾರಿಯಾಗಲಿದೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!