ಪುಷ್ಕರ್ ಜಾನುವಾರು ಮೇಳದಲ್ಲಿ 23 ಕೋಟಿಯ ಎಮ್ಮೆ, 15 ಕೋಟಿ ಮೌಲ್ಯದ ಕುದುರೆ

Published : Oct 29, 2025, 07:45 AM IST
Pushkar Mela

ಸಾರಾಂಶ

ರಾಜಸ್ಥಾನದ ವಾರ್ಷಿಕ ಪುಷ್ಕರ್ ಜಾನುವಾರು ಮೇಳದಲ್ಲಿ 23 ಕೋಟಿ ಮೌಲ್ಯದ 'ಅನ್‌ಮೋಲ್‌' ಎಮ್ಮೆ ಮತ್ತು 15 ಕೋಟಿ ಮೌಲ್ಯದ 'ಶಹಬಾಜ್‌' ಕುದುರೆ ಪ್ರಮುಖ ಆಕರ್ಷಣೆಯಾಗಿವೆ. ಈ ದುಬಾರಿ ಜಾನುವಾರುಗಳನ್ನು ನೋಡಲು ದೇಶ-ವಿದೇಶಗಳಿಂದ ಜನರು ಆಗಮಿಸುತ್ತಿದ್ದು, ಇವುಗಳ ನಿರ್ವಹಣಾ ವೆಚ್ಚವೂ ಅಧಿಕವಾಗಿದೆ.

ನವದೆಹಲಿ: 23 ಕೋಟಿ ಮೌಲ್ಯದ ಎಮ್ಮೆ, 15 ಕೋಟಿ ಮೌಲ್ಯದ ಕುದುರೆ ಈ ಬಾರಿ ರಾಜಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಪುಷ್ಕರ್ ಜಾನುವಾರು ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿ ವರ್ಷ ನಡೆಯುವ ಪುಷ್ಕರ್‌ ಮೇಳದಲ್ಲಿ ಭಾರತದಲ್ಲೇ ಅತ್ಯಂತ ದುಬಾರಿ ಜಾನುವಾರುಗಳನ್ನು ಪ್ರದರ್ಶಿಸಲಾಗುತ್ತದೆ. ಇಂಥ ಜಾನುವಾರುಗಳನ್ನು ಖರೀದಿಸಲು, ನೋಡಲೆಂದೇ ಭಾರೀ ಸಂಖ್ಯೆಯಲ್ಲಿ ಜನ ದೇಶ-ವಿದೇಶಗಳಿಂದ ಆಗಮಿಸುವುದು ವಿಶೇಷ.

23 ಕೋಟಿಯ ಅನ್‌ಮೋಲ್‌

23 ಕೋಟಿ ಬೆಲೆ ಬಾಳುವ ರಾಜಸ್ಥಾನದ ಅನ್‌ಮೋಲ್‌ ಎಮ್ಮೆ ಮೇಳದ ಮತ್ತೊಂದು ವಿಶೇಷ. ಇದು ಮಾಮೂಲಿ ಎಮ್ಮೆ ಅಲ್ಲ, ಇದರ ತೂಕವೇ 1500 ಕೆ.ಜಿ. ಇದೆ. ಪ್ರತಿದಿನ ಸಾವಿರಾರು ರುಪಾಯಿ ವೆಚ್ಚ ಮಾಡಿ ಈ ಎಮ್ಮೆಗೆ ವಿಶೇಷ ಆಹಾರ ನೀಡಲಾಗುತ್ತದೆ. ಇದನ್ನು ಸಂತಾನೋತ್ಪತ್ತಿಗಾಗಿ ಬಳಸಲಾಗುತ್ತದೆ. ಇದರಿಂದಲೇ ಮಾಸಿಕ 4 ಲಕ್ಷ ರು. ವರೆಗೆ ಆದಾಯ ಬರುತ್ತದೆ. ಇನ್ನು ಉಜ್ಜೈನ್‌ ಮೂಲದ ಮತ್ತೊಂದು ಎಮ್ಮೆ ರಾಣಾಗೆ 25 ಲಕ್ಷ ರು. ವರೆಗೆ ಬಿಡ್‌ ಬಂದಿದೆ ಅಂತೆ. 600 ಕೆ,ಜಿ. ತೂಕದ, 8 ಅಡಿ ಉದ್ದ ಹಾಗೂ 5.5 ಅಡಿ ಎತ್ತರದ ಈ ಎಮ್ಮೆಯ ಆಹಾರಕ್ಕೆಂದೇ ನಿತ್ಯ 1500 ರು. ವೆಚ್ಚ ಮಾಡುತ್ತೇವೆ ಎನ್ನುತ್ತಾರೆ ಮಾಲೀಕರು.

ಇದನ್ನೂ ಓದಿ: Relationship: ಅವನಿಗಾಗಿ ಮಗಳನ್ನು ಕಳೆದುಕೊಂಡ್ಳು, ಮಗನ ಮೇಲೆ ತಂದೆಯಿಂದ ಗುಂಡು: ಕರುಳು ಹಿಂಡುವ 2 ಕಥೆಗಳು

15 ಕೋಟಿಯ ಶಹಬಾಜ್‌

ಚಂಡೀಗಢದ ಗೇರಿ ಗಿಲ್‌ ಅವರ ಎರಡೂವರೆ ವರ್ಷದ ಕುದುರೆ ಶಹಬಾಜ್‌ ಪುಷ್ಕರ ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಹಲವು ಸ್ಪರ್ಧೆಗಳಲ್ಲಿ ಗೆದ್ದಿರುವ ಈ ಮಾರ್‌ವಾರಿ ತಳಿಯ ಕುದುರೆಗೆ ಈಗಾಗಲೇ ಗ್ರಾಹಕರು 15 ಕೋಟಿ ವರೆಗೆ ಬೆಲೆ ನಿಗದಿ ಮಾಡಿದ್ದಾರಂತೆ. ಅದೇ ರೀತಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟಿರುವ ಬಾದಲ್‌ ಕುದುರೆಗೂ ಭಾರೀ ಬೇಡಿಕೆ ಇದೆ. 11 ಕೋಟಿ ರು. ಕೊಟ್ಟು ಈ ಕುದುರೆ ಖರೀದಿಸಲು ಜನ ಮುಂದೆ ಬಂದಿದ್ದಾರೆ. ಆದರೆ, ಮಾಲೀಕರು ಮಾತ್ರ ಈ ಕುದುರೆ ಮಾರಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಮದುವೆಯಲ್ಲಿ ವಧು ಧರಿಸುವ ಚಿನ್ನಾಭರಣಕ್ಕೆ ಮಿತಿ ಹೇರಿದ ಗ್ರಾಮ; ನಿಯಮ ಉಲ್ಲಂಘಿಸಿದ್ರೆ 50 ಸಾವಿರ ದಂಡ

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!