
ಲಕ್ನೋ: ಮದುವೆ ಆಗಲು ತುದಿಗಾಲಲ್ಲಿ ನಿಂತಿರುವ ಯುವಕರನ್ನು ವಿವಾಹಿತ ಮಹಿಳೆಯರು ವಂಚಿಸುತ್ತಿರುವ ಹಲವು ಪ್ರಕರಣಗಳು ಇತ್ತೀಚೆಗೆ ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಹೀಗಿರುವಾಗ ವಧುವೊಬ್ಬಳ ವಾಶ್ರೂಮ್ಗೆ ಹೋಗಿ ಬರ್ತಿನಿ ಎಂದು ಹೇಳಿ ಮದುವೆ ಮಂಟಪದಿಂದ ಎದ್ದು ಹೋದವಳು, ಮರಳಿ ಬಾರದೇ ಮದುವೆ ಮುರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
40 ವರ್ಷದ ರೈತ ಕಮಲೇಶ್ ಕುಮಾರ್ ಎಂಬುವವರ ಪತ್ನಿ ತೀರಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಮಹಿಳೆಯೊಂದಿಗೆ 2ನೇ ಮದುವೆ ನಿಗದಿಯಾಗಿತ್ತು. ಈ ವಿವಾಹ ಸಂಬಂಧಕ್ಕಾಗಿ ವ್ಯಕ್ತಿ ವಿವಾಹ ದಲ್ಲಾಳಿಯೊಬ್ಬರಿಗೆ 30 ಸಾವಿರ ರೂಪಾಯಿಯನ್ನು ಕಮೀಷನ್ ಆಗಿ ನೀಡಿದ್ದರು. ಇದಾದ ನಂತರ ಖಜ್ನಿ ಪ್ರದೇಶಕ್ಕೆ ಸಮೀಪದಲ್ಲಿರುವ ಬಹೋರಿಯಾ ಸಮೀಪದ ಶಿವ ದೇಗುಲದಲ್ಲಿ ಮದುವೆ ನಿಗದಿಯಾಗಿತ್ತು. ಮದುವೆ ಮಂಟಪದಲ್ಲಿ ಸಂಪ್ರದಾಯಗಳು ನಡೆಯುತ್ತಿದ್ದು, ವಧುವಿಗೆ ವರನ ಕಡೆಯಿಂದ ನೀಡುವ ಸೀರೆ, ಆಭರಣ, ಮೇಕಪ್ ಐಟಂಗಳು ಹೀಗೆ ಎಲ್ಲವನ್ನೂ ಮೊದಲೇ ನೀಡಲಾಗಿತ್ತು. ಈ ನಡುವೆ ವಧು ಸಂಪ್ರದಾಯಗಳು ನಡೆಯುತ್ತಿರುವ ಸಮಯದಲ್ಲೇ ಬಾತ್ರೂಮ್ಎ ಹೋಗಿ ಬರ್ತಿನಿ ಎಂದು ಮಂಟಪದಿಂದ ಎದ್ದು ಹೋದವಳು ಮರಳಿ ಬಾರದೇ ನಾಪತ್ತೆಯಾಗಿದ್ದಾಳೆ.
ವರ ಕಮಲೇಶ್ ಅವರು ಸೀತಾಪುರದ ಗೋವಿಂದ್ಪುರ ಗ್ರಾಮದ ನಿವಾಸಿಯಾಗಿದ್ದು, ಇವರ ಮೊದಲ ಪತ್ನಿ ತೀರಿಕೊಂಡ ಹಿನ್ನೆಲೆಯಲ್ಲಿ ಅವರು 2ನೇ ಮದುವೆಯಾಗಿದ್ದರು. ಆದರೆ ಮದುವೆ ಮಧ್ಯೆಯೇ ವಧು ಎಸ್ಕೇಪ್ ಆಗಿದ್ದು, ಇತ್ತ ವಧುವೂ ಇಲ್ಲ, ಚಿನ್ನಾಭರಣ ಹಣವೂ ಇಲ್ಲ ಎಂಬಂತಾಗಿದೆ. ಈ ಮದುವೆಯ ವೆಚ್ಚವನ್ನು ವರನೇ ವಹಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ ವಧುವಿನ ಜೊತೆ ವಧುವಿನ ತಾಯಿಯೂ ಎಸ್ಕೇಪ್ ಆಗಿರುವುದರಿಂದ ಇದೊಂದು ಮೊದಲೇ ಯೋಜನೆ ರೂಪಿಸಿ ಮಾಡಿದ ವಂಚನೆ ಎಂದು ಅಂದಾಜಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾನು ನನ್ನ ಕುಟುಂಬವನ್ನು ಮತ್ತೆ ನಿರ್ಮಾಣ ಮಾಡಬೇಕೆಂದು ಬಯಸಿದ್ದೆ, ಆದರೆ ಈ ಪ್ರಯತ್ನದಲ್ಲಿ ಎಲ್ಲವನ್ನು ಕಳೆದುಕೊಂಡೆ ಎಂದು ಹೇಳಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಎಸ್ಪಿ ಜಿತೇಂದ್ರ ಕುಮಾರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ