
ಉತ್ತರ ಪ್ರದೇಶ (ನ.8 ): ಉತ್ತರ ಪ್ರದೇಶ ಬಾರಾಬಂಕಿಯ ಸುಮ್ಲಿ ನದಿಯಲ್ಲಿ 25 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿದಂತೆ 3 ಜನ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಬಾರಾಬಂಕಿಯ ಮೊಹಮ್ಮದ್ಪುರ ಖಾಲಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿವ್ಲಿ ನದಿಯಲ್ಲಿ ಈ ದುರಂತ ನಡೆದಿದ್ದು, ಸಲ್ಪುರ್ ಗ್ರಾಮದ ನಿವಾಸಿಗಳು ನದಿಯ ಆಚೆಯ ಹಳ್ಳಿಯಲ್ಲಿ ಕಾರ್ತಿಕ ಪೂರ್ಣಿಮೆಯಂದು ಆಯೋಜಿಸಲಾಗಿದ್ದ ಆಯೋಜಿಸಿದ್ದ ಕುಸ್ತಿ ಪಂದ್ಯವನ್ನು ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ದೋಣಿಯು ಹೊಳೆಯ ಮಧ್ಯದಲ್ಲಿ ಒದ್ದಾಡಿತು ಮತ್ತು ಇದ್ದಕ್ಕಿದ್ದಂತೆ ಮಗುಚಿತು. ಬೋಟ್ನಲ್ಲಿದ್ದವರು ಕೆಲವು ಮೀನುಗಾರರು ನದಿಗೆ ಹಾರಿದರು. ಮೃತರನ್ನು ಪ್ರಿಯಾಂಕಾ (5), ಹಿಮಾಂಶು (8) ಮತ್ತು ರಿತು ಯಾದವ್ (18) ಎಂದು ಗುರುತಿಸಲಾಗಿದೆ. ಈ ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ್ದಾರೆ.
ಜಿಲ್ಲಾಧಿಕಾರಿ ಅವಿನಾಶ್ ಕುಮಾರ್ ಅವರು ಮೃತರ ಮುಂದಿನ ಕುಟುಂಬಗಳಿಗೆ ವಿಪತ್ತು ನಿಧಿಯಿಂದ ತಲಾ 4 ಲಕ್ಷ ರೂ.ಧನ ಸಹಾಯವನ್ನು ಘೋಷಿಸಿದ್ದು, 13 ಜನರು ಈಜಿಕೊಂಡು ಸುರಕ್ಷಿತವಾಗಿದ್ದರೆ, ಉಳಿದವರನ್ನು ನದಿಯಿಂದ ರಕ್ಷಿಸಲಾಗಿದೆ. ಈ ಪೈಕಿ ಮೂವರು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ದೋಣಿ ದುರಂತ; 40 ಮಂದಿ ರಕ್ಷಣೆ, 100ಕ್ಕೂ ಜನ ನಾಪತ್ತೆ!
ಈ ಅಪಘಾತದಲ್ಲಿ ಸುಮಾರು 6 ಜನರು ನದಿಯಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಅಪಘಾತ ಸಂಭವಿಸಿದ ರೀತಿಯಿಂದಾಗಿ ಸಂಖ್ಯೆ ಹೆಚ್ಚಾಗಬಹುದು ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ, 20ಕ್ಕೂ ಅಧಿಕ ಸಾವು?
ಕಳೆದ ಆಗಸ್ಟ್ ನಲ್ಲಿ ಕೂಡ ಉತ್ತರ ಪ್ರದೇಶದ ಭಂಡಾ ಜಿಲ್ಲೆಯಲ್ಲಿ ಭೀಕರ ದೋಣಿ ದುರಂತ ಸಂಭವಿಸಿತ್ತು. ಯಮುನಾ ನದಿಯಲ್ಲಿ ನಡೆದ ದುರಂತದಲ್ಲಿ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ರಕ್ಷಾಬಂಧನ ಸಮಯದಲ್ಲಿ ರಾಖಿ ಕಟ್ಟಲು ತಮ್ಮ ತಾಯಿಯ ಮನೆಗೆ ತೆರಳುತ್ತಿದ್ದಾಗ ಈ ದುರಂತ ನಡೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ