
ಲಖನೌ[ಡಿ.19]: ಶಾಸನ ಸಭೆಗಳಲ್ಲಿ ಸರ್ಕಾರದ ನೀತಿ-ನಿಲುವುಗಳ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಸದನದಲ್ಲಿ ಧರಣಿ ನಡೆಸುವುದು ಸಾಮಾನ್ಯ. ಆದರೆ, ಬಿಜೆಪಿ ಶಾಸಕರೊಬ್ಬರಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ವಿಪಕ್ಷಗಳ ಸದಸ್ಯರು ಪ್ರತಿಭಟಿಸಿದ, ಅದಕ್ಕೆ ಬಿಜೆಪಿ ಶಾಸಕರೂ ಬೆಂಬಲ ನೀಡಿ ತಾವೂ ಪ್ರತಿಭಟನೆಯಲ್ಲಿ ಭಾಗಿಯಾದ ಅಚ್ಚರಿಯ ಘಟನೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ನಡೆದಿದೆ.
ಕೈ, ಜೆಡಿಎಸ್ ಎಡವಟ್ಟಿಂದ ಬಿಜೆಪಿಗೆ ಭರ್ಜರಿ ಬೋನಸ್
ತಮ್ಮ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ವಿವರಣೆಗೆ ಅವಕಾಶ ನೀಡಬೇಕೆಂಬ ಬಿಜೆಪಿ ಶಾಸಕ ನಂದ್ಕಿಶೋರ್ ಕೋರಿಕೆಯನ್ನು ಸ್ಪೀಕರ್ ತಳ್ಳಿ ಹಾಕಿದರು. ಈ ವೇಳೆ ಬಿಜೆಪಿ ಶಾಸಕರ ನೆರವಿಗೆ ಧಾವಿಸಿದ ಕಾಂಗ್ರೆಸ್ನ ಹಲವು ಶಾಸಕರು ಸದನದ ಭಾವಿಗೆ ಧುಮುಕಿ ಪ್ರತಿಭಟನೆ ನಡೆಸಿದರು.
ಬಳಿಕ ಬಿಜೆಪಿ 100ಕ್ಕೂ ಹೆಚ್ಚು ಶಾಸಕರು ಕೂಡಾ ಪ್ರತಿಭಟನೆ ನಡೆಸಿದರು.
'ಕೇಸರಿ ಬಟ್ಟೆ ಧರಿಸುವ ಬಿಜೆಪಿಗರು ರೇಪಿಸ್ಟ್ಗಳು'
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ