ಬಯಲಾಯ್ತು Jayalalithaa ಸಾವಿನ ರಹಸ್ಯ, ಸಾವಿಗೆ ಆಪ್ತ ಸ್ನೇಹಿತೆ ಶಶಿಕಲಾರೇ ಕಾರಣ

Published : Oct 18, 2022, 12:40 PM ISTUpdated : Oct 18, 2022, 01:49 PM IST
ಬಯಲಾಯ್ತು Jayalalithaa ಸಾವಿನ ರಹಸ್ಯ, ಸಾವಿಗೆ ಆಪ್ತ ಸ್ನೇಹಿತೆ ಶಶಿಕಲಾರೇ ಕಾರಣ

ಸಾರಾಂಶ

Jayalalithaa Death latest news: ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಆರುಮುಗಂ ಆಯೋಗ ವರದಿ ಸಲ್ಲಿಸಿದ್ದು, ಸಾವಿಗೆ ಶಶಿಕಲಾ ಹೊಣೆ ಎಂದು ಹೇಳಿದೆ. ಜತೆಗೆ ಮಾಜಿ ಆರೋಗ್ಯ ಸಚಿವ, ಆರೋಗ್ಯ ಇಲಾಖೆ ಕಾರ್ಯದರ್ಶಿ ಮತ್ತು ಖಾಸಗಿ ವೈದ್ಯರ ವಿರುದ್ಧ ತನಿಖೆಗೆ ಶಿಫಾರಸು ಮಾಡಿದೆ. 

ಚೆನ್ನೈ: ತಮಿಳು ನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಮಾಡಿರುವ ಆರುಮುಗಸ್ವಾಮಿ ಕಮೀಷನ್‌ 608 ಪುಟಗಳ ವರದಿಯನ್ನು ಸಲ್ಲಿಸಿದೆ. ಜಯಲಲಿತಾ ಅವರ ಸಾವಿಗೆ ಶಶಿಕಲಾ ಅವರೇ ಕಾರಣ ಎಂದು ಕಮೀಷನ್‌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಜತೆಗೆ ಶಶಿಕಲಾ ಮತ್ತು ಮಾಜಿ ಆರೋಗ್ಯ ಸಚಿವರ ವಿರುದ್ಧ ತನಿಖೆ ನಡೆಸುವಂತೆ ಆಯೋಗ ಸಲಹೆ ನೀಡಿದೆ. ವರದಿಯ ಪ್ರಕಾರ ಶಶಿಕಲಾ, ಜಯಲಲಿತಾರ ಖಾಸಗಿ ವೈದ್ಯ ಮತ್ತು ಶಶಿಕಲಾರ ಸಂಬಂಧಿ ಡಾ. ಶಿವಕುಮಾರ್‌, ಮಾಜಿ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಧಾಕೃಷ್ಣನ್‌ ಮತ್ತು ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್‌ ಅವರು ತಪ್ಪಿತಸ್ಥರು ಎಂದು ಹೇಳಲಾಗಿದೆ. ಆಯೋಗ ಈ ಎಲ್ಲರ ವಿರುದ್ಧವೂ ತನಿಖೆ ನಡೆಸುವಂತೆ ಸಲಹೆ ನೀಡಿದೆ. 2016ರ ಸೆಪ್ಟೆಂಬರ್‌ ತಿಂಗಳಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಜಯಲಲಿತಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಹಿಡಿದು ಅವರ ಸಾವಿನ ವರೆಗೂ ಅವರಿಗೆ ನೀಡಲಾದ ಚಿಕಿತ್ಸೆ, ಅವರ ಆರೋಗ್ಯದಲ್ಲಾದ ಬದಲಾವಣೆಗಳು ಎಲ್ಲದರ ಕುರಿತು ಆಯೋಗ ವಿಚಾರಣೆ ನಡೆಸಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಅವರಿಗೆ ವರದಿ ನೀಡಿದ್ದರು. ಇಂದು ತಮಿಳುನಾಡು ವಿಧಾಸಭೆಯಲ್ಲಿ ಎಂ ಕೆ ಸ್ಟಾಲಿನ್‌ ಆಯೋಗದ ವರದಿಯನ್ನು ಪ್ರಸ್ತುತ ಪಡಿಸಿದ್ದಾರೆ. 

ಜಯಲಲಿತಾ 2016ರ ಡಿಸೆಂಬರ್‌ 5ರಂದು ಮೃತಪಟ್ಟಿದ್ದರು. ಆರುಮುಗಸ್ವಾಮಿ ಆಯೋಗವನ್ನು ಹಿಂದಿನ ಎಐಎಡಿಎಂಕೆ ಸರ್ಕಾರ 2017ರ ನವೆಂಬರ್‌ 22ರಂದು ರಚಿಸಿತ್ತು. ಮಡ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರುಮುಗಂ ಅವರು ಆಯೋಗದ ಮುಖ್ಯಸ್ಥರಾಗಿ ತನಿಖೆ ನಡೆಸಿದರು. ಇದಾದ ಸುಮಾರು ಐದು ವರ್ಷಗಳ ನಂತರ ಇದೀಗ ಆಯೋಗ ವರದಿ ನೀಡಿದೆ. ಇದರಿಂದ ಶಶಿಕಲಾ ಮತ್ತು ಇತರ ಆರೋಪಿಗಳ ವಿರುದ್ಧ ಶೀಘ್ರ ತನಿಖೆಯಾಗುವ ಸಾಧ್ಯತೆಯಿದೆ. ಜಯಲಲಿತಾ ಅವರ ಸಾವಿನ ದಿನದಿಂದಲೂ ಶಶಿಕಲಾ ಅವರ ಮೇಲೆ ಶಂಕೆ ಕೇಳಿಬಂದಿತ್ತು. ಜಯಲಲಿತಾ ಅವರಿಗೆ ಹಲವು ದಿನಗಳಿಂದ ವಿಷವನ್ನು ನಿಧಾನವಾಗಿ ಶಶಿಕಲಾ ಕೊಡುತ್ತಾ ಬಂದಿದ್ದರು ಎಂಬ ಆರೋಪಗಳು ಕೇಳಿ ಬಂದಿತ್ತು. ಈಗ ಈ ಆರೋಪಗಳು ವರದಿಯಲ್ಲಿ ದೃಢಪಟ್ಟಿವೆ. 

ಇದನ್ನೂ ಓದಿ: ಜಯಲಲಿತಾ ಸಾವಿನ ಕೇಸಲ್ಲಿ ಶಶಿಕಲಾ ವಿರುದ್ಧ ಕ್ರಮಕ್ಕೆ ಶಿಫಾರಸು

ವರದಿಯ ಮುಖ್ಯಾಂಶಗಳು:

  • ವರದಿಯನ್ನು ತಮಿಳು ನಾಡು ಸರ್ಕಾರಕ್ಕೆ ಆರುಮುಗಮ್‌ ಸಮಿತಿ ಆಗಸ್ಟ್‌ ತಿಂಗಳಲ್ಲೇ ನೀಡಿತ್ತು. ಜಯಲಲಿತಾ ಸಾವಿನ ಬಗ್ಗೆ ಇರುವ ಸಂಶಯವನ್ನು ನಿವಾರಿಸುವಂತೆ ಡಿಎಂಕೆ ಪಕ್ಷ ಈ ಹಿಂದೆಯೇ ಭರವಸೆ ನೀಡಿತ್ತು. ಅದರಂತೆ ಇಂದು ಸದನದ ಮುಂದೆ ವರದಿಯನ್ನು ಸ್ಟಾಲಿನ್‌ ಪ್ರಸ್ತಾಪಿಸಿದ್ದಾರೆ. 
  • ಜಯಲಲಿತಾ ಸಾವಿನ ಸಂದರ್ಭದಲ್ಲಿ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಡಾ. ರಮಾ ಮೋಹನ ರಾವ್‌ ಅವರು ಜಯಲಲಿತಾ ಅವರೂ ಜಯಲಲಿತಾ ಸಾವಿಗೆ ಕಾರಣರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 
  • ತಮಿಳು ನಾಡು ಮಾಜಿ ಆರೋಗ್ಯ ಸಚಿವ ವಿಜಯ ಭಾಸ್ಕರ್‌ ಮತ್ತು ಅಪೋಲೊ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರತಾಪ್‌ ರೆಡ್ಡಿ ಜಯಲಲಿತಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. 

ಇದನ್ನೂ ಓದಿ: ಜಯಾ ಸಾವಿನ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ: ನಾಳೆ ತಮಿಳುನಾಡು ಸಂಪುಟದಲ್ಲಿ ಚರ್ಚೆ

ಒಟ್ಟಿನಲ್ಲಿ ಆರು ವರ್ಷಗಳ ನಂತರ ಜಯಲಲಿತಾ ಸಾವಿನ ಸುತ್ತ ಇದ್ದ ಅದೆಷ್ಟೋ ಸಂಶಯಗಳು ನಿಜ ಎಂಬ ದಿಕ್ಕಿನಲ್ಲಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ವಿಶೇಷ ತನಿಖಾ ತಂಡ ರಚಿಸಿ ಶಶಿಕಲಾ ಮತ್ತಿತರ ಆರೋಪಿಳ ವಿರುದ್ಧ ತನಿಖೆಗೆ ಆದೇಶಿಸುತ್ತಾರ ಎಂಬುದನ್ನು ಕಾದುನೋಡಬೇಕಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!
ಬ್ಯಾಗಲ್ಲಿ ಹೃದಯ ಇಟ್ಕೊಂಡು ಓಡಾಟ: ನೈಸರ್ಗಿಕ ಹೃದಯ ಇಲ್ಲದೇ ಬದುಕುಳಿದಿರುವ ಜಗತ್ತಿನ ಏಕೈಕ ಮಹಿಳೆ ಈಕೆ