ರಾಷ್ಟ್ರ ರಾಜಧಾನಿಯಲ್ಲಿ ಉಗ್ರ ದಾಳಿಗೆ ಬಿಗ್ ಪ್ಲಾನ್, ಇಬ್ಬರು 'ಕಸಬ್' ಅರೆಸ್ಟ್!

Published : Nov 18, 2020, 04:53 PM ISTUpdated : Nov 18, 2020, 05:42 PM IST
ರಾಷ್ಟ್ರ ರಾಜಧಾನಿಯಲ್ಲಿ ಉಗ್ರ ದಾಳಿಗೆ ಬಿಗ್ ಪ್ಲಾನ್, ಇಬ್ಬರು 'ಕಸಬ್' ಅರೆಸ್ಟ್!

ಸಾರಾಂಶ

ದೆಹಲಿಯಲ್ಲಿ ಉಗ್ರ ದಾಳಿಗೆ ಬಿಗ್ ಸ್ಕೆಚ್| ಇಬ್ಬರು ಉಗ್ರರು ಅರೆಸ್ಟ್| ಶಾಕಿಂಗ್ ವಸ್ತುಗಳು ಪತ್ತೆ

ನವದೆಹಲಿ(ನ.18) ದೆಹಲಿ ಪೊಲೀಸರ ವಿಶೇಷ ತಂಡ ಸೋಮವಾರ ಜೈಶ್ ಎ ಮೊಹಮ್ಮದ್‌ನ ಇಬ್ಬರು ಉಗ್ರರನ್ನು ಬಂಧಿಸಿ ಬಹುದೊಡ್ಡ ಅಪಾಯವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿದ್ದ ಅಜ್ಮಲ್ ಕಸಬ್‌ನಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಾಚಾರಿಗಳನ್ನು ಟಾರ್ಗೆಟ್ ಮಾಡಲು ತಂತ್ರ ರೂಪಿಸಿದ್ದರು. ಆದರೀಗ ದೆಹಲಿ ಪೊಲೀಸರ ಸಮಯ ಪ್ರಜ್ಞೆಯಿಂದ ಇಬ್ಬರು ಕಸಬ್‌ ಜೈಲು ಪಾಲಾಗಿದ್ದಾರೆ.

ಪೊಲೀಸರು ಇವರಿಬ್ಬರನ್ನೂ ದೆಹಲಿಯ ಸರಾಯ್ ಕಾಲೆ ಖಾಂದಿಂದ ಬಂಧಿಸಿದ್ದಾರೆ. ಈ ಇಬ್ಬರೂ ತೀವ್ರಗಾಮಿಗಳಿಗೆ ದೆಹಲಿಯಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಆದೇಶಿಸಲಾಗಿತ್ತು. ಇಬ್ಬರೂ ಕಣಿವೆ ನಾಡು ಕಾಶ್ಮೀರದವರಾಗಿದ್ದಾರೆ.

ಉಗ್ರರು, ರಾಷ್ಟ್ರ ವಿರೋಧಿಗಳಿಂದ ತುಂಬಿರುವ ಬಂಗಾಳ ಕಾಶ್ಮೀರಕ್ಕಿಂತ ಕಡೆಯಾಗಿದೆ

ಇಲ್ಲಿದೆ ನೋಡಿ ಉಗ್ರರ ಮಾಹಿತಿ: 

ಅಬ್ದುಲ್ ಲತೀಫ್ ಮೀರ್, 22 ವರ್ಷದ ಶಂಕಿತ ಉಗ್ರ ಕಾಶ್ಮೀರದ ಬರಾಮುಲ್ಲಾದ ನಿವಾಸಿ. ಆತ ಶ್ರಿನಗರದ ದಾರುಲ್ ಉಲೂಮ್ ಬಿಲಾಲಿಯಾ ಶಕ್ ಮದರಸಾದಿಂದ ಹಾಫಿಜ್ ಶಿಕ್ಷಣ ಪಡೆದುಕೊಂಡಿದ್ದಾನೆ. ಮತ್ತೊಬ್ಬ ಶಂಕಿತ ಉಗ್ರ ಮೊಹಮ್ಮದ್ ಅಶ್ರಫ್ ಖಾತ್ನಾ, 20 ವರ್ಷದ ಈತ ಕೂಡಾ ಶ್ರೀನಗರದ ಮದರಸಾದಲ್ಲೇ ಶಿಇಕ್ಷಣ ಪಡೆದಿದ್ದಾನೆ. ಇಬ್ಬರೂ ಸೋಶಿಯಲ್ ಮೀಡಿಯಾ ಮೂಲಕ ತೀವ್ರಗಾಮಿಗಳಾಗಿದ್ದಾರೆ. ಇಬ್ಬರನ್ನೂ ಪಾಕಿಸ್ತಾನ ಹ್ಯಾಂಂಡ್ಲರ್‌ಗಳು ಇವರನ್ನು ಈ ಕೃತ್ಯದೆಡೆ ದೂಡಿದ್ದಾರೆ. ನಾಆಲ್ಕು ತಿಂಗಳ ಹಿಂದೆ ಇಬ್ಬರೊಂದಿಗೆ ಲಾಹೋರ್‌ನಲ್ಲಿ ವಾಸಿಸುವ ಜೈಶ್‌ನ ರಿಕ್ರೂಟರ್ ಅಫ್ತಾಬ್ ಮಲಿಕ್ ಮೆಸೆಂಜರ್ ಆಪ್ ಮೂಲಕ ಸಂಪರ್ಕಿಸಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾಆ ಆಪ್ ಮೂಲಕ ಫೋನ್‌ನಲ್ಲಿ ಮಾತುಕತೆ ಆರಂಭಿಸಿದ್ದರು.

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ದೀಪಾವಳಿ ಗಿಫ್ಟ್ ನೀಡಿದ ಭಾರತೀಯ ಸೇನೆ!

ಕಸಬ್‌ನಂತೆ ದಾಳಿ ನಡೆಸಲು ಪ್ಲಾನ್

ಬಂಧಿತ ಉಗ್ರರ ಲೀಡರ್‌ ಇಬ್ಬರನ್ನೂ ಪಾಕಿಸ್ತಾನಕ್ಕೆ ಆಆತ್ಮಹತ್ಯಾ ದಾಳಿ ನಡೆಸುವ ತರಬೇತಿಗೆ ಕರೆಸಿಕೊಂಡಿದ್ದರು. ಹೀಗಿದ್ದರೂ ಇವರಿಬ್ಬರು ಮೂತರು ಬಾರಿ ಗಡಿ ದಾಟುವಲ್ಲಿ ವಿಫಲರಾಗಿದ್ದರು. ಇದಾದ ಬಳಿಕ ಇವರನ್ನು ದೇವನಂದ್‌ನಲ್ಲಿ ತರಬೇತಿಗೆ ಕರೆಸಿಕೊಂಡರು. ಹೀಗಾಗಿ ಇಬ್ಬರೂ ಕಾಶ್ಮೀರ ಬಿಟ್ಟು ಉತ್ತರ ಪ್ರದೇಶಕ್ಕೆ ಬಂದರು. ಇದಾದ ಬಳಿಕ ಅವರನ್ನು PoKಗೆ ಕಳುಹಿಸಲಾಯ್ತು. ಪಾಕಿಸ್ತಾನದಲ್ಲಿ ಅವರಿಗೆ ದೆಹಲಿಯ ರಸ್ತೆಗಳಲ್ಲಿ ಸ್ಫೋಟ ನಡೆಸಲು ತಿಳಿಸಲಾಗಿತ್ತು.

ಉಗ್ರರ ಬಳಿ ಸಿಕ್ಕಿದ್ದೇನು?

ಪೊಲೀಸರಿಗೆ ಇಬ್ಬರ ಬಳಿ ಗಡಿ ದಾಟುವ ವಿಡಿಯೋ, ಗಡಿಯಾಚೆ ತಲುಪಿ ತಮ್ಮ ಲೀಡರ್‌ಗಳನ್ನು ಭೇಟಿಯಾಗಿ ದಾಳಿಯ ಯೋಜನೆ ರೂಪಿಸುವ Audio ಹಾಗೂ ಜಿಹಾದಿ ಸಾಹಿತ್ಯ ಸಿಕ್ಕಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?