ಪಾಕಿಸ್ತಾನದ 2ನೇ ಅತೀದೊಡ್ಡ ನೇವಿ ಏರ್‌ಬೇಸ್‌ ಮೇಲೆ ಬಲೂಚಿಸ್ತಾನದ ಮಜೀದ್ ಬ್ರಿಗೇಡ್ ದಾಳಿ

Published : Mar 26, 2024, 08:39 AM ISTUpdated : Mar 26, 2024, 08:43 AM IST
ಪಾಕಿಸ್ತಾನದ 2ನೇ ಅತೀದೊಡ್ಡ ನೇವಿ ಏರ್‌ಬೇಸ್‌ ಮೇಲೆ ಬಲೂಚಿಸ್ತಾನದ ಮಜೀದ್ ಬ್ರಿಗೇಡ್ ದಾಳಿ

ಸಾರಾಂಶ

ಪಾಕಿಸ್ತಾನದ  ನೌಕಾ ನೆಲೆಗೆ ಸೇರಿದ 2ನೇ ಅತೀದೊಡ್ಡ ವಿಮಾನ ನಿಲ್ದಾಣದ ಮೇಲೆ  ದಾಳಿ ನಡೆದಿದೆ.  ಪಾಕಿಸ್ತಾನದ ಟರ್ಬತ್‌ನಲ್ಲಿರುವ ಪಿಎನ್‌ಎಸ್ ಸಿದ್ಧಿಕ್ ಮೇಲೆ ನಿಷೇಧಿತ ಬಲೋಚಿಸ್ತಾನ್ ಲಿಬರೇಷನ್ ಆರ್ಮಿಯ ಮಜೀದ್ ಬ್ರಿಗೇಡ್ ದಾಳಿ ನಡೆಸಿದೆ.

ಕರಾಚಿ: ಪಾಕಿಸ್ತಾನದ  ನೌಕಾ ನೆಲೆಗೆ ಸೇರಿದ 2ನೇ ಅತೀದೊಡ್ಡ ವಿಮಾನ ನಿಲ್ದಾಣದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.  ಪಾಕಿಸ್ತಾನದ ಟರ್ಬತ್‌ನಲ್ಲಿರುವ ಪಿಎನ್‌ಎಸ್ ಸಿದ್ಧಿಕ್ ಮೇಲೆ ನಿಷೇಧಿತ ಬಲೋಚಿಸ್ತಾನ್ ಲಿಬರೇಷನ್ ಆರ್ಮಿಯ ಮಜೀದ್ ಬ್ರಿಗೇಡ್ ದಾಳಿ ನಡೆಸಿದೆ. ದಾಳಿಯ ಹೊಣೆ ಹೊತ್ತುಕೊಂಡಿರುವ ಮಜೀದ್ ಬ್ರಿಗೇಡ್ ಬಲೂಚಿಸ್ತಾನದಲ್ಲಿ ಚೀನಾದ ಹೂಡಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದೆ. ಪಾಕಿಸ್ತಾನ ಹಾಗೂ ಚೀನಾ ಎರಡೂ ಸೇರಿ ಬಲೂಚಿಸ್ತಾನದ ಸಂಪನ್ಮೂಲವನ್ನು ಕಬಳಿಸುತ್ತಿವೆ ಎಂದು ಬಿಎಎಲ್‌ ಆರೋಪಿಸಿದೆ. ದಾಳಿಗೊಳಗಾದ ಪಾಕ್‌ನ ವಾಯುನೆಲೆಯೊಳಗೆ ನಮ್ಮ ಯೋಧರು ನುಗ್ಗಿದ್ದಾರೆ ಎಂದು ಬಿಎಎಲ್ ಹೇಳಿಕೊಂಡಿದೆ. 

ಈ ದಾಳಿಯಿಂದಾಗಿ ಕನಿಷ್ಠ ಮೂರು ಗಂಟೆಗಳ ಕಾಲ ನಿರಂತರ ಗುಂಡಿನ ದಾಳಿ ಮುಂದುವರೆದಿತ್ತು ಎಂದು ವರದಿಯಾಗಿದೆ. ಹಲವು ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಹಾರಾಡುತ್ತಾ ಗಸ್ತು ತಿರುಗುವಂತೆ  ಕಂಡು ಬಂದಿತ್ತು.  ಜೊತೆಗೆ ಗುಂಡಿನ ಚಕಮಕಿ ನಡೆದಿತ್ತು ಎಂದು ವರದಿಯಾಗಿದೆ. ಈ ದಾಳಿಯ ಹಿನ್ನೆಲೆಯಲ್ಲಿ ಫ್ರಾಂಟಿಯರ್ ಕಾರ್ಪ್ಸ್ ಹಲವಾರು ಪ್ರಮುಖ ಟರ್ಬಟ್ ರಸ್ತೆಗಳನ್ನು ಬಂದ್ ಮಾಡಿದೆ ಮತ್ತು ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿಯ ದೊಡ್ಡ ತುಕಡಿಯು ನೌಕಾ ವಾಯುನೆಲೆಯ ಕಡೆಗೆ ಚಲಿಸಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಪ್ರಖ್ಯಾತ ಗ್ವಾದರ್ ಬಂದರಿನ ಮೇಲೆ ಬಲೂಚಿಸ್ತಾನ ಪ್ರತ್ಯೇಕತಾವಾದಿಗಳ ದಾಳಿ!

ದಾಳಿಯಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಪಾಕಿಸ್ತಾನಿ ಸಿಬ್ಬಂದಿಯನ್ನು ಕೊಂದಿರುವುದಾಗಿ ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್  ಹೇಳಿಕೊಂಡಿದೆ. ಇದಲ್ಲದೆ, ತನ್ನ ಹೋರಾಟಗಾರರೊಬ್ಬರು ಪಿಎನ್‌ಎಸ್‌ ಸಿದ್ದಿಕ್ ಮೇಲೆ ದಾಳಿ ಮಾಡಿದ ಆಡಿಯೋ ಕ್ಲಿಪ್ ಅನ್ನು ಬಿಡುಗಡೆ ಮಾಡಿದೆ. ಅಲ್ಲಿ ದಾಳಿ ಮಾಡಿದವನು ವಿವಿಧ ವಾಹನಗಳನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಈ ದಾಳಿಯಿಂದಾಗಿ ಟರ್ಬಟ್‌ನ ಬೋಧನಾ ಆಸ್ಪತ್ರೆಯಲ್ಲಿ  ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.  ಆಸ್ಪತ್ರೆಯ ಎಲ್ಲಾ ವೈದ್ಯರಿಗೆ ಜಿಲ್ಲಾ ಆರೋಗ್ಯಾಧಿಕಾರಿ ಕೆಚ್ ಅವರು ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.  ಬಲೂಚಿಸ್ತಾನ್ ಲಿಬರೇಷ್‌ ಆರ್ಮಿ ನಡೆಸಿದ ಈ ದಾಳಿಯೂ ಒಂದೇ ವಾರದಲ್ಲಿ ನಡೆದ 2ನೇ ದಾಳಿಯಾಗಿದೆ. ಹಾಗೆಯೇ ವರ್ಷದಲ್ಲಿ ನಡೆದ ಮೂರನೇ ದಾಳಿಯಾಗಿದೆ. ಇದಕ್ಕೂ ಮೊದಲು ಜನವರಿ 29ರಂದು ಮೆಕ್ ನಗರವನ್ನು  ಬಿಎಎಲ್‌ ಗುರಿ ಮಾಡಿ ದಾಳಿ ನಡೆಸಿತ್ತು. ಇದಾದ ನಂತರ ಮಾರ್ಚ್‌ 20 ರಂದು ಗ್ವಾದರ್‌ನಲ್ಲಿರುವ  ಮಿಲಿಟರಿ ಹೆಡ್‌ ಕ್ವಾರ್ಟರ್ ಮೇಲೆಯೂ ದಾಳಿ ನಡೆಸಿತ್ತು. ಈಗ ನೌಕಾನೆಲೆಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದೆ.

ಪಾಕಿಸ್ತಾನವನ್ನು ಜಗತ್ತಿನಿಂದ್ಲೇ ನಿರ್ನಾಮ ಮಾಡಲಾಗುವುದು: ತಾಲಿಬಾನ್‌ ಪ್ರತಿಜ್ಞೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ ರಣ್‌ವೀರ್‌ ಸಿಂಗ್‌ ಸಿನಿಮಾ!
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ