ಹೊಸವರ್ಷಕ್ಕೆ ಅಯೋಧ್ಯೆ ಹೋಟೆಲ್‌ ಪೂರ್ತಿ ಬುಕ್‌: ದರ್ಶನ ಅವಧಿ ವಿಸ್ತರಣೆ

Published : Dec 29, 2024, 07:32 AM ISTUpdated : Dec 29, 2024, 07:34 AM IST
ಹೊಸವರ್ಷಕ್ಕೆ ಅಯೋಧ್ಯೆ ಹೋಟೆಲ್‌ ಪೂರ್ತಿ ಬುಕ್‌: ದರ್ಶನ ಅವಧಿ ವಿಸ್ತರಣೆ

ಸಾರಾಂಶ

ರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆ ಮೊದಲ ಹೊಸವರ್ಷ ಆಚರಣೆಗೆ ಸಜ್ಜಾಗುತ್ತಿದೆ. ಮಂದಿರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆಯಿದ್ದು, ದರ್ಶನದ ಅವಧಿ ವಿಸ್ತರಣೆಗೆ ದೇಗುಲ ನಿರ್ಧರಿಸಿದೆ. ಮತ್ತೊಂದೆಡೆ ಪ್ರವಾಸಿಗರಿಂದ ಸುತ್ತಲಿನ ಹೋಟೆಲ್‌ಗಳು ಬಹುತೇಕ ಭರ್ತಿಯಾಗಿವೆ. 

ಅಯೋಧ್ಯೆ (ಡಿ.29): ರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆ ಮೊದಲ ಹೊಸವರ್ಷ ಆಚರಣೆಗೆ ಸಜ್ಜಾಗುತ್ತಿದೆ. ಮಂದಿರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆಯಿದ್ದು, ದರ್ಶನದ ಅವಧಿ ವಿಸ್ತರಣೆಗೆ ದೇಗುಲ ನಿರ್ಧರಿಸಿದೆ. ಮತ್ತೊಂದೆಡೆ ಪ್ರವಾಸಿಗರಿಂದ ಸುತ್ತಲಿನ ಹೋಟೆಲ್‌ಗಳು ಬಹುತೇಕ ಭರ್ತಿಯಾಗಿವೆ. 

ಜ.1ಕ್ಕೆ ರಾಮಮಂದಿರಕ್ಕೆ ಹೆಚ್ಚಿನ ಸಂಖ್ಯೆ ಭಕ್ತರು ಆಗಮಿಸಬಹುದು ಎನ್ನುವ ಕಾರಣಕ್ಕೆರಾಮ ಜನ್ಮಭೂಮಿ ಟ್ರಸ್ಟ್‌ ಭಕ್ತರ ಅನುಕೂಲಕ್ಕಾಗಿ ಮಂದಿರದ ದರ್ಶನ ಅವಧಿಯನ್ನು ವಿಸ್ತರಿಸಿದೆ. ಜೊತೆಗೆ ಅಯೋಧ್ಯೆ ಹಾಗೂ ಸಮೀಪದ ಫೈಜಾಬಾದ್‌ನ ಹೋಟೆಲ್‌ಗಳು ಪ್ರವಾಸಿಗರ ಕಾರಣದಿಂದ ಈಗಾಗಲೇ ಬಹುತೇಕ ಭರ್ತಿಯಾಗಿವೆ.ಅದರಲ್ಲಿಯೂ ಕೆಲ ಹೋಟೆಲ್‌ಗಳಲ್ಲಿ ಬೇಡಿಕೆಯ ಕಾರಣಕ್ಕೆ ಒಂದು ದಿನಕ್ಕೆ 10 ಸಾವಿರ ರು. ತನಕ ಗ್ರಾಹಕರಿಗೆ ದರ ನಿಗದಿ ಮಾಡಿವೆ.

ಆಮ್‌ ಆದ್ಮಿ ಪಕ್ಷ ಜಾರಿಗೊಳಿಸಲು ಉದ್ದೇಶಿಸಿರುವ ಗೃಹಲಕ್ಷ್ಮೀ ಸ್ಕೀಂ ಬಗ್ಗೆ ತನಿಖೆಗೆ ಗವರ್ನರ್‌ ಆದೇಶ

ತಾಜ್‌ ಮಹಲ್‌ ಹಿಂದಿಕ್ಕಿದ ಅಯೋಧ್ಯೆ: ಕಳೆದ ಜನವರಿಯಲ್ಲಿ ಉದ್ಘಾಟನೆಗೊಂಡ ಅಯೋಧ್ಯೆಯ ರಾಮಮಂದಿರ, ಪ್ರಸಕ್ತ ವರ್ಷ ಅತಿ ಹೆಚ್ಚು ಪ್ರವಾಸಿಗರ ಸೆಳೆದ ತಾಣಗಳ ಪೈಕಿ ವಿಶ್ವವಿಖ್ಯಾತ ತಾಜ್‌ಮಹಲ್‌ ಅನ್ನೂ ಮೀರಿಸಿದೆ. ಈ ವರ್ಷದ ಜನವರಿ- ಸೆಪ್ಟೆಂಬರ್‌ ಅವಧಿಯಲ್ಲಿ ಆಗ್ರಾದ ತಾಜ್‌ಮಹಲ್‌ಗೆ 12.5 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರೆ, ಇದೇ ಅವಧಿಯಲ್ಲಿ ರಾಮಮಂದಿರ ಇರುವ ಅಯೋಧ್ಯೆಗೆ 13.5 ಕೋಟಿ ಜನರು ಭೇಟಿ ನೀಡಿದ್ದಾರೆ.

ಅಯೋಧ್ಯೆಯ ಆಕರ್ಷಣೆ ಏನು?: ಅಯೋಧ್ಯೆಗೆ ಬರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಲು ರಾಮ ಮಂದಿರ ಉದ್ಘಾಟನೆಯನ್ನು ಪ್ರಮುಖ ಕಾರಣ ಎಂದು ಪರಿಗಣಿಸಲಾಗಿದೆ. ಜತೆಗೆ, ವಾರಾಣಸಿ, ಮಥುರಾ, ಪ್ರಯಾಗರಾಜ್‌, ಮಿರ್ಜಾಪುರಗಳಿಗೂ ಭಕ್ತರು ಭೇಟಿ ನೀಡುತ್ತಿದ್ದು, ಉತ್ತರಪ್ರದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಸರಿಸುಮಾರು ಶೇ.70ರಷ್ಟು ಹೆಚ್ಚಿದೆ.

ಮನಮೋಹನ್ ಸಿಂಗ್ ಹೆಸರಲ್ಲಿ ಬೆಂ.ವಿವಿಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ: ಡಿ‌.ಕೆ.ಶಿವಕುಮಾರ್

ತಾಜ್‌ಗೆ ವಿದೇಶಿಗರೇ ಹೆಚ್ಚು: ಆಗ್ರಾಗೆ ಬರುವ ಭಾರತೀಯರ ಸಂಖ್ಯೆಯಲ್ಲಿ ಇಳಿಕೆಯಾದರೂ ವಿದೇಶಿಗರ ಪಾಲಿಗೆ ತಾಜ್‌ಮಹಲ್‌ ವಿಶೇಷ ತಾಣವಾಗಿಯೇ ಉಳಿದಿದ್ದು, 2023-24 ಅವಧಿಯಲ್ಲಿ 2.7 ಕೋಟಿ ಜನ ಭೇಟಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್