1281 ಮದರಸಾ ಇಂದಿನಿಂದಲೇ ಜನರಲ್ ಪಬ್ಲಿಕ್ ಸ್ಕೂಲ್, ಸಿಎಂ ಹಿಮಂತ ಬಿಸ್ವಾ ಆದೇಶ!

Published : Dec 14, 2023, 01:08 PM IST
1281 ಮದರಸಾ ಇಂದಿನಿಂದಲೇ ಜನರಲ್ ಪಬ್ಲಿಕ್ ಸ್ಕೂಲ್, ಸಿಎಂ ಹಿಮಂತ ಬಿಸ್ವಾ ಆದೇಶ!

ಸಾರಾಂಶ

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ನಿರ್ಧಾರ ಮುಸ್ಲಿಂ ಸಮುದಾಯವನ್ನೇ ಬೆಚ್ಚಿ ಬೀಳಿಸಿದೆ. ಭಾರಿ ವಿರೋಧದ ನಡುವೆಯೂ ಅಸ್ಸಾಂನ 1,281 ಮದರಸಾ ಶಾಲೆಗಳನ್ನು ಸಾಮಾನ್ಯ ಶಾಲೆಯಾಗಿ ಪರಿವರ್ತಿಸಲಾಗಿದೆ.ತಕ್ಷಣದಿಂದಲೇ ಆದೇಶ ಜಾರಿಯಾಗಿದೆ.

ಗುವ್ಹಾಟಿ(ಡಿ.14) ಅಸ್ಸಾಂನಲ್ಲಿದ್ದ 1,281 ಮದರಸಾ ಶಿಕ್ಷಣ(Madrasas Education) ಇಂದಿನಿಂದ ಮಿಡ್ಲ್ ಇಂಗ್ಲೀಷ್(Middle English) ಸ್ಕೂಲ್ ಆಗಿ ಪರಿವರ್ತಿಸಲಾಗಿದೆ. ಸರ್ಕಾರದ ಖರ್ಚಿನಲ್ಲಿ ಮದರಸಾ ನಡೆಸಲು ಸಾಧ್ಯವಿಲ್ಲ. ಡಾಕ್ಟರ್, ಎಂಜಿನೀಯರ್ ಸೇರಿದಂತೆ ಹಲವು ಪ್ರತಭಾನ್ವಿತರನ್ನು ಸಮಾಜಕ್ಕೆ ನೀಡುವ ಕೆಲಸ ಸರ್ಕಾರಿ ಅನುದಾನಿತ ಶಾಲೆಗಳಲ್ಲಾಗಬೇಕು. ಇದರ ಬದಲು ಯಾವುದೇ ಧಾರ್ಮಿಕ ಮುಖಂಡರನ್ನು ಸೃಷ್ಟಿಸುವ ಕೆಲಸಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ ಎಂಬು ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು. ಬಳಿಕ ಅನಧೀಕೃತ ಮದರಸಾಗಳ ಮೇಲೆ ದಾಳಿ ಆರಂಭಿಸಿದ ಅಸ್ಸಾಂ ಸರ್ಕಾರ, ಇದೀಗ 1,281 ಮದರಸಾ ಶಾಲೆಗಳನ್ನು ಎಲ್ಲಾ ಸಮದಾಯದವರು ಕಲಿಯುವ ಸಾಮಾನ್ಯ ಸರ್ಕಾರಿ ಶಾಲೆಯಾಗಿ ಪರಿವರ್ತಿಸಿದ್ದಾರೆ.

ಅಸ್ಸಾಂ ಸೆಕೆಂಡರಿ ಬೋರ್ಡ್ ಎಜುಕೇಶನ್( SEBA) ಈ ಆದೇಶ ಹೊರಡಿಸಿದೆ. ಅಸ್ಸಾಂ ಶಿಕ್ಷಣ ಸಚಿವ ರನೋಜ್ ಪೆಗು ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. 1,281 ಮದರಾಸ ಶಾಲೆಗಳನ್ನು ಮಿಡ್ಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆಗಿ ಪರಿವರ್ತಿಸಲಾಗಿದೆ. ಯಾವೆಲ್ಲಾ ಮದಸಾಗಳನ್ನು ಸಾಮಾನ್ಯ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತಿಸಲಾಗಿದೆ ಅನ್ನೋ ಮಾಹಿತಿಯನ್ನು ಶಿಕ್ಷಣ ಸಚಿವರು ನೀಡಿದ್ದರೆ.

ಒವೈಸಿ ಪೊಲೀಸ್ ಬೆದರಿಕೆ ಪ್ರಕರಣ ಅಸ್ಸಾಂನಲ್ಲಾಗಿದ್ರೆ ಐದೇ ನಿಮಿಷದಲ್ಲಿ ಸೆಟ್ಲ್; ಸಿಎಂ ಹಿಮಂತ ಎಚ್ಚರಿಕೆ!

ಶಿಕ್ಷಣ ಕ್ಷೇತ್ರದಲ್ಲಿ ಏಕರೂಪತೆ ತರಲು ಅಸ್ಸಾಂ ಸರ್ಕಾರ ಕಳೆದ ಒಂದು ವರ್ಷದಿಂದ ನಿರಂತರವಾಗಿ ಕೆಲಸ ಮಾಡುತ್ತಿದೆ. ಅಸ್ಸಾಂನಲ್ಲಿರುವ ಮದರಾಸಗಳು ಸಾರ್ವಜನಿಕ ಶಾಲೆಯಾಗಬೇಕು. ಮೌಲ್ವಿ, ಮುಲ್ಲಾಗಳನ್ನು ಸೃಷ್ಟಿಸಲು ಸರ್ಕಾರದಿಂದ ಅನುದಾನ ನೀಡಲು ಸಾಧ್ಯವಿಲ್ಲ. ಸರ್ಕಾರ ಆರ್ಥಿಕ ಅನುದಾನ ನೀಡುವ ಶಾಲೆಗಳಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಇರಬೇಕು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು. ಇದರಂತೆ ಆರಂಭಿಕ ಹಂತದಲ್ಲಿ ಅನಧಿಕೃತ ಮದರಸಾಗಳ ಮೇಲೆ ದಾಳಿ ಆರಂಭಿಸಲಾಗಿತ್ತು. ಅಸ್ಸಾಂನಲ್ಲಿನ ಅನಧಿಕೃತ ಮದಸರಾಗಳನ್ನು ಬಂದ್ ಮಾಡಲಾಗಿತ್ತು.

 

 

ಮದರಸಾದಲ್ಲಿ ಕಲಿಯುವ ಮಕ್ಕಳು ಮುಖ್ಯವಾಹನಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ.ಹೀಗಾಗಿ ಎಲ್ಲಾ ಮದರಸಾಗಳಲ್ಲಿ ಶಿಕ್ಷಣ ಮುಖ್ಯವಾಹಿನಿ ಶಿಕ್ಷಣದಲ್ಲೇ ಇರಬೇಕು. ಮಕ್ಕಳು ಪ್ರವರ್ಧಮಾನಕ್ಕೆ ಬಂದಾಗ ತಾವು ಏನಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಆದರೆ ಚಿಕ್ಕ ವಯಸ್ಸಿನಲ್ಲೇ ಒತ್ತಾಯಪೂರ್ಕವಾಗಿ ಅವರ ಮೇಲೆ ನಮ್ಮ ಉದ್ದೇಶ ಈಡೇರಿಸಿಕೊಳ್ಳುವುದು ತಪ್ಪು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.

ಬಹುಪತ್ನಿತ್ವ ನಿಷೇಧಕ್ಕೆ ಮುಂದಾದ ಅಸ್ಸಾಂ ಸರ್ಕಾರ, ಮಸೂದೆ ಮಂಡನೆಗೆ ತಯಾರಿ!

ಹಿಮಂತ ಬಿಸ್ವಾ ಶರ್ಮಾ ನಿರ್ಧಾರಕ್ಕೆ ಮುಸ್ಲಿಮ್ ಸಮುದಾಯ ಭಾರಿ ವಿರೋಧ ವ್ಯಕ್ತಪಡಿಸಿದೆ. ಮದರಾಸಗಳು ಧಾರ್ಮಿಕ ಹಕ್ಕು ಎಂದು ವಾದ ಮಾಡಿದೆ. ಈ ಕುರಿತು ಮುಸ್ಲಿಂ ಸಮುದಾಯಗಳು ಕೋರ್ಟ್ ಮೆಟ್ಟಿಲೇರಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್