ತರಕಾರಿ ಬೆಲೆ ಏರಿಕೆಗೆ ''ಮಿಯಾ'' ಮುಸ್ಲಿಂ ವ್ಯಾಪಾರಿಗಳೇ ಕಾರಣ: ಅಸ್ಸಾಂ ಸಿಎಂ

By BK AshwinFirst Published Jul 15, 2023, 2:29 PM IST
Highlights

ಮುಸ್ಲಿಮ್ ತರಕಾರಿ ಮಾರಾಟಗಾರರು ತರಕಾರಿ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ವಿವಾದ ಹುಟ್ಟುಹಾಕಿದ್ದಾರೆ.

ಹೊಸದಿಲ್ಲಿ (ಜುಲೈ 15, 2023): ಇತ್ತೀಚೆಗೆ ದೇಶದ ಬಹುತೇಕ ಭಾಗಗಳಲ್ಲಿ ತರಕಾರಿ ಮುಂತಾದ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆ ಉಂಟಾಗಿದೆ. ತರಕಾರಿಗಳ ಬೆಲೆ ಏರಿಕೆಗೆ ‘’ಮಿಯಾ’’ ಮುಸ್ಲಿಂ ಮಾರಾಟಗಾರರೇ ಕಾರಣ ಎಂದು  ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದೂಷಿಸಿದ್ದಾರೆ. 

ಮುಸ್ಲಿಮ್ ತರಕಾರಿ ಮಾರಾಟಗಾರರು ತರಕಾರಿ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ವಿವಾದ ಹುಟ್ಟುಹಾಕಿದ್ದಾರೆ. ಮತ್ತು "ಅಸ್ಸಾಮಿ ಜನರು" ತರಕಾರಿಗಳನ್ನು ಮಾರಾಟ ಮಾಡಿದರೆ, ಅವರು ಎಂದಿಗೂ "ತಮ್ಮ ಅಸ್ಸಾಮಿ ಜನರಿಗೆ" ಹೆಚ್ಚು ಶುಲ್ಕ ವಿಧಿಸುವುದಿಲ್ಲ ಎಂದೂ ಹೇಳಿದ್ದಾರೆ. 

ಇದನ್ನು ಓದಿ: ಅಲ್ಪಸಂಖ್ಯಾತರಿಗೆ ಕಿರುಕುಳ ವಿಚಾರ: ಭಾರತ​ದಲ್ಲಿನ ‘ಹುಸೇನ್‌ ಒಬಾಮ’ಗಳ ಮೇಲೆ ಕ್ರಮ; ಅಸ್ಸಾಂ ಸಿಎಂ ಪ್ರತಿಕ್ರಿಯೆ

"ತರಕಾರಿಗಳ ಬೆಲೆಯನ್ನು ಇಷ್ಟು ಹೆಚ್ಚಿಸಿದ ಜನರು ಯಾರು? ಅವರು ಹೆಚ್ಚಿನ ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡುವ ಮಿಯಾ ವ್ಯಾಪಾರಿಗಳು" ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ದೂಷಿಸಿದ್ದಾರೆ. ಸ್ಥಳೀಯ ಭಾಷೆಯಲ್ಲಿ,  'ಮಿಯಾ' ಅಂದರೆ ಅಸ್ಸಾಂನಲ್ಲಿ ವಾಸಿಸುವ ಬಂಗಾಳಿ ಮಾತನಾಡುವ ಮುಸ್ಲಿಮರು. ಅವರೆಲ್ಲ ಮೂಲತಃ ಬಾಂಗ್ಲಾದೇಶದಿಂದ ವಲಸೆ ಬಂದವರು ಎಂದು ನಂಬಲಾಗಿದೆ. ಅಸ್ಸಾಂ ಮುಖ್ಯಮಂತ್ರಿಯು ಮಿಯಾ ಸಮುದಾಯವನ್ನು "ಅತ್ಯಂತ ಕೋಮುವಾದಿ" ಎಂದು ಆಗಾಗ್ಗೆ ಟೀಕೆ ಮಾಡುತ್ತಿದ್ದಾರೆ. ಅವರು ಅಸ್ಸಾಮಿ ಸಂಸ್ಕೃತಿ ಮತ್ತು ಭಾಷೆಯನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅವರು 'ಹೊರಗಿನವರು' ಎಂದೂ ಅಸ್ಸಾಂ ಸಿಎಂ ಸೂಚಿಸಿದ್ದಾರೆ.

"ಮಿಯಾ ವ್ಯಾಪಾರಿಗಳು ಗುವಾಹಟಿಯಲ್ಲಿ ಅಸ್ಸಾಮಿ ಜನರಿಂದ ತರಕಾರಿಗಳಿಗೆ ಹೆಚ್ಚಿನ ಬೆಲೆಯನ್ನು ವಸೂಲಿ ಮಾಡುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಅಸ್ಸಾಮಿ ವ್ಯಾಪಾರಿಗಳು ಇಂದು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರೆ, ಅವರು ತಮ್ಮ ಅಸ್ಸಾಮಿ ಜನರಿಂದ ಎಂದಿಗೂ ಹೆಚ್ಚಿನ ಶುಲ್ಕ ವಿಧಿಸುತ್ತಿರಲಿಲ್ಲ" ಎಂದು ಅಸ್ಸಾಂ ಸಿಎಂ ಹೇಳಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: ಇನ್ನೂ 300 ಮದ್ರಸಾ ಬಂದ್‌ ಆಗುತ್ತೆ: ಅಸಾದುದ್ದೀನ್‌ ಓವೈಸಿಗೆ ಅಸ್ಸಾಂ ಸಿಎಂ ಚಾಲೆಂಜ್‌

ಅಸಾದುದ್ದೀನ್ ಓವೈಸಿ ತಿರುಗೇಟು
ಅಸ್ಸಾಂ ಸಿಎಂ ಆರೋಪಕ್ಕೆ ಶುಕ್ರವಾರ ರಾತ್ರಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ತಿರುಗೇಟು ನೀಡಿದ್ದಾರೆ. ಬಹುಶಃ ಅವರು ತಮ್ಮ ವೈಯಕ್ತಿಕ ವೈಫಲ್ಯಗಳನ್ನು "ಮಿಯಾ ಭಾಯ್" ಮೇಲೆ ದೂಷಿಸುತ್ತಾರೆ ಎಂದೂ ವ್ಯಂಗ್ಯವಾಡಿದ್ದಾರೆ. ಬಿಬಿಸಿ ವರದಿಯ ಟ್ವೀಟ್‌ ಅನನ್ಉ ಉಲ್ಲೇಖಿಸಿ ಟ್ವಿಟ್ಟರ್‌ನಲ್ಲೇ ಅಸ್ಸಾಂ ಸಿಎಂಗೆ ಪ್ರತ್ಯುತ್ತರ ನೀಡಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್‌ ಓವೈಸಿ, ಎಮ್ಮೆ ಹಾಲು ಕೊಡದಿದ್ದರೂ ಅಥವಾ ಕೋಳಿ ಮೊಟ್ಟೆ ಇಡದಿದ್ದರೂ ಮಿಯಾಜಿಯನ್ನು ದೂಷಿಸುವ ಇಂತಹ ಮಂಡಲಿ (ಗುಂಪು) ದೇಶದಲ್ಲಿದೆ. ಬಹುಶಃ ಅವರು ತಮ್ಮ 'ವೈಯಕ್ತಿಕ' ವೈಫಲ್ಯಗಳನ್ನು ಮಿಯಾ ಭಾಯಿಯ ಮೇಲೆ 
ಆರೋಪಿಸುತ್ತಾರೆ’’ ಎಂದು ಲೇವಡಿ ಮಾಡಿದ್ದಾರೆ.

  ಪ್ರಧಾನಿ ಮತ್ತು ವಿದೇಶಿ ಮುಸ್ಲಿಮರ ನಡುವೆ ಆಳವಾದ ಸ್ನೇಹವಿದೆ ಎಂದು ಹೇಳಿದರು. "ಟೊಮ್ಯಾಟೊ, ಪಾಲಕ, ಆಲೂಗಡ್ಡೆ ಇತ್ಯಾದಿಗಳನ್ನು ಕೇಳುವ ಮೂಲಕ ನಿರ್ವಹಿಸಿ." ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಗೆ ಪ್ರಧಾನಿಯವರ ಇತ್ತೀಚಿನ ಭೇಟಿಗಳನ್ನು ಉಲ್ಲೇಖಿಸಿ ಅವರು ವ್ಯಂಗ್ಯವಾಡಿದರು.

देश में एक ऐसी मंडिली है जिसके घर अगर भैंस दूध ना दे या मुर्ग़ी अण्डा ना दे तो उसका इल्ज़ाम भी मियाँ जी पर ही लगा देंगे। शायद अपने “निजी” नाकामियों का ठीकरा भी मियाँ भाई के सर ही फोड़ते होंगे।आज कल मोदी जी की विदेशी मुसलमानों से गहरी यारी चल रही है, उन्हीं से कुछ टमाटर, पालक, आलू… https://t.co/1MtjCnrmDT

— Asaduddin Owaisi (@asadowaisi)

ಇದನ್ನೂ ಓದಿ: ಬಾಲ್ಯವಿವಾಹಕ್ಕೆ ಬ್ರೇಕ್‌ ಬೆನ್ನಲ್ಲೇ ಬಹುಪತ್ನಿತ್ವ ಬ್ಯಾನ್‌ ಮಾಡಲು ಮುಂದಾದ ಅಸ್ಸಾಂ ಸಿಎಂ

ಅಲ್ಲದೆ, ಮೋದಿಗೂ ವ್ಯಂಗ್ಯವಾಡಿದ ಅಸಾದುದ್ದೀನ್‌ ಓವೈಸಿ,   ಪ್ರಧಾನಿ ಮತ್ತು ವಿದೇಶಿ ಮುಸ್ಲಿಮರ ನಡುವೆ ಆಳವಾದ ಸ್ನೇಹವಿದೆ. "ಟೊಮ್ಯಾಟೊ, ಪಾಲಕ, ಆಲೂಗಡ್ಡೆ ಇತ್ಯಾದಿಗಳನ್ನು ಕೇಳುವ ಮೂಲಕ (ಬೆಲೆ ಏರಿಕೆ) ನಿರ್ವಹಿಸಿ’’ ಎಂದು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಗೆ ಪ್ರಧಾನಿಯವರ ಇತ್ತೀಚಿನ ಭೇಟಿಗಳನ್ನು ಉಲ್ಲೇಖಿಸಿ ವ್ಯಂಗ್ಯವಾದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯುಎಇಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಟರ್ಕಿಗೂ ಅಧಿಕೃತ ಪ್ರವಾಸ ಮಾಡಿದ್ದರು. 

ಇದನ್ನೂ ಓದಿ: ಶಾರುಖ್‌ ಖಾನ್‌ ನನಗೆ ಮಧ್ಯರಾತ್ರಿ 2 ಗಂಟೆಗೆ ಕರೆ ಮಾಡಿದ್ರು ಎಂದ ಅಸ್ಸಾಂ ಸಿಎಂ..!

click me!