
ಹೈದರಾಬಾದ್ (ಏ.28): ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವನ್ನು ಮತ್ತೊಮ್ಮೆ ಟೀಕಿಸಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಪಾಕಿಸ್ತಾನ ಭಾರತಕ್ಕಿಂತ ಅರ್ಧ ಶತಮಾನ ಹಿಂದಿದೆ ಎಂದು ಟೀಕಿಸಿದ್ದಾರೆ. ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಮಹಾರಾಷ್ಟ್ರದ ಪ್ರಭಾನಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಓವೈಸಿ ಮಾತನಾಡುವ ವೇಳೆ ಪಾಕಿಸ್ತಾನವನ್ನು ಟೀಕಿಸಿದ್ದಾರೆ.
ಹೈದರಾಬಾದ್ ಸಂಸದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವನ್ನು ತೀವ್ರವಾಗಿ ಟೀಕಿಸಿದರು. ಅವರು ಪಾಕಿಸ್ತಾನಿ ನಾಯಕರ ಬೆದರಿಕೆಗಳನ್ನು ಸಹ ತಳ್ಳಿಹಾಕಿದರು. "ನೀವು ಕೇವಲ ಅರ್ಧ ಗಂಟೆ ಹಿಂದಿಲ್ಲ, ನೀವು ಭಾರತಕ್ಕಿಂತ ಅರ್ಧ ಶತಮಾನ ಹಿಂದಿದ್ದೀರಿ. ನಿಮ್ಮ ದೇಶದ ಬಜೆಟ್ ನಮ್ಮ ಮಿಲಿಟರಿ ಬಜೆಟ್ಗೆ ಸಮನಾಗಿರುವುದಕ್ಕೆ ಸಾಧ್ಯವೇ ಇಲ್ಲ" ಎಂದು ಅವರು ಹೇಳಿದರು.
"ಪಾಕಿಸ್ತಾನ ಪದೇ ಪದೇ ತಮ್ಮ ಬಳಿ ಪರಮಾಣು ಬಾಂಬ್ಗಳಿವೆ, ಪರಮಾಣು ಬಾಂಬ್ಗಳಿವೆ ಎಂದು ಹೇಳುತ್ತದೆ. ನೆನಪಿಡಿ, ನೀವು ಬೇರೆ ದೇಶಕ್ಕೆ ಹೋಗಿ ಮುಗ್ಧ ಜನರನ್ನು ಕೊಂದರೆ, ಯಾವುದೇ ದೇಶವು ಮೌನವಾಗಿರುವುದಿಲ್ಲ' ಎಂದು ಹೇಳಿದ್ದಾರೆ. ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಕೊಲ್ಲುವ ಮೊದಲು ಅವರ ಧರ್ಮವನ್ನು ಕೇಳಿದರು ಎಂದು AIMIM ಮುಖ್ಯಸ್ಥ ಪುನರುಚ್ಚರಿಸಿದರು. "ನೀವು ಯಾವ ಧರ್ಮದ ಬಗ್ಗೆ ಮಾತನಾಡುತ್ತಿದ್ದೀರಿ? ನೀವು ಖವಾರಿಜ್ಗಳಿಗಿಂತ ಕೆಟ್ಟವರು. ಈ ಕೃತ್ಯವು ನೀವು ಐಸಿಸ್ನ ಉತ್ತರಾಧಿಕಾರಿಗಳು ಎಂದು ತೋರಿಸುತ್ತದೆ" ಎಂದು ಹೇಳಿದ್ದಾರೆ,
ಭಾರತದ ಮೇಲೆ ಪರಮಾಣು ಬಾಂಬ್ಗಳ ಬೆದರಿಕೆ ಹಾಕುತ್ತಿರುವ ಪಾಕಿಸ್ತಾನಿ ನಾಯಕ ಅದರಲ್ಲೂ ಬಲಾವಲ್ ಬುಟ್ಟೋ ವಿರುದ್ಧವೂ ಓವೈಸಿ ವಾಗ್ದಾಳಿ ನಡೆಸಿದ್ದಾರೆ. "ನೀವು ಒಂದು ದೇಶಕ್ಕೆ ನುಗ್ಗಿ ಅಮಾಯಕರನ್ನು ಕೊಂದರೆ, ಯಾವುದೇ ದೇಶ ಅಧಿಕಾರದಲ್ಲಿದ್ದರೂ ಮೌನವಾಗಿರುವುದಿಲ್ಲ ಎಂಬುದನ್ನು ನೆನಪಿಡಿ. ನೀವು ನಮ್ಮ ದೇಶದ ಮೇಲೆ ದಾಳಿ ಮಾಡಿದ ರೀತಿ, ಜನರನ್ನು ಅವರ ಧರ್ಮವನ್ನು ಕೇಳಿದ ರೀತಿ ಮತ್ತು ಗುಂಡು ಹಾರಿಸಿದ ರೀತಿ, ನೀವು ಯಾವ ಧರ್ಮದ ಬಗ್ಗೆ ಮಾತನಾಡುತ್ತಿದ್ದೀರಿ? ನೀವು ಖವಾರಿಜ್ (ವಿಕೃತ ಎಂದು ಪರಿಗಣಿಸಲಾದ ಇಸ್ಲಾಮಿಕ್ ಪಂಥ) ಗಿಂತ ಕೆಟ್ಟವರು. ನೀವು ಐಸಿಸ್ ಸಹಾನುಭೂತಿ ಹೊಂದಿರುವವರು' ಎಂದು ವಾಗ್ದಾಳಿ ಮಾಡಿದ್ದಾರೆ.
2007ರ ಡಿಸೆಂಬರ್ 30 ರಂದು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲೇ ಬೆನಜೀರ್ ಭುಟ್ಟೋ ಅವರನ್ನು ಹತ್ಯೆ ಮಾಡಲಾಯಿತು. ಆತ್ಮಹತ್ಯಾ ಬಾಂಬ್ ದಾಳಿಯು ಅಲ್-ಖೈದಾ ಮತ್ತು ತಾಲಿಬಾನ್ ಶಾಖೆ ಸೇರಿದಂತೆ ಹಲವಾರು ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ, ಆದರೆ ಪ್ರಕರಣವು ಬಗೆಹರಿಯದೆ ಉಳಿದಿದೆ.
ಅಫ್ರಿದಿ ಮೇಲೆ ತಿರುಗಿಬಿದ್ದ ಅಸಾದುದ್ದೀನ್ ಒವೈಸಿ! ಅವನೊಬ್ಬ ಜೋಕರ್ ಎಂದ AIMIM ಮುಖ್ಯಸ್ಥ
ಬಿಲಾವಲ್ ಭುಟ್ಟೋ ಅವರ ಹೇಳಿಕೆಗೆ ಭಾರತೀಯ ನಾಯಕರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, "ಅವರ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಲು ಹೇಳಿ, ಅವರು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಾಕು ಸಾಕು... ನಾವು ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ. ಈಗ ಕೆಲವು ದಿನಗಳವರೆಗೆ ಕಾಯಿರಿ" ಎಂದು ಹೇಳಿದರು. ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಹೇಳಿಕೆಗಳನ್ನು "ಪ್ರಚೋದನಕಾರಿ" ಎಂದು ಕರೆದರು. "ನಮಗೆ ಪಾಕಿಸ್ತಾನದ ಮೇಲೆ ಯಾವುದೇ ಉದ್ದೇಶವಿಲ್ಲ, ಆದರೆ ಅವರು ಏನಾದರೂ ಮಾಡಿದರೆ, ಅವರು ಪ್ರತಿಕ್ರಿಯೆಗೆ ಸಿದ್ಧರಾಗಿರಬೇಕು. ರಕ್ತ ಹರಿಯುವುದಾದರೆ, ಅದು ನಮ್ಮದಕ್ಕಿಂತ ಅವರ ಕಡೆಯಿಂದ ಹೆಚ್ಚು ಹರಿಯಬಹುದು" ಎಂದು ಪಾಕ್ ನಾಯಕನ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ತರೂರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Pahalgam Attack: 'ಧರ್ಮ ಕೇಳಿ ಕೊಲ್ಲಲಾಗಿದೆ..' ಹುರಿಯತ್ ಒಪ್ಪಿಕೊಂಡರೂ, ನಮ್ಮವರು ಒಪ್ಪಿಕೊಳ್ಳೋದಿಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ