
ತಿರುಮಲ: ಆಂಧ್ರಪ್ರದೇಶದ ಜಗದ್ವಿಖ್ಯಾತ ತಿರುಪತಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗಾಗಿ ದೇವಾಲಯ ಆಡಳಿತ ಮಂಡಳಿಯು ಮೊಬೈಲ್ ಕಂಟೇನರ್ಗಳಲ್ಲಿ ತಾತ್ಕಾಲಿಕ ವಸತಿ ಕೇಂದ್ರಗಳನ್ನು ಪ್ರಾರಂಭಿಸಿದೆ. ದೇವಸ್ಥಾನಕ್ಕೆ ಹರಿದು ಬರುವ ಅಪಾರ ಭಕ್ತರಿಗೆ ತಾತ್ಕಾಲಿಕವಾಗಿ ತಂಗಲು ಆಶ್ರಯ ಕಲ್ಪಿಸುವ ಉದ್ದೇಶದಿಂದ ವಿಶಾಖಪಟ್ಟಣದ ಮೂರ್ತಿ ಎಂಬುವವರು ಈ ಕಂಟೇನರ್ಗಳನ್ನು ದಾನವಾಗಿ ನೀಡಿದ್ದಾರೆ. ತಾಂತ್ರಿಕವಾಗಿ ಕಡಿಮೆ ಜಾಗದಲ್ಲಿಯೇ ಹೆಚ್ಚು ಮಂದಿ ತಂಗುವ ರೀತಿಯಾಗಿ ಈ ಕಂಟೇನರ್ಗಳನ್ನು ನಿರ್ಮಿಸಲಾಗಿದೆ.
ಇಲ್ಲಿ ಮಹಡಿ ಮಂಚಗಳನ್ನಿರಿಸಲಾಗಿದ್ದು ಕೆಳ ಮಂಚದಲ್ಲಿ ಮತ್ತು ಮೇಲ್ಭಾಗದಲ್ಲಿ ತಲಾ ಇಬ್ಬರು ಮಲಗಿಕೊಳ್ಳಬಹುದಾಗಿದೆ. ಇಲ್ಲಿ ಫ್ಯಾನ್ ಮತ್ತು ಎ.ಸಿ ಸೌಲಭ್ಯವೂ ಇದ್ದು ಹೊರಗಿನಿಂದ ಚಿಕ್ಕ ಪೆಟ್ಟಿಗೆಯಾಕಾರದಲ್ಲಿ ಮೊಬೈಲ್ ಕಂಟೇನರ್ ಕಾಣಿಸಿಕೊಳ್ಳುತ್ತದೆ. ಟಿಟಿಡಿ ಅಧ್ಯಕ್ಷ ವೈ.ವಿ ಸುಬಾರೆಡ್ಡಿ ಹಾಗೂ ಇವಿಒ ಧರ್ಮ ರೆಡ್ಡಿ ಅವರು 2 ಮೊಬೈಲ್ ಕಂಟೇನರ್ಗಳನ್ನು ಉದ್ಘಾಟಿಸಿದ್ದಾರೆ. ಈ ಪೈಕಿ ಒಂದನ್ನು ಟಿಟಿಡಿಯ ಸಾರಿಗೆ ಸಿಬ್ಬಂದಿಗಳಿಗಾಗಿ ಹಾಗೂ ಇನ್ನೊಂದನ್ನು ಭಕ್ತಾದಿಗಳಿಗಾಗಿ ನಿಯೋಜನೆ ಮಾಡಲಾಗಿದೆ. ಹೆಚ್ಚು ದಟ್ಟಣೆ ಇರುವ ಜಾಗದಲ್ಲಿ ಕಂಟೇನರ್ ಇರಲಿದ್ದು, ಅಲ್ಲಿ ಭಕ್ತರು ತಾತ್ಕಾಲಿಕವಾಗಿ ವಿಶ್ರಮಿಸಬಹುದಾಗಿದೆ.
2,000 ರೂ. ನೋಟ್ ಎಕ್ಸ್ಚೇಂಜ್ ಹೆಸರಲ್ಲಿ 25 ಲಕ್ಷ ರೂ. ವಂಚನೆ: ತಿರುಪತಿಗೆ ಕರೆಸಿ ನಾಮ ಹಾಕಿದ ಖದೀಮರು
ತಿರುಪತಿ ದೇವಳಕ್ಕೆ ಕೆಎಂಎಫ್ ನಂದಿನಿ ತುಪ್ಪ ನೀಡುತ್ತಿಲ್ಲ: ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ