ಕೇರಳದ ಕೋವಿಡ್ ಸೋಂಕಿತೆ ಮೇಲೆ ಆ್ಯಂಬುಲೆನ್ಸ್ ಸಹಾಯಕನಿಂದ ಲೈಂಗಿಕ ಕಿರುಕುಳ!

Published : May 15, 2021, 09:54 PM ISTUpdated : May 15, 2021, 09:57 PM IST
ಕೇರಳದ ಕೋವಿಡ್ ಸೋಂಕಿತೆ ಮೇಲೆ ಆ್ಯಂಬುಲೆನ್ಸ್ ಸಹಾಯಕನಿಂದ ಲೈಂಗಿಕ ಕಿರುಕುಳ!

ಸಾರಾಂಶ

ಕೋವಿಡ್ ಸೋಂಕಿತೆಯನ್ನು ಕರೆದೊಯ್ಯುವ ವೇಳೆ ಲೈಂಗಿಕ ಕಿರುಕುಳ ತೀವ್ರ ಅಸ್ವಸ್ಥಗೊಂಡಿದ್ದ ಸೋಂಕಿತೆ ಚೇತರಿಸಿಕೊಂಡ ಬಳಿಕ ದೂರು ಆರೋಪಿ ಬಂಧಿಸಿದ ಪೊಲೀಸ್

ಕೊಚ್ಚಿ(ಮೇ.15): ಕೊರೋನಾ ಸೋಂಕಿತರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಘಟನೆಗಳು ವರದಿಯಾಗಿದೆ. ಇದೀಗ ಕೇರಳದಲ್ಲಿ ಸೋಂಕಿತೆ ಮೇಲೆ ನಡೆದ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಕೊರೋನಾದಿಂದ ತೀವ್ರ ಅಸ್ವಸ್ಥಗೊಂಡಿದ್ದ ಸೋಂಕಿತೆಗೆ ಕೇರಳದ ಮಲ್ಲಪ್ಪುರಂ ಜಿಲ್ಲೆಯ ಆ್ಯಂಬುಲೆನ್ಸ್ ವಾಹನದ ಸಹಾಯಕ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

ದೆಹಲಿಯಲ್ಲಿ ಮತ್ತೊಂದು ಕ್ರೂರ ಘಟನೆ: ಯುವತಿ ಮೇಲೆ 25 ಜನರಿಂದ ಸಾಮೂಹಿಕ ಅತ್ಯಾಚಾರ

ಘಟನೆ ನಡೆದಿರುವುದು ಎಪ್ರಿಲ್ 27 ರಂದು. ಆದರೆ ಪ್ರಕರಣ ಬೆಳೆಕಿಗೆ ಬಂದಿರುವುದು ಮೇ.13ರಂದು. ಕಾರಣ ಯುವತಿ ಗುಣಮುಖರಾದ ಬಳಿಕ ಘಟನೆ ಬಹಿರಂಗ ಪಡಿಸಿದ್ದಾರೆ. 

ಘಟನೆ ವಿವರ:

ಕೊರೋನಾ ಕಾರಣ ಯುವತಿ ತೀವ್ರ ಅಸ್ವಸ್ಥಗೊಂಡಿದ್ದರು. ಹೀಗಾಗಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 27 ರಂದು ವೈದ್ಯರು ಯುವತಿಗೆ MRI ಸ್ಕ್ಯಾನ್ ಮಾಡಿಸಲು ಸೂಚಿಸಿದ್ದಾರೆ.

ಖಾಸಗಿ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್‌ಗೆ ಆ್ಯಂಬುಲೆನ್ಸ್‌ನಲ್ಲಿ ಯುವತಿಯನ್ನು ಕರೆದೊಯ್ಯಲು ವ್ಯವಸ್ಥೆ ಮಾಡಿದ್ದಾರೆ. ಸ್ಕ್ಯಾನಿಂಗ್‌ಗಾಗಿ ಯುವತಿಯನ್ನು ಕರೆದೊಯ್ಯುವ ವೇಳೆ ಆ್ಯಂಬುಲೆನ್ಸ್ ಸಹಾಯಕ, ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ಸಾವು ಬದುಕಿನ ನಡುವೆ ಹೋರಾಡುವ ಪರಿಸ್ಥಿತಿಯಲ್ಲಿದ್ದ ಕಾರಣ ವಿರೋಧಿಸಲು ಸಾಧ್ಯವಾಗದೆ, ಮಾತನಾಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದಳು.

ಸ್ಕ್ಯಾನಿಂಗ್ ಬಳಿಕ ಯುವತಿಗೆ ಚಿಕಿತ್ಸೆ ಮುಂದುವರಿಸಲಾಯಿತು. 15 ದಿನಗಳ ಸತತ ಚಿಕಿತ್ಸೆ ಬಳಿಕ ಯುವತಿ ಚೇತರಿಸಿಕೊಂಡಿದ್ದಾಳೆ. ಮೇ.13 ರಂದು ನಡೆದ ಘಟನೆಯನ್ನು ವೈದ್ಯರ ಬಳಿಕ ಹೇಳಿಕೊಂಡಿದ್ದಾಳೆ. ತಕ್ಷಣವೇ ವೈದ್ಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿದ ಪೊಲೀಸರು ಆಸ್ಪತ್ರೆ ಆ್ಯಂಬುಲೆನ್ಸ್ ಸಹಾಯಕ ಪ್ರಶಾಂತ್(33) ಅರೆಸ್ಟ್ ಮಾಡಿದ್ದಾರೆ.

2020ರಲ್ಲಿ ಸೋಂಕಿತ ಮೇಲೆ ಅತ್ಯಾಚಾರ:
2020ರಲ್ಲಿ ಕೊರೋನಾ ಸೋಂಕಿತೆಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುವ ವೇಳೆ ಆ್ಯಂಬುಲೆನ್ಸ್ ಡ್ರೈವರ್ ಅತ್ಯಾಚಾರ ಎಸಗಿದ್ದ. 19 ವರ್ಷದ ಸೋಂಕಿತ ಮೇಲೆ 29 ವರ್ಷದ ಡ್ರೈವರ್ ಅತ್ಯಾಚಾರ ಮಾಡಿದ್ದ. ಯುವತಿ ತಾಯಿ ನೀಡಿದ ದೂರಿನ ಆಧಾರದಲ್ಲಿ ಅತ್ಯಾಚರ ಎಸಗಿದ್ದ ಆರೋಪಿ ಡ್ರೈವರ್‌ನ್ನು ಪೊಲೀಸರು ಬಂಧಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೆವ್ವಗಳ ಬಗ್ಗೆ ಪಿಎಚ್‌ಡಿ ಮಾಡಲಿದ್ದಾರೆ ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ! ಘೋಸ್ಟ್ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದೆಯೇ?
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!