'ಅಜ್ಮೇರ್‌ ದರ್ಗಾ ಮೂಲತಃ ಶಿವ ದೇವಸ್ಥಾನ..' ಅರ್ಜಿ ಪುರಸ್ಕರಿಸಿದ ರಾಜಸ್ಥಾನ ಕೋರ್ಟ್‌, ನೋಟಿಸ್‌ ಜಾರಿ

Published : Nov 28, 2024, 10:54 AM IST
'ಅಜ್ಮೇರ್‌ ದರ್ಗಾ ಮೂಲತಃ ಶಿವ ದೇವಸ್ಥಾನ..' ಅರ್ಜಿ ಪುರಸ್ಕರಿಸಿದ ರಾಜಸ್ಥಾನ ಕೋರ್ಟ್‌, ನೋಟಿಸ್‌ ಜಾರಿ

ಸಾರಾಂಶ

ರಾಜಸ್ಥಾನದ ಅಜ್ಮೀರ್ ದರ್ಗಾವನ್ನು ಶಿವ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಲಾದ ಅರ್ಜಿಯನ್ನು ಅಜ್ಮೇರ್ ನ್ಯಾಯಾಲಯ ಪುರಸ್ಕರಿಸಿದೆ. ದರ್ಗಾ ಸಮಿತಿಯನ್ನು ತೆಗೆದುಹಾಕುವಂತೆ ಮತ್ತು ASI ಸಮೀಕ್ಷೆ ನಡೆಸುವಂತೆ ಮನವಿ ಮಾಡಲಾಗಿದೆ. ಮುಂದಿನ ವಿಚಾರಣೆ ಡಿಸೆಂಬರ್ 20 ರಂದು ನಡೆಯಲಿದೆ.

ಜೈಪುರ (ನ.28): ರಾಜಸ್ಥಾನದ ಅಜ್ಮೀರ್ ದರ್ಗಾವನ್ನು ಶಿವನ ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆ ಮತ್ತು ಅದನ್ನು ಭಗವಾನ್ ಶ್ರೀ ಸಂಕಟಮೋಚನ ಮಹಾದೇವ ವಿರಾಜಮಾನ ದೇವಸ್ಥಾನ ಎಂದು ಘೋಷಿಸಬೇಕು ಎಂದು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ರಾಜಸ್ಥಾನದ ಅಜ್ಮೇರ್‌ ಕೋರ್ಟ್‌ ಪುರಸ್ಕರಿಸಿದೆ. ಅದರೊಂದಿಗೆ ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಮುಸ್ಲಿಂ ಪಕ್ಷಕ್ಕೆ ಅಜ್ಮೇರ್‌ ನ್ಯಾಯಾಲಯವು ನವೆಂಬರ್‌ 27 ರಂದು ನೋಟಿಸ್‌ ಜಾರಿ ಮಾಡಿದೆ. ಸಿವಿಲ್ ನ್ಯಾಯಾಧೀಶ (ಕಿರಿಯ ವಿಭಾಗ) ಮನ್ ಮೋಹನ್ ಚಂದೇಲ್ ಅವರು ಈ ನಿರ್ದೇಶನ ನೀಡಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 20 ರಂದು ನಡೆಯಲಿದೆ.

ದರ್ಗಾ ಸಮಿತಿಯನ್ನು ಆವರಣದಿಂದ ತೆಗೆದುಹಾಕುವಂತೆ ಕೋರಿ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ವಕೀಲ ಶಶಿ ರಂಜನ್ ಕುಮಾರ್ ಸಿಂಗ್ ಮೂಲಕ ಮೊಕದ್ದಮೆ ಹೂಡಿದ್ದಾರೆ. ದರ್ಗಾದ ಸಮೀಕ್ಷೆಯನ್ನು ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಅಜ್ಮೀರ್ ದರ್ಗಾವು ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ ಸಮಾಧಿ ಸ್ಥಳವಾಗಿದೆ.

ಮನವಿಯ ಪ್ರಕಾರ, ಮುಖ್ಯ ಪ್ರವೇಶ ದ್ವಾರದ ಮೇಲ್ಛಾವಣಿಯ ವಿನ್ಯಾಸವು ಹಿಂದೂ ರಚನೆಯನ್ನು ಹೋಲುತ್ತದೆ, ಈ ಸ್ಥಳ ಮೂಲತಃ ದೇವಾಲಯವಾಗಿತ್ತು ಎಂದು ಸೂಚಿಸುತ್ತದೆ. ಈ ದರ್ಗಾದ ಚತ್ರೀಗಳ ವಸ್ತುಗಳು ಮತ್ತು ಶೈಲಿಯು ಅವರ ಹಿಂದೂ ಮೂಲವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅವರ ಅತ್ಯುತ್ತಮ ಮೇಲ್ಮೈ ಕೆತ್ತನೆಯು ದುರದೃಷ್ಟವಶಾತ್ ಬಣ್ಣದ ಕೋಟ್‌ಗಳು ಮತ್ತು ಬಿಳಿಯ ಬಣ್ಣದಿಂದ ಮರೆಮಾಡಲ್ಪಟ್ಟಿದೆ, ಅದು ತೆಗೆದ ನಂತರ ಅದರ ನಿಜವಾದ ಗುರುತು ಮತ್ತು ನೈಜತೆಯನ್ನು ಕಾಣಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ದೇಶದ ಸಾರ್ವಭೌಮತ್ವ, ಏಕತೆಗೆ ಧಕ್ಕೆ ತಂದ ಆರೋಪ; ಮೊಹಮ್ಮದ್ ಜುಬೇರ್ ವಿರುದ್ಧ ಪ್ರಕರಣ

ಅಜ್ಮೀರ್ ದರ್ಗಾವನ್ನು ಖಾಲಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಅದು ವಾದಿಸಿದೆ. ಬದಲಾಗಿ, ಹಿಂದೂ ಭಕ್ತರು ತಮ್ಮ ದೇವತೆಗಳನ್ನು ಪೂಜಿಸುತ್ತಿದ್ದ ಸ್ಥಳದಲ್ಲಿ ಮಹಾದೇವ ದೇವಾಲಯ ಮತ್ತು ಜೈನ ದೇವಾಲಯಗಳ ಅಸ್ತಿತ್ವವನ್ನು ಐತಿಹಾಸಿಕ ದಾಖಲೆಗಳು ಇವೆ ಎಂದು ಸೂಚಿಸಿವೆ. ಆದ್ದರಿಂದ, ವಿವಾದಿತ ಆಸ್ತಿಯ ಸ್ಥಳದಲ್ಲಿ ಭಗವಾನ್ ಶ್ರೀ ಸಂಕಟಮೋಚನ ಮಹಾದೇವ ವಿರಾಜಮಾನ ದೇವಸ್ಥಾನವನ್ನು ಪುನರ್ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ದಾವೆ ಕೋರಿದೆ.

Chitradurga: 20 ವರ್ಷದ ಯುವತಿಗೆ 40ರ ಅಂಕಲ್‌ ಜೊತೆ ಲವ್‌-ಮದುವೆ; ಅಳಿಯನ ಜೀವ ತೆಗೆದ ಪೋಷಕರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್