ಮಹಿಳಾ ಉಡುಗೆ ತೊಡುಗೆಯಲ್ಲಿ ಏರ್‌ಪೋರ್ಟ್ ಅಧಿಕಾರಿ ಶವ ಪತ್ತೆ, ಪತ್ನಿಗೆ ಆಘಾತ!

Published : Jun 25, 2024, 10:56 AM ISTUpdated : Jun 25, 2024, 10:57 AM IST
ಮಹಿಳಾ ಉಡುಗೆ ತೊಡುಗೆಯಲ್ಲಿ ಏರ್‌ಪೋರ್ಟ್ ಅಧಿಕಾರಿ ಶವ ಪತ್ತೆ, ಪತ್ನಿಗೆ ಆಘಾತ!

ಸಾರಾಂಶ

ಲಿಪ್‌ಸ್ಟಿಕ್, ಬಳೆ, ಒಳ ಉಡುಪು ಸೇರಿದಂತೆ ಮಹಿಳೆಯ ಉಡುಗೆ ತೊಡುಗೆಯಲ್ಲಿ ಏರ್‌ಪೋರ್ಟ್ ಅಧಿಕಾರಿ  ಶವ ಪತ್ತೆಯಾಗಿದೆ. ಪತ್ನಿ, ಕುಟುಂಬಸ್ಥರ ಜೊತೆ ಚೆನ್ನಾಗಿದ್ದ ಅಧಿಕಾರಿ, ಮಹಿಳೆ ಉಡುಗೆಯಲ್ಲಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.  

ಡೆಹ್ರಡೂನ್(ಜೂ.25) ವಿಮಾನ ನಿಲ್ದಾಣದಲ್ಲಿ ಹಿರಿಯ ಅಧಿಕಾರಿ. ಆದರೆ ಅಧಿಕಾರಿ ಮೃತದೇಹ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಕಾರಣ ದೇಹದಲ್ಲಿ ಮಹಿಳೆಯ ಉಡುಪು, ಕೈಗಳಲ್ಲಿ ಬಳೆ, ಲಿಪ್‌ಸ್ಟಿಕ್, ಬಿಂದಿ ಮೂಲಕ ಮಹಿಳಾ ಉಡುಗೆ ತೊಡುಗೆಯಲ್ಲಿ ಮೃತದೇಹ ಪತ್ತೆಯಾಗಿದೆ. ಡೆಹ್ರಡೂನ್ ವಿಮಾನ ನಿಲ್ದಾಣದಲ್ಲಿ ಅಧಿಕೃತ ಗೃಹದಲ್ಲಿ ಮೃತದೇಹ ಪತ್ತೆಯಾಗಿದೆ. ಇತ್ತ ಮೃತ ಅಧಿಕಾರಿ ಪತ್ನಿ ಆಘಾತಕ್ಕೊಳಗಾಗಿದ್ದಾರೆ.

ಇಬ್ಬರು ಆಪ್ತ ಸಂಬಂಧಿಕರ ಜೊತೆ ರಾತ್ರಿ ಊಟ ಮಾಡಿದ್ದ ವಿಮಾನ ನಿಲ್ದಾದ ಅಧಿಕಾರಿ ಬಳಿಕ ತಮ್ಮ ಕೋಣೆಯಲ್ಲಿ ಮಲಗಿದ್ದರು. ಇತ್ತ ಮತ್ತಿಬ್ಬರು ಬೇರೆ ಕೋಣೆಯಲ್ಲಿ ಮಲಗಿದ್ದರು. ಮರುದಿನ ಬೆಳಗ್ಗೆ 8 ಗಂಟೆಗೆ ಹತ್ತಿರದ ಮಾವಿನ ತೋಟಕ್ಕೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಮರುದಿನ ಬೆಳಕ್ಕೆ ಅದೆಷ್ಟೆ ಕರೆ ಮಾಡಿದರೂ, ಬಾಗಿಲು ಬಡಿದರೂ ಏರ್‌ಪೋರ್ಟ್ ಅಧಿಕಾರಿಯ ಸುಳಿವಿಲ್ಲ. ಹೀಗಾಗಿ ಇತರ ಸಹೋದ್ಯೋಗಿಗಳಿಗೆ ಮಾಹಿತಿ ನೀಡಲಾಯಿತು.

ಮಂಗಳಮುಖಿಯರು ಕಿರುಕುಳ ನೀಡಿದ್ದಾರೆಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಅಧಿಕಾರಿಯ ಅಧಿಕೃತ ಮನೆಗೆ ಆಗಮಿಸಿದ ಸಹದ್ಯೋಗಿಗಳು ಹಾಗೂ ಸಂಬಂಧಿಕರು ಕೋಣೆಯ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಈ ವೇಳೆ ದೃಶ್ಯ ನೋಡಿ ಆಘಾತವಾಗಿದೆ. ಅಧಿಕಾರಿ ಮಹಿಳೆಯ ಉಡುಪಿನ ದುಪ್ಪಟ್ಟಾದಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ಆದರೆ ಅಧಿಕಾರಿ ಮಹಿಳೆಯ ಉಡುಪು ಧರಿಸಿದ್ದಾರೆ. ಮೇಕ್ ಅಪ್ ಮಾಡಿಕೊಂಡಿದ್ದಾರೆ. ಲಿಪ್‌ಸ್ಟಿಕ್ ಹಾಕಿಕೊಂಡಿದ್ದಾರೆ. ಕೈಗಳಿಗೆ ಬಳೆ ಧರಿಸಿದ್ದಾರೆ. ಇಷ್ಟೇ ಇಲ್ಲ ಬ್ರಾ ಸೇರಿದಂತೆ ಒಳ ಉಡುಪನ್ನು ಧರಿಸಿದ್ದಾರೆ. 

ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಕೆ ಕಳುಹಿಸಿದ್ದಾರೆ. ಮೃತದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಇನ್ನು ಬದುಕು ಅಂತ್ಯಗೊಳಿಸಲು ಇತರ ಬಾಹ್ಯ ಕಾರಣಗಳು ಕಾಣುತ್ತಿಲ್ಲ. ಆದರೆ ಮಹಿಳಾ ಉಡುಪು ಧರಿಸಿ  ಬದುಕು ಅಂತ್ಯಗೊಳಿಸಿದ್ದೇಕೆ ಎಂದು ಅನುಮಾನ ಮೂಡತೊಡಗಿದೆ. ಕಾರಣ ಅಧಿಕಾರಿ ಪತ್ನಿ ಈ ಘಟನೆಯಿಂದ ಆಘಾತಕ್ಕೊಳಾಗಿದ್ದಾರೆ. ಒಂದೆಡೆ ಪತಿಯ ಸಾವು, ಮತ್ತೊಂದೆಡೆ ಮಹಿಳೆಯಂತೆ ಡ್ರೆಸ್ ಧರಿಸಿ ಮೃತಪಟ್ಟಿರುವ ಘಟನೆಯಿಂದ ತೀವ್ರವಾಗಿ ನೊಂದಿದ್ದಾರೆ. ಅಧಿಕಾರಿ ಇದುವರೆಗೂ ಎಲ್ಲೂ ಕೂಡ ಈ ರೀತಿಯ ಭಾವನೆಗಳನ್ನ ವ್ಯಕ್ತಪಡಿಸಿದ ಉದಾಹರಣೆ ಇಲ್ಲ ಎಂದು ಆಪ್ತರು ಹೇಳಿದ್ದಾರೆ. 

6 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಗಂಡ ಮಂಗಳಮುಖಿಯಾಗಿ ಪತ್ತೆ; ಸುಳಿವು ಕೊಟ್ಟ ಬಿಗ್‌ಬಾಸ್, ಪತಿ ವೇಷ ಕಂಡು ಪತ್ನಿ ಮೂರ್ಛೆ!

ಅಧಿಕಾರಿ ತಾನು ಮಹಿಳೆಯಾಗಬೇಕೆಂದು ಬಯಸಿರುವ ಸಾಧ್ಯತೆ ಇದೆ. ಆದರೆ ಕುಟುಂಬ, ಪತ್ನಿ ಹೀಗೆ ಹಲವು ಕಾರಣಗಳಿಂದ ಈ ಭಾವನೆ ಹೇಳಿಕೊಳ್ಳಲು ಸಾಧ್ಯವಾಗದೆ ಮೃತಪಟ್ಟಿರುವ ಸಾಧ್ಯತೆ ಇದೆ. ಈ ರೀತಿ ಕೆಲ ಘಟನೆಗಳು ನಡೆದಿದೆ ಎಂದು ಮನಶಾಸ್ತ್ರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ