ದಿಲ್ಲಿ ಮಾನ್ಸೂನ್‌ ಇಷ್ಟುತಡ: 15 ವರ್ಷದಲ್ಲಿ ಇದೇ ಮೊದಲು

Kannadaprabha News   | Asianet News
Published : Jul 03, 2021, 10:04 AM ISTUpdated : Jul 03, 2021, 10:14 AM IST
ದಿಲ್ಲಿ ಮಾನ್ಸೂನ್‌ ಇಷ್ಟುತಡ: 15 ವರ್ಷದಲ್ಲಿ ಇದೇ ಮೊದಲು

ಸಾರಾಂಶ

ದೇಶದ ಹಲವು ಭಾಗ​ಗ​ಳಲ್ಲಿ ಮುಂಗಾರು ಪ್ರವೇ​ಶ​ ದಿಲ್ಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳ ಜನ ಬಿರುಬಿಸಿಲಿನಿಂದ ತಲ್ಲಣ ದಿಲ್ಲಿಯಲ್ಲಿ 15 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಇಷ್ಟೊಂದು ವಿಳಂಬ

ನವ​ದೆ​ಹ​ಲಿ (ಜು.03): ದೇಶದ ಹಲವು ಭಾಗ​ಗ​ಳಲ್ಲಿ ಮುಂಗಾರು ಪ್ರವೇ​ಶ​ವಾ​ಗಿ​ದ್ದಾಗ್ಯೂ, ದಿಲ್ಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳ ಜನ ಬಿರುಬಿಸಿಲಿನಿಂದ ತಲ್ಲಣಗೊಂಡಿದ್ದಾರೆ. ದಿಲ್ಲಿಯಲ್ಲಿ 15 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಇಷ್ಟೊಂದು ವಿಳಂಬವಾಗಿದೆ.

ಈ ವರ್ಷವೂ ಸಾಮಾನ್ಯ ಮುಂಗಾರು: ಸ್ಕೈಮೆಟ್‌! ...

ಪಾಕಿಸ್ತಾನದಿಂದ ಬರುತ್ತಿರುವ ಬಿಸಿಗಾಳಿ ಹಾಗೂ ಉತ್ತರ ಭಾರತದಲ್ಲಿ ಮಳೆಗೆ ಪೂರಕ ವಾತಾವರಣ ಇಲ್ಲದಿರುವುದೇ ಇದಕ್ಕೆ ಈ ಭಾಗದಲ್ಲಿ ಉಷ್ಣತೆ ಹೆಚ್ಚಲು ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ರಾಜ್ಯದಲ್ಲಿ ವರುಣನ ಅಬ್ಬರ: ಡ್ಯಾಂಗಳಿಗೆ ಭಾರೀ ನೀರು ...

ವಿಶ್ವ​ದಲ್ಲೇ ಅತಿ​ಹೆಚ್ಚು ಜನ​ಸಂಖ್ಯೆ ಹೊಂದಿದ 2ನೇ ದೇಶ​ವಾದ ಭಾರ​ತ​ದಲ್ಲಿ 2010 ಈವ​ರೆಗೆ 6500 ಮಂದಿ ಬಿಸಿಗಾಳಿಗೆ ಬಲಿಯಾಗಿದ್ದಾರೆ.

ನವ​ದೆ​ಹಲಿ, ರಾಜ​ಸ್ಥಾನ ಮತ್ತು ಹರಾರ‍ಯಣ ರಾಜ್ಯ​ಗ​ಳಲ್ಲಿ ಸತತ 4ನೇ ದಿನ​ವಾದ ಶುಕ್ರ​ವಾರ 40 ಡಿಗ್ರಿ​ ಸೆಲ್ಸಿ​ಯ​ಸ್‌​ಗಿಂತ ಹೆಚ್ಚು ತಾಪ​ಮಾನ ದಾಖ​ಲಾ​ಗಿದೆ. ಇನ್ನು ಬಿಸಿ​ಲಿನ ಬೇಗೆಗೆ ಪಂಜಾಬ್‌, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯ​ಗಳು ಸಹ ತತ್ತರಿಸಿ ಹೋಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!